ಅ.23: ಮಿಶ್ಕಾತುನ್ನೂರ್ ವಿಮೆನ್ಸ್ ಶರೀಅತ್ ಕಾಲೇಜು ಸನದುದಾನ
ಮೆಲ್ಕಾರ್: ಸಮಸ್ತ ಕೇರಳ ಜಂಇಯ್ಯಯತುಲ್ ಉಲೇಮಾ ನೇತೃತ್ವದಲ್ಲಿ ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಮಂಡಳಿ ಯಿಂದ ನಡೆಸಲ್ಪಡುವ ಹೆಣ್ಣು ಮಕ್ಕಳ ಶೈಕ್ಷಣಿಕ ಫಾಳಿಲ ಕೋರ್ಸ್ ಮೂಲಕ ಕಾರ್ಯಾಚರಿಸುತ್ತಿರುವ ಮೆಲ್ಕಾರ್ನ ಮಿಷ್ಕಾತುನ್ನೂರ್ ವಿಮೆನ್ಸ್ ಶರೀಅತ್ ಕಾಲೇಜ್ನ ಪ್ರಥಮ ಸನದುದಾನ ಸಮ್ಮೇಳನವು ಅ.23ರಂದು ಬೆಳಗ್ಗೆ 8ಕ್ಕೆ ಆಲಡ್ಕದ ಎಸ್ಎಸ್ ಆಡಿಟೋರಿಯಂನಲ್ಲಿ ನಡೆಯಲಿದೆ.
ಬಿ.ಮುಹಮ್ಮದ್ ಹನೀಫ್ ಎಸ್.ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಹಾಜ್ ಬಿ.ಎಂ. ಬಾವಾ ಮದನಿ ಬಾಂಬಿಲ ಉದ್ಘಾಟಿಸುವರು. ಫೈನಾಝ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಸನದು ಪ್ರದಾನಿಸಲಿದ್ದಾರೆ.
ಸಮಸ್ತ ಮುಶಾವರ ಸದಸ್ಯ ಅಲ್ಹಾಜ್ ಉಸ್ಮಾನುಲ್ ಫೈಝಿ ತೋಡಾರ್ಮುಖ್ಯ ಭಾಷಣ ಮಾಡುವರು ಎಂದು ಅಬೂಬಕ್ಕರ್ ಸಿದ್ದೀಕ್ ಯಮಾನಿ ಕುಂತೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story