Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಅವ್ಯವಸ್ಥೆಯ ಆಗರವಾದ ಅಮೆಮ್ಮಾರ್ ಲೆವೆಲ್...

ಅವ್ಯವಸ್ಥೆಯ ಆಗರವಾದ ಅಮೆಮ್ಮಾರ್ ಲೆವೆಲ್ ಕ್ರಾಸ್ ಗೇಟ್

►30ನಿಮಿಷಕ್ಕೂ ಹೆಚ್ಚು ಸಮಯ ರೈಲ್ವೇ ಗೇಟ್ ಬಂದ್ ►ಶಾಲಾ ವಾಹನ, ತುರ್ತು ಸಂದರ್ಭ, ಕೆಲಸ ನಿಮಿತ್ತ ತೆರಳುವ ನಾಗರಿಕರಿಗೆ ಎದುರಾಗುವ ಸಂಕಷ್ಟ

ಖಾದರ್ ಫರಂಗಿಪೇಟೆಖಾದರ್ ಫರಂಗಿಪೇಟೆ18 Sept 2023 12:02 PM IST
share
ಅವ್ಯವಸ್ಥೆಯ ಆಗರವಾದ  ಅಮೆಮ್ಮಾರ್ ಲೆವೆಲ್ ಕ್ರಾಸ್ ಗೇಟ್

ಫರಂಗಿಪೇಟೆ: ರಾಷ್ಟ್ರೀಯ ಹೆದ್ದಾರಿಯ 200 ಮೀ ಅಂತರದಲ್ಲಿರುವ ಆಮೆಮ್ಮಾರ್, ಕೊಟ್ಟಿಂಜ, ಅಬ್ಬೆಟ್ಟು, ಮಲ್ಲೂರು, ಕೊಡ್ಮಾಣ್ ಇತ್ಯಾದಿ ಪ್ರದೇಶಗಳಿಗೆ ಸಂಚರಿಸುವ ರಸ್ತೆ ಮಧ್ಯೆ ಸಿಗುವ ಅಮೆಮ್ಮಾರ್ ರೈಲ್ವೇ ಲೆವೆಲ್ ಕ್ರಾಸ್ ಗೇಟ್ ಸಮಸ್ಯೆಯಿಂದ ಇಡೀ ಊರಿನ ನಾಗರಿಕರು ಸಂಕಷ್ಟ ಎದುರಿಸುವಂತಾಗಿದೆ.

ರೈಲ್ವೇ ಗೇಟ್ ಮಾಸ್ಟರ್ ಸೂಚನೆಯಂತೆ 30 ನಿಮಿಷಗಳಿಗಿಂತಲೂ ಅಧಿಕ ಸಮಯ ರೈಲ್ವೇ ಗೇಟ್ ಹಾಕಿ ಸಂಚಾರಕ್ಕೆ ನಿರ್ಬಂಧಿಸಲ್ಪಡುವ ಕಾರಣಗಳಿಂದ ಇಲ್ಲಿನ ಶಾಲಾ ವಾಹನ, ಕೆಲಸಕ್ಕೆ ತೆರಳುವ ಜನಸಾಮಾನ್ಯರು, ಅಗತ್ಯ ತುರ್ತು ಸಂದರ್ಭಗಳಲ್ಲಿ ಇತ್ಯಾದಿ ವಾಹನ ಸಂಚಾರಕ್ಕೆ ಸಂಕಷ್ಟ ಎದುರಿಸುವಂತಾಗಿದೆ

ನಾಗರಿಕರ ಸುರಕ್ಷಾ ಕ್ರಮಕ್ಕಾಗಿ ರೈಲ್ವೇ ಗೇಟ್ ಹಾಕಿದ ನಂತರ ಯಾವುದೇ ತುರ್ತು ಸಂದರ್ಭದಲ್ಲಿಯೂ ಗೇಟ್ ತೆರೆಯುವುದಕ್ಕೆ ರೈಲ್ವೇ ಇಲಾಖೆ ಅವಕಾಶ ಕಲ್ಪಿಸುವುದಿಲ್ಲ.

30ಕ್ಕಿಂತ ಹೆಚ್ಚು ನಿಮಿಷಗಳ ಕಾಲ ಗೇಟ್ ಹಾಕಿ ಸಂಚಾರಕ್ಕೆ ನಿರ್ಬಂಧಿಸುವುದರಿಂದ ಈ ಸಂದರ್ಭದಲ್ಲಿ ವೃತ್ತಿ ನಿರ್ವಹಿಸುವ ಆಟೋ ಚಾಲಕರು, ಶಾಲಾ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಕಾರ್ಮಿಕರು, ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ರೋಗಿಗಳು ಸಂಕಷ್ಟ ಎದುರಿಸುವಂತಾಗಿದೆ

ಈ ಲೆವೆಲ್ ಕ್ರಾಸ್ ಸಮೀಪ ಸಂಚಾರದಟ್ಟನೆ ಕಡಿಮೆ ಮಾಡಲು ರೈಲ್ವೇ ಇಲಾಖೆ ಅಂಡರ್ ಪಾಸ್ ವ್ಯವಸ್ಥೆಗೊಳಿಸಿದೆ ಆದರೆ ಅಂಡರ್ ಪಾಸ್ ಪಾಸ್ ಆದ ನಂತರ ಅಮೆಮ್ಮಾರ್ ಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಯೋಗ್ಯವಾಗಿಲ್ಲ ಮಾತ್ರವಲ್ಲ ಲೆವೆಲ್ ಕ್ರಾಸ್ ಸಮೀಪ ಕೂಡಾ ರಸ್ತೆ ಹದಗೆಟ್ಟು ನಾಗರಿಕ ಸಂಚಾರಕ್ಕೆ ತುಂಬಾ ತೊಡಕಾಗುತ್ತಿದೆ.

ರೈಲ್ವೇ ಇಲಾಖಾ ಅಧಿಕಾರಿಗಳು 173/200, ಎಲ್.ಟಿ 134 ನಂಬರಿನ ರೈಲ್ವೇ ಗೇಟ್ ನಲ್ಲಿ ಆಗುವ ಸಮಸ್ಯೆಗಳ ಬಗ್ಗೆ ತಕ್ಷಣ ಬಗೆಹರಿಸುವಂತೆ ನಾಗರಿಕರ ಅಭಿಪ್ರಾಯವಾಗಿದೆ.

ಈ ಭಾಗದ 173/200, ಎಲ್.ಟಿ 134 ರೈಲ್ವೇ ಗೇಟ್ ಅಭಿವೃದ್ಧಿಗೊಳಿಸುವುದಕ್ಕಾಗಿ ಮೇಲಧಿಕಾರಿಗೆ ಪ್ರಸ್ತಾವನೆ ಕಳಿಸಲಾಗಿದೆ. 19 ಕಿಮೀ ಅಂತರದಲ್ಲಿ ಜನ ಸಂಚಾರ ಇರುವ 3 ಗೇಟ್ ಹಾದು ಹೋಗುವಾಗ ನಾಗರಿಕ ಸಮಾಜದ ಸುರಕ್ಷತೆಗಾಗಿ ರೈಲು ನಿಗದಿತ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸುತ್ತದೆ ಈ ಕಾರಣದಿಂದ ರೈಲು ಗೇಟ್ ತೆರೆಯುವಾಗ ಹೆಚ್ಚಿನ ಸಮಯ ವ್ಯಯವಾಗುತ್ತದೆ ಸಾರ್ವಜನಿಕರು ಗೇಟ್ ಕೀಪರ್ ಜೊತೆ ತಗಾದೆ ತೆಗೆಯದೆ ಕಾನೂನು ಭದ್ದವಾಗಿ ವರ್ತಿಸಬೇಕಾಗಿದೆ ಶೀಘ್ರದಲ್ಲಿ ಈ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ಮೇಲಧಿಕಾರಿಗೆ ತಿಳಿಸುತ್ತೇನೆ

- ಸತ್ಯನಾರಾಯಣ

ರೈಲ್ವೇ ವಿಭಾಗದ ಹಿರಿಯ ಇಂಜಿನಿಯರ್


ಕ್ಷೇತ್ರ ಶಾಸಕರೂ ಮಾನ್ಯ ಸ್ಪೀಕರ್ ರವರಾದ ಯುಟಿ ಖಾದರ್ ಅವರ ಗಮನಕ್ಕೆ ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಲಾಗಿದ್ದು ಫರಂಗಿಪೇಟೆಯಿಂದ ದೇವಸ್ಥಾನ ದಾರಿಯಾಗಿ ಅಮೆಮ್ಮಾರ್ ಅಂಡರ್ ಪಾಸ್ ಮುಖಾಂತರ ಸಮರ್ಪಕವಾಗಿ ರಸ್ತೆ ಅಭಿವೃದ್ಧಿಗೊಳಿಸುವ ಭರವಸೆಯನ್ನು ಅವರು ನೀಡಿದ್ದಾರೆ. ಈ ರಸ್ತೆ ಅಭಿವೃದ್ಧಿಯಾದರೆ ಎಲ್ಲಾ ಸಮಸ್ಯೆಗೂ ಮುಕ್ತಿ ದೊರೆಯಲಿದೆ.

ಬಶೀರ್ ತಂಡೇಲ್

ಮಾಜಿ ಪಂಚಾಯತ್ ಸದಸ್ಯ, ಪುದು


ರೈಲ್ವೇ ಗೇಟ್ ಹಾಕಿ ತೆರೆಯುವ ಸಮಯ ಸುದೀರ್ಘವಾಗಿ ಇಲ್ಲಿನ ಜನಸಾಮಾನ್ಯರಿಗೆ ವಿವಿಧ ರೀತಿಯಲ್ಲಿ ಸಂಚಾರಕ್ಕೆ ತೊಡಕಾಗುತ್ತಿದೆ, ರೈಲ್ವೇ ಇಲಾಖೆ ಈ ಭಾಗದಲ್ಲಿ ಅಂಡರ್ ಪಾಸ್ ವ್ಯವಸ್ಥೆಗೊಳಿಸಿದ್ದು ಇದು ಕೂಡಾ ಸಂಚಾರಕ್ಕೆ ಸಮರ್ಪಕವಾಗಿಲ್ಲ ಈ ಎಲ್ಲಾ ಅವ್ಯವಸ್ಥೆಗಳನ್ನು ರೈಲ್ವೇ ಇಲಾಖೆ ಪರಿಶೀಲನೆ ನಡೆಸಿ ನಾಗರಿಕ ಸಮಾಜಕ್ಕೆ ಸಂಚಾರಕ್ಕೆ ಸೂಕ್ತ ವ್ಯವಸ್ಥೆಗೊಳಿಸಬೇಕಾಗಿದೆ

- ಮುಹಮ್ಮದ್ ಶಾಫಿ ಲೀಡರ್

ಪುದು ಗ್ರಾಮ ಪಂಚಾಯತ್ ಸದಸ್ಯ

share
ಖಾದರ್ ಫರಂಗಿಪೇಟೆ
ಖಾದರ್ ಫರಂಗಿಪೇಟೆ
Next Story
X