ಮಂಗಳೂರು: ತಾಯಿ-ಮಗ ನಾಪತ್ತೆ
ಮಂಗಳೂರು, ಆ.19: ನಗರದ ಅತ್ತಾವರ ನಂದಿಗುಡ್ಡೆ ರಸ್ತೆಯ ನಿವಾಸಿ ಆರ್. ಶಾಂತಾ ರೆಡ್ಡಿ (41) ಮತ್ತವರ ಪುತ್ರ ಕೀರ್ತನ್ ರಾಜ್ (12) ಎಂಬವರ ಮೇ 15ರಂದು ಮಧ್ಯಾಹ್ನ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ.
ಕೀರ್ತನ್ ರಾಜ್ ಅತ್ತಾವರದ ಖಾಸಗಿ ಶಾಲೆಯಲ್ಲಿ 7ನೆ ತರಗತಿಯಲ್ಲಿ ಕಲಿಯುತ್ತಿದ್ದರು ಎನ್ನಲಾಗಿದೆ.
ತೆಲುಗು, ತಮಿಳು, ಹಿಂದಿ, ಕನ್ನಡ ಭಾಷೆ ಮಾತನಾಡುವ ಇವರ ಬಗ್ಗೆ ಮಾಹಿತಿ ದೊರೆತವರು ಪಾಂಡೇಶ್ವರ ಠಾಣೆ (0824-2220518)ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
Next Story