ಸುಳ್ಯ: ಬೈಕ್, ಮೊಬೈಲ್ ಕಳವು; ಪ್ರಕರಣ ದಾಖಲು
ಸುಳ್ಯ: ಕೆಲಸ ಕೇಳಿಕೊಂಡು ಬಂದಾತ ಮೊಬೈಲ್, ಬೈಕ್ ಕಳವು ಮಾಡಿ ಪರಾರಿಯಾಗಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಬರಾಯ ನಿವಾಸಿ ರಿಯಾಝ್ ಎಂಬವರು ಸುಳ್ಯ ಠಾಣೆಗೆ ದೂರು ನೀಡಿದ್ದಾರೆ.
ರಿಯಾಝ್ ಅವರು ಅರಂತೋಡಿನ ಹೋಟೆಲ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಅವರಲ್ಲಿಗೆ ಅವರ ಪರಿಚಯದ ಹರ್ಷಿಕೇಶ್ ಯಾನೆ ಅನುತೇಶ್ ಎಂಬಾತ ಕೆಲಸ ಕೇಳಿದ್ದು, ಅದರಂತೆ ಆತನನ್ನು ರಿಯಾಝ್ ಹೋಟೆಲ್ಗೆ ಕರೆದುಕೊಂಡು ಹೋಗಿದ್ದು, ಮಧ್ಯಾಹ್ನ ರಿಯಾಝ್ ಅವರು ವಿಶ್ರಾಂತಿ ಪಡೆದು ಎದ್ದು ನೋಡಿದಾಗ ಹರ್ಷಿಕೇಶ್ ರೂಂನಲ್ಲಿ ಕಾಣಿಸದೇ ಇದ್ದು, ಜತೆಗೆ ರಿಯಾಝ್ ಅವರ ಮೊಬೈಲ್ (14 ಸಾವಿರ ರೂ. ಮೌಲ್ಯ) ಹಾಗೂ ಬೈಕ್ ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಸುಳ್ಯ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story