ಚುನಾವಣೆ ದಿನದಂದು ವಿದೇಶ ಪ್ರಯಾಣಗಳನ್ನು ಮುಂದೂಡಿ: ಸಮಸ್ತ ಜಂಇಯ್ಯತುಲ್ ಖುತ್ಬಾ ಕರೆ
ಮಂಗಳೂರು: ಮುಂದಿನ ಲೋಕಸಭಾ ಚುನಾವಣೆಯು ಪ್ರಜಾಪ್ರಭುತ್ವಕ್ಕೆ ಸವಾಲಾಗಿದೆ. ದೇಶದ ಸಾಮಾಜಿಕ, ರಾಜಕೀಯ ಪರಿಸ್ಥಿತಿಯು ತೀವ್ರವಾಗಿ ಹದಗೆಟ್ಟಿರುವ ಸಂದರ್ಭ ತುಂಬಾ ನಿರ್ಣಾಯಕವಾದ ಚುನಾವಣೆಯನ್ನು ದೇಶವು ಎದುರಿಸುತ್ತಿದೆ. ಈ ಹಂತದಲ್ಲಿ ಜವಾಬ್ದಾರಿಯುತ ಸರ್ವ ನಾಗರಿಕರೂ ಪ್ರಬುದ್ಧತೆಯಿಂದ ಮತ ಚಲಾಯಿಸಬೇಕಿದೆ. ಹಾಗಾಗಿ ಚುನಾವಣೆ ದಿನದಂದು ವಿದೇಶ ಪ್ರಯಾಣ, ಇತ್ಯಾದಿಗಳನ್ನು ಮುಂದೂಡುವಂತೆ ದ.ಕ.ಜಿಲ್ಲಾ ಸಮಸ್ತ ಜಂಇಯ್ಯತುಲ್ ಖುತ್ಬಾ ಕರೆ ನೀಡಿದೆ.
ವಿದ್ಯಾರ್ಥಿಗಳ ರಜಾ ಕಾಲವೂ ಆಗಿರುವುದರಿಂದ ಮತ ಚಲಾಯಿಸಲು ಅಲಭ್ಯವಾಗುವ ರೀತಿಯಲ್ಲಿ ವಿದೇಶ ಪ್ರಯಾಣ, ಇತರ ಯಾತ್ರೆಗಳನ್ನು ಕೈಗೊಳ್ಳದೆ ಜವಾಬ್ದಾರಿಯಿಂದ ವರ್ತಿಸಬೇಕು. ಪ್ರತಿಯೊಂದು ಮೊಹಲ್ಲಾಗಲೂ ಶೇ.100 ಪೋಲಿಂಗ್ ಹೊಂದುವ ಗುರಿ ಸ್ವೀಕರಿಸಿ ದೇಶದ ಪ್ರಜಾಪ್ರಭುತ್ವದ ಉತ್ಸವದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಈ ಬಗ್ಗೆ ಪ್ರತೀ ಮೊಹಲ್ಲಾಗಳಲ್ಲಿ ಖತೀಬರು ಜಾಗೃತಿ ಮೂಡಿಸಬೇಕು ಎಂದು ಜಂ ಇಯ್ಯತುಲ್ ಖುತ್ಬಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ರಹ್ಮಾನಿ ಮನವಿ ಮಾಡಿದ್ದಾರೆ.