ಜಿ.ಎಚ್.ಎಂ ಫೌಂಡೇಷನ್ ಇದರ ವತಿಯಿಂದ ʼಬೈತುಲ್ಹುದಾʼ ನೂತನ ಮನೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ
ಬಂಟ್ವಾಳ : ಮೂಲರಪಟ್ಣ ಜಿ.ಎಚ್.ಎಂ ಫೌಂಡೇಷನ್ ವತಿಯಿಂದ ಬೈತುಲ್ಹುದಾ ಏಳನೆ ಯೋಜನೆಯಾಗಿ ನಿರ್ಮಾಣ ಗೊಳ್ಳುತ್ತಿರುವ ನೂತನ ಮನೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ಮೂಲರಪಟ್ಣದ ಆಝಾದ್ ನಗರದಲ್ಲಿ ನಡೆಯಿತು.
ಮೂಲರಪಟ್ಣ ಮುಹಿಯುದ್ದೀನ್ ಜುಮ್ಮಾ ಮಸೀದಿ ಖತೀಬ್ ಮೊಹಮ್ಮದ್ ಶೆರೀಫ್ ದಾರಿಮಿ ದುವಾಃ ನೆರವೇರಿಸಿ ನೂತನ ಮನೆಗೆ ಶಂಕು ಸ್ಥಾಪನೆ ನೆರವೇರಿಸಿದರು. ಮಾಜಿ ಖತೀಬ್ ಅಬ್ದುಲ್ ಖಾದರ್ ಮದನಿ ಉಪಸ್ಥಿತರಿದ್ದರು.
ಈ ಸಂದರ್ಭ ವಿಶೇಷ ಆಹ್ವಾನಿತರಾಗಿದ್ದ ರಫೀಕ್ ಮಾಸ್ಟರ್ ಮಾತನಾಡಿ ಜಿ.ಎಚ್.ಎಂ ಫೌಂಡೇಷನ್ ಆರಂಭದಿಂದ ಇಂದಿನವರೆಗೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಫೌಂಡೇಷನ್ ಏಳು ಯೋಜನೆ ಗಳನ್ನು ಹಮ್ಮಿಕೊಂಡಿದ್ದು ಅವುಗಳ ಪೈಕಿ 3 ಮನೆಗಳನ್ನು ಈಗಾಗಲೇ ಪೂರೈಸಿದ್ದು ನಾಲ್ಕನೇ ಮನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. 3 ಹಳೆಯ ಮನೆಗಳನ್ನು ನವೀಕರಿಸಿ ಹೊಸ ರೂಪ ಕೊಡಲಾಗಿದೆ. ಜಿ.ಎಚ್.ಎಂ ಫೌಂಡೇಷನ್ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವುದು, ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಹಕಾರ, ಸ್ಥಳೀಯ ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಆರಂಭ ಮೊದಲಾದ ಶಿಕ್ಷಣಕ್ಕೆ ಪ್ರೇರಣೆ ನೀಡುವ ಕೆಲಸವನ್ನು ನಡೆಸಿ ಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫೌಂಡೇಷನ್ ಅಧ್ಯಕ್ಷ ಮೊಹಮ್ಮದ್ ಶಾಲಿ ಸಂಸ್ಥೆಯ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.
ಉದ್ಯಮಿಗಳಾದ ಅಬ್ದುಲ್ ಸಲಾಂ, ಅಬ್ದುಲ್ ರಝಾಕ್ ಸಚ್ಚರಿಪೇಟೆ, ರಿಯಾಝ್ ಕುಪ್ಪೆಪದವು, ಫೌಂಡೇಶನ್ನ ಕಾರ್ಯಕ್ರಮ ಮುಖ್ಯಸ್ಥ ಎಮ್.ಬಿ.ಇಸ್ಮಾಯಿಲ್ ಶಾಫಿ ಮೂಲರಪಟ್ಣ, ಸ್ಥಾಪಕಧ್ಯಕ್ಷ ಹಂಝ ಗುತ್ತು , ಗೌರವ ಸಲಹೆಗಾರ ಝಕರಿಯಾ ಫರ್ವೀಝ್ , ಗಲ್ಪ್ ಪ್ರಮುಖರಾದ ಮೊಹಮ್ಮದ್ ಕಬೀರ್, ಉಬೈದುಲ್ಲಾ ಅಜಾದ್ ನಗರ, ನಿಝಾಮ್ ವಾರಟೀಲು, ಇರ್ಷಾದ್ ವಾರಟೀಲು, ಸದಸ್ಯರಾದ ಮೊಹಮ್ಮದ್ ತೌಹೀದ್ ಎಮ್.ಬಿ, ಮುನೀರ್ ಅಜಾದ್ ನಗರ, ರಶೀದ್ ಕಾಜಿಗುಳಿ, ಶಾರೂಕ್ ಎಮ್.ಬಿ, ರಶೀದ್ ರೋಯಲ್, ಮುಸ್ತಪ ಹಿತ್ತಿಲು, ಬದ್ರುಲ್ ಕಮಲ್, ನಿಸಾರ್ ಏ.ಜಿ, ರಶೀದ್ ಎಮ್.ಬಿ, ಶಾಕೀರ್ ವಾರಟೀಲು ದಾರುಲ್ ಮೂಲರಪಟ್ಣ ಉಲೂಮ್ ಮದ್ರಸ ಅಧ್ಯಕ್ಷ ನಾಸಿರ್ ಎಮ್ ಪಿ, ಅಲ್ ಮದ್ರಸತುಲ್ ಮುಳರ್ರಿಯ್ಯಾ ತಾರೆಮಾರ್ ಅಧ್ಯಕ್ಷ ಮೊಹಮ್ಮದ್ ಯೂಸುಫ್, ಶಿಬಿಯಾನ್ ಮದ್ರಸ ವಾರಟೀಲು ಅಧ್ಯಕ್ಷ ಅಬ್ಬು ವಾರಟೀಲು, ಮೊಹಿಯುದ್ದೀನ್ ಜುಮಾ ಮಸೀದಿ ಕಾರ್ಯದರ್ಶಿ ಶಿಹಾಬುದ್ದೀನ್ ಎಚ್, ಎಸ್ಕೆಎಸ್ಎಸ್ಎಫ್ ಅಝಾದ್ನಗರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಎಸ್ಕೆಎಸ್ಎಸ್ಎಫ್ ಮೂಲರ ಪಟ್ಣ ಘಟಕದ ಅಧ್ಯಕ್ಷ ಹೈದರ್ ಎಮ್.ಎಸ್, ಇಬ್ರಾಹಿಂ ಗುತ್ತು, ಅಝಾದ್ ಲಯನ್ಸ್ ಹೆಲ್ಪ್ ಲೈನ್ ಅಧ್ಯಕ್ಷ ಅಶ್ರಫ್ ಎಂ.ಎ ಹಿರಿಯರಾದ ಇಬ್ರಾಹಿಂ ಅಝಾದ್ ನಗರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಳಿಕ ಮೂಲರಪಟ್ಣ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯೂಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪೋಷಕರಿಗೆ ಮಾಹಿತಿ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ರಫೀಕ್ ಮಾಸ್ಟರ್ ಕಾರ್ಯಗಾರ ನಡೆಸಿಕೊಟ್ಟರು. ಆಜಾದ್ ಮಾದರಿ ಶಾಲೆಯ ಪ್ರಾಂಶುಪಾಲೆ ಸುಪ್ರಿತಾ, ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾಹಿನಾ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸಜೀವುದ್ದೀನ್ ಎಮ್.ಎಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.