ಕುದ್ರೋಳಿ: ರಕ್ತದಾನ ಶಿಬಿರ
ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಹಾಗೂ KMC ಆಸ್ಪತ್ರೆ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇದರ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ಬ್ರಹತ್ ರಕ್ತದಾನ ಶಿಬಿರ ಕಾರ್ಯಕ್ರಮವು ಸಂಸ್ಥೆಯ ಅಧ್ಯಕ್ಷ ಯಾಸೀನ್ ಕುದ್ರೋಳಿ ಅಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯಕ್ರಮವು ಕಿರಾಅತ್ ಮುಖಾಂತರ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಭಾಗವಹಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಪದ್ಮರಾಜ್ ರಾಮಯ್ಯ, ರಿಯಾಝ್ ಕಡಂಬು, ಜಗದೀಶ್ ಬೋಲೂರು, ಮುಹಮ್ಮದ್ ಇಸ್ಹಾಕ್ ಪುತ್ತೂರು, ನಾಸಿರ್ ಹೈಕೋ, ಹಾಜೀ ಇಸ್ಮಾಯಿಲ್ ಡೀಲಕ್ಸ್, ಪಿ.ಪಿ ಅಬ್ದುಲ್ ಅಝೀಝ್, ಹಾಜಿ ಶಂಸುದ್ದೀನ್ ಕುದ್ರೋಳಿ, ಬಶೀರ್ ಅಮ್ಹದ್ ಶಾಲಿಮಾರ್, ಲತೀಫ್ ಕಂದಕ್, ಸುನೀಲ್ ಕುಮಾರ್ ಬಜಿಲ್ ಕೆರಿ, ಕೆ ಅಶ್ರಫ್, ಝೀನತ್ ಶಂಸುದ್ದೀನ್, ಶರೀಫ್ ವೈಟ್ ಸ್ಟೋನ್, ಮಂಜುಲಾ ನಾಯ್ಕ್ , ಅಶೋಕ್ ಕುಮಾರ್, ಲಕ್ಷ್ಮಣ್ ಕುಂದರ್ ಅತಿಥಿಯಾಗಿ ಭಾಗವಹಿಸಿದರು.
ಸಂಸ್ಥೆಯ ಸದಸ್ಯರುಗಳಾದ ಮಕ್ಬೂಲ್ ಅಹ್ಮದ್ ಜಾಮಿಯಾ, ಅಝೀಝ್ ಕುದ್ರೋಳಿ, ಲತೀಫ್ ಕ್ರಿಸ್ಟಲ್, ಅಶ್ರಫ್ ಮಾಸ್, ಇಸ್ಮಾಯಿಲ್ ಬಿ ಎ, ಮೊಹಮ್ಮದ್ ಹಾರಿಸ್, ವಹಾಬ್ ಕುದ್ರೋಳಿ, ಮುಸ್ತಾಕ್ ಅಹ್ಮದ್ ,ಮಕ್ಬೂಲ್ ಜಮಾಅತ್, ಕೆ.ಕೆ ಲತೀಫ್, ಮುಝೈರ್ ಅಹ್ಮದ್,ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಹಾಜಿ ಬಿ ಅಬೂಬಕ್ಕರ್ ಸ್ವಾಗತಿಸಿ. ಬಿ.ಎ ಮೊಹಮ್ಮದ್ ಅಲಿ ನಿರೂಪಿಸಿದರು, ಎನ್ ಕೆ ಅಬೂಬಕ್ಕರ್ ವಂದಿಸಿದರು.