ಮಂಗಳೂರು: ಕಾರು ಢಿಕ್ಕಿ; ದ್ವಿಚಕ್ರ ವಾಹನ ಸವಾರ ಮೃತ್ಯು
ಮಂಗಳೂರು: ಸ್ಕೂಟರ್ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಮಾರ್ನಮಿಕಟ್ಟೆಯಲ್ಲಿ ಶುಕ್ರವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಸಚಿನ್ (29) ಮೃತಪಟ್ಟ ಸ್ಕೂಟರ್ ಸವಾರ. ಸಹಸವಾರ ನಿರೀಕ್ಷ (14) ಎಂಬವರಿಗೆ ಗಾಯವಾಗಿದೆ.
ಶುಕ್ರವಾರ ರಾತ್ರಿ ಸಚಿನ್ ಮತ್ತು ನಿರೀಕ್ಷ ಎಂಬವರು ಸ್ಕೂಟರ್ನಲ್ಲಿ ಶಕ್ತಿನಗರದಿಂದ ಮಂಗಳಾದೇವಿ ಕಡೆಗೆ ಹೋಗುತ್ತಿ ದ್ದಾಗ ಮಾರ್ನಮಿಕಟ್ಟೆಯ ಅಂಚೆ ಕಚೇರಿ ಸಮೀಪ ತಲುಪುತ್ತಿದ್ದಂತೆ ಎದುರುಗಡೆಯಿಂದ ಬಂದ ಕಾರೊಂದನ್ನು ಅದರ ಚಾಲಕನು ಅತಿವೇಗ ನಿರ್ಲಕ್ಷ್ಯತನದಿಂದ ಚಲಾಯಿಸಿ ಬಂದು ಸ್ಕೂಟರಿಗೆ ಢಿಕ್ಕಿ ಹೊಡೆದು ಪರಾರಿಯಾದ ಎನ್ನಲಾಗಿದೆ.
ಸ್ಕೂಟರ್ ಸವಾರರಾದ ಸಚಿನ್ ಹಾಗೂ ಹಿಂಬದಿ ಸವಾರ ನಿರೀಕ್ಷ ರಸ್ತೆಗೆ ಬಿದ್ದು ಗಾಯಗೊಂಡಾಗ ಸಾರ್ವಜನಿಕರು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಸ್ಕೂಟರ್ ಸವಾರ ಸಚಿನ್ ಮೃತಪಟ್ಟಿದ್ದು, ಸಹಸವಾರ ನಿರೀಕ್ಷರಿಗೆ ಎಡ ಭುಜಕ್ಕೆ ಗಾಯವಾಗಿದೆ. ಕಾರು ಚಾಲಕ ತನ್ನ ಕಾರನ್ನು ನಿಲ್ಲಿಸದೆ ಪರಾರಿಯಾಗಿರುವುದಾಗಿ ನಿರೀಕ್ಷ ಅವರ ತಂದೆ ಅನೂಪ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.