ಪಾಲ್ದನೆ ಚರ್ಚ್ಗೆ ಐಜ್ವಾಲ್ ಧರ್ಮಪ್ರಾಂತ್ಯದ ಬಿಷಪ್ ಭೇಟಿ
ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೇಸಾ ಚರ್ಚ್ಗೆ ಉತ್ತರ ಭಾರತದ ಐಜ್ವಾಲ್ ಧರ್ಮಪ್ರಾಂತ್ಯದ ಬಿಷಪ್ ವಂ.ಡಾ. ಜೋಕಿಮ್ ವಾಲ್ಡರ್ ರವಿವಾರ ಭೇಟಿ ನೀಡಿದರು.
ಬೆಳಗ್ಗೆ ದಿವ್ಯ ಬಲಿಪೂಜೆ ನೆರವೇರಿಸಿ ಬಳಿಕ ಆಶೀರ್ವಚನ ನೀಡಿದರು. ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಗುರು ವಂ.ರೋಶನ್ ಪಿಂಟೊ, ಪಾಲ್ದನೆ ಚರ್ಚ್ನ ಧರ್ಮಗುರು ವಂ. ಅಲ್ಬನ್ ಡಿ ಸೋಜ ದಿವ್ಯಬಲಿಪೂಜೆ ನೆರವೇರಿಸಲು ಬಿಷಪ್ ವಂ.ಡಾ. ಜೋಕಿಮ್ ವಾಲ್ಡರ್ ಅವರಿಗ ಸಾಥ್ ನೀಡಿದರು.
ಚರ್ಚ್ ಆಡಳಿತ ಸಮಿತಿಯ ಉಪಾಧ್ಯಕ್ಷ ಇಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೆೆರೊ, ಆಯೋಗದ ಸಂಯೋಜಕ ಜೋಸೆಲಿನ್ ಲೋಬೊ ಮತ್ತು ಹೆಲನ್ ಲೋಬೊ ಉಪಸ್ಥಿತರಿದ್ದರು.
Next Story