ಉತ್ತರ ಪ್ರದೇಶ | ಮೊಸಳೆಯನ್ನು ರಕ್ಷಿಸಲು ಅರಣ್ಯ ಇಲಾಖೆಯಿಂದ ಜೆಸಿಬಿ ಬಳಕೆ: ವ್ಯಾಪಕ ಟೀಕೆ

Screengrab: X/@bstvlive
ಲಕ್ನೋ : ಉತ್ತರ ಪ್ರದೇಶದ ಲಲಿತ್ಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಮೊಸಳೆಯನ್ನು ರಕ್ಷಿಸಿರುವ ವೀಡಿಯೊ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಉತ್ತರಪ್ರದೇಶದ ಜಖ್ಲೋನ್ ಪೊಲೀಸ್ ಠಾಣೆ ವ್ಯಾಪ್ತಿಯ ಲಲಿತ್ಪುರ ಗ್ರಾಮದಲ್ಲಿ 12 ಅಡಿ ಉದ್ದ ಮತ್ತು 2 ಕ್ವಿಂಟಾಲ್ ತೂಕದ ಮೊಸಳೆಯೊಂದು ಗೋಧಿ ಹೊಲದಲ್ಲಿ ಕಂಡು ಬಂದಿದೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಜೆಸಿಬಿ ಜೊತೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಗ್ಗದಿಂದ ಮೊಸಳೆಯನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಿಲ್ಲ. ಕೊನೆಗೆ ಜೆಸಿಬಿ ಬಳಸಿ ಬೃಹತ್ ಮೊಸಳೆಯನ್ನು ಒಂದೇ ಯತ್ನದಲ್ಲಿ ಟ್ರ್ಯಾಕ್ಟರ್ಗೆ ಎಸೆಯಲಾಗಿದೆ. ಈ ವೇಳೆ ಮೊಸಳೆಗೆ ಗಾಯವಾಗಿದೆ. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಇದರ ಬೆನ್ನಲೇ ಅರಣ್ಯ ಇಲಾಖೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವನ್ಯ ಜೀವಿಗಳನ್ನು ರಕ್ಷಣೆ ಮಾಡುವ ಕ್ರಮ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿದಿಲ್ವ ಎಂದು ಹಲವರು ಪ್ರಶ್ನಿಸಿದ್ದಾರೆ.
ललितपुर: जेसीबी के पंजों से उठाया गया मगरमच्छ, वन विभाग की लापरवाही पर आक्रोश
— भारत समाचार | Bharat Samachar (@bstvlive) March 18, 2025
जेसीबी के नुकीले पंजों से उठाने से मगरमच्छ की जान को खतरा
⚠️ वन विभाग की लापरवाही से लोगों में गुस्सा
संवेदनशील तरीके से रेस्क्यू करने की मांग#Lalitpur #CrocodileRescue… pic.twitter.com/kTftoCZDpu