ಎ.12: ಉಪ ಮುಖ್ಯಮಂತ್ರಿ ಡಿಕೆಶಿ ದ.ಕ. ಜಿಲ್ಲೆಗೆ ಭೇಟಿ
Update: 2025-04-11 23:08 IST

ಮಂಗಳೂರು, ಎ.11: ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎ.12ರಂದು ದ.ಕ.ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಸಂಜೆ 5:30ಕ್ಕೆ ಗುರುಪುರ ಮಾಣಿಬೆಟ್ಟು ಗುತ್ತು ದ್ವಿತೀಯ ವರ್ಷದ ಹೊನಲು ಬೆಳಕಿನ ಗುರುಪುರ ಕಂಬಳ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 9:30ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.