ಎ.18 ರಂದು ವಕ್ಫ್ ತಿದ್ದುಪಡಿ ಖಂಡಿಸಿ ಪ್ರತಿಭಟನೆ: ಸುಳ್ಯ ಮುಸ್ಲಿಂ ಒಕ್ಕೂಟದಿಂದ ಬೆಂಬಲ
Update: 2025-04-16 19:13 IST

ಳ್ಯ: ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಉಭಯ ಖಾಝಿಯವರ ಮುಂದಾಳತ್ವದಲ್ಲಿ ಎಪ್ರಿಲ್ 18 ರಂದು ಅಡ್ಯಾರಿನಲ್ಲಿ ನಡೆಯಲಿರುವ ಪ್ರತಿಭಟನೆಗೆ ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟ ಬೆಂಬಲ ಸೂಚಿಸಿದೆ.
ಈ ಬೃಹತ್ ಪ್ರತಿಭಟನಾ ಸಭೆಗೆ ಸುಳ್ಯ ತಾಲೂಕಿನ ಮುಸ್ಲಿಮ್ ಸಮುದಾಯದ ಪ್ರತಿಯೊಬ್ಬರೂ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟದ ಸಂಚಾಲಕರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ ಹಾಗೂ ಸಹ ಸಂಚಾಲಕರಾದ ಉಮ್ಮರ್ ಕೆ.ಎಸ್.ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.