ಸೇತುವೆ ಸಂಚಾರ ನಿರ್ಬಂಧ ತೆರವು| ತಾಂತ್ರಿಕ ಪರಿಶೀಲನೆ ಬಳಿಕ ನಿರ್ಧಾರ: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್

Update: 2024-08-18 16:50 GMT

ಮಂಗಳೂರು: ಪೊಳಲಿ ಮತ್ತು ಉಳಾಯಿಬೆಟ್ಟು ಸೇತುವೆ ಹಾಗೂ ದೇರಳಕಟ್ಟೆ ರೆಂಜಾಡಿ ರಸ್ತೆಯ ಉನ್ನತ ತಾಂತ್ರಿಕ ಪರಿಶೀಲನೆಗೆ ಸೋಮವಾರ ತಜ್ಞರ ತಂಡ ಆಗಮಿಸಲಿದೆ.

ಈಗಾಗಲೇ ಈ ರಸ್ತೆ ಮತ್ತು ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ನಿಬ೯ಂಧ ಹೇರಲಾಗಿದೆ. ಲಘು ವಾಹನ ಮತ್ತು ಬಸ್ಸುಗಳ ಓಡಾಟಕ್ಕೆ ಅವಕಾಶ ನೀಡಬೇಕೆಂದು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್, ಬಸ್ಸು ಮಾಲೀಕರು, ಸ್ಥಳೀಯ ಸಂಘ ಸಂಸ್ಥೆಗಳ ಸಾರ್ವಜನಿಕರು ಆಗ್ರಹಿಸಿದ್ದರು.

ಈ ನಿಟ್ಟಿನಲ್ಲಿ ಸೋಮವಾರ ತಾಂತ್ರಿಕ ತಜ್ಞರು ಸೇತುವೆಯನ್ನು ಯಂತ್ರೋಪಕರಣಗಳೊಂದಿಗೆ ಪರಿಶೀಲಿಸಿ ವರದಿ ನೀಡಲಿದ್ದಾರೆ. ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್ ಎಂ.ಪಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News