ಗುರುಪುರ ಅಡ್ಡೂರು ಸೇತುವೆಯಲ್ಲಿ ಸಂಚಾರ ಮಾರ್ಗ ಬದಲಾವಣೆ

Update: 2024-08-16 15:27 GMT

ಮಂಗಳೂರು : ಸುರತ್ಕಲ್-ಕಬಕ ರಾಜ್ಯ ಹೆದ್ದಾರಿ 101ರ ಕಿ.ಮೀ 29.35ರಲ್ಲಿನ ಗುರುಪುರ ಅಡ್ಡೂರು ಸೇತುವೆಯು ದುಸ್ಥಿತಿಯಲ್ಲಿದೆ. ವಾಹನ ಸಂಚಾರಕ್ಕೆ ಅಪಾಯಕಾರಿಯೂ ಆಗಿದೆ. ಹಾಗಾಗಿ ಮುಂದಿನ ಆದೇಶದವರೆಗೆ ಈ ಸೇತುವೆ ಯಲ್ಲಿ ಘನ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಅಲ್ಲದೆ ಸಂಚಾರ ಮಾರ್ಗ ಬದಲಾವಣೆ ಮಾಡಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಆದೇಶಿಸಿದ್ದಾರೆ.

ಈ ಸೇತುವೆಯಾಗಿ ಬಿಸಿ.ರೋಡ್-ಪೊಳಲಿ-ಬೆಂಗಳೂರಿಗೆ ಸಂಚರಿಸುವ ಘನ ವಾಹನಗಳು ಬದಲಿ ರಸ್ತೆಯನ್ನು ಬಳಸಿಕೊಂಡು ಸಂಚರಿಸಬೇಕು.

ಮಂಗಳೂರು-ಗುರುಪುರ ಕೈಕಂಬ ಕಡೆಯಿಂದ ಪೊಳಲಿ ಕಡೆಗೆ ಸಂಚರಿಸುವ ವಾಹನಗಳು ಮಂಗಳೂರು- ಸೋಲಾಪುರ್ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಬೈತುರ್ಲಿ ಬಸ್‌ಸ್ಟಾಪ್‌ನಿಂದ ಬೈತುರ್ಲಿ-ನೀರುಮಾರ್ಗ-ಕಲ್ಪನೆ-ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಕಲ್ಪನೆ ಜಂಕ್ಷನ್‌ಗೆ ಬಂದು ಸುರತ್ಕಲ್-ಕಬಕ ರಾಜ್ಯ ಹೆದ್ದಾರಿ 101ನ್ನು ಸಂಪರ್ಕಿಸಿ ಪೊಳಲಿ ಹಾಗೂ ಬಿಸಿ.ರೋಡ್‌ನ ಎನ್‌ಎಚ್‌ಗೆ ಸಂಚರಿಸಬೇಕು.

ಬಿಸಿ.ರೋಡ್-ಪೊಳಲಿ ಕಡೆಯಿಂದ ಮಂಗಳೂರು-ಗುರುಪುರ ಕೈಕಂಬ ಕಡೆಗೆ ಸಂಚರಿಸುವ ವಾಹನಗಳು ಸುರತ್ಕಲ್-ಕಬಕ ರಾಜ್ಯ ಹೆದ್ದಾರಿ 101ರ ಕಲ್ಪನೆ-ನೀರುಮಾರ್ಗ-ಬೈತುರ್ಲಿ ಜಿಲ್ಲಾ ಮುಖ್ಯ ರಸ್ತೆಯ ಕಲ್ಪನೆ ರಸ್ತೆಯ ಮೂಲಕ ಬೈತುರ್ಲಿ ಬಸ್‌ಸ್ಟಾಪ್ ಎಂಬಲ್ಲಿ ಮಂಗಳೂರು-ಸೋಲಾಪುರ್-ರಾಷ್ಟ್ರೀಯ ಹೆದ್ದಾರಿ 169ನ್ನು ಸಂಪರ್ಕಿಸಿ ಮಂಗಳೂರು ಗುರುಪುರ ಕೈಕಂಬ ಕಡೆಗೆ ಸಂಚರಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News