ಮಂಗಳೂರು: ಬಡ ಕುಟುಂಬಕ್ಕೆ ಮನೆ ಹಸ್ತಾಂತರ

Update: 2024-09-19 18:00 GMT

ಮಂಗಳೂರು: ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಮನೆಯಲ್ಲಿ ವಾಸಿಸುತ್ತಿದ್ದ ಕಡು ಬಡ ಕುಟುಂಬಕ್ಕೆ ಬೈಕಂಪಾಡಿ ಅಂಗರ ಗುಂಡಿಯಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರು ಹೊಸದಾಗಿ ನಿರ್ಮಿಸಿಕೊಟ್ಟ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮನೆಯನ್ನು ಬಡ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡವರ ಕಣ್ಣೀರೊರೆಸುವ ಕಾರ್ಯ ಪುಣ್ಯದಾಯಕವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಬಡವರಿಗೆ ಸ್ವಂತ ಮನೆಯ ನಿರ್ಮಾಣ ಕನಸು ನನಸು ಮಾಡುವುದು ಸುಲಭ ಕಾರ್ಯವಲ್ಲ. ಈ ನಿಟ್ಟಿನಲ್ಲಿ ನಾಸಿರ್ ಲಕ್ಕಿಸ್ಟಾರ್ ಅವರ ಸೇವಾ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಈ ಸಂದರ್ಭ ದಾನಿ ನಾಸಿರ್ ಲಕ್ಕಿಸ್ಟಾರ್ , ಬೈಕಂಪಾಡಿ ಮಸೀದಿ ಖತೀಬ್ ಯಾಕುಬ್ ಮದನಿ, ಉದ್ಯಮಿ ಅಸ್ಗರ್ ಆಲಿ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಬದ್ರಿಯಾ ಕಮಿಟಿಯ ಅಧ್ಯಕ್ಷ ಹಾಗೂ ವಕೀಲ ಮುಖ್ತಾರ್ ಅಹ್ಮದ್, ಕಾರ್ಯದರ್ಶಿ ಶಮೀರ್ ಹಸನ್, ಸೈದುದ್ದೀನ್, ಸ್ಥಳೀಯ ಮುಖಂಡರಾದ ಸರ್ಫುದ್ದೀನ್, ಇಲ್ಯಾಸ್, ಹಿರಿಯರಾದ ಬಿ.ಕೆ.ಇಬ್ರಾಹೀಂ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News