ವೆನ್ಲಾಕ್ ಆಸ್ಪತ್ರೆಯಿಂದ ವ್ಯಕ್ತಿ ನಾಪತ್ತೆ

Update: 2024-09-23 16:28 GMT

ಮಂಗಳೂರು, ಸೆ.23: ನಗರದ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಉಪೇಂದ್ರ ಆಚಾರ್ಯ (65) ಎಂಬವರು ಸೆ.21ರಂದು ಮುಂಜಾವ ಕಾಣೆಯಾದ ಬಗ್ಗೆ ಅವರ ಪುತ್ರಿ ಸುಕನ್ಯಾ ಎಂಬವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.

ಹೃದಯದ ಕಾಯಿಲೆಯಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಸೆ.19ರಂದು ದಾಖಲಿಸಲಾಗಿತ್ತು. ಆದರೆ ಸೆ.21ರ ಮುಂಜಾವ 3:30 ಆಸ್ಪತ್ರೆಯಿಂದ ಕಾಣೆಯಾಗಿದ್ದು, ನಗರದ ವಿವಿಧ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

4.5 ಅಡಿ ಎತ್ತರದ, ಕಪ್ಪುಮೈಬಣ್ಣದ, ಸಪೂರ ಶರೀರದ, ದುಂಡು ಮುಖದ ಉಪೇಂದ್ರ ಆಚಾರ್ಯ ಕನ್ನಡ, ತುಳು ಮಾತನಾಡುತ್ತಾರೆ. ಇವರನ್ನು ಕಂಡವರು ಪಾಂಡೇಶ್ವರ (0824-2220218)ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News