ಪತ್ರಿಕೋದ್ಯಮ ಸತ್ಯದ ಪರ ಇರಬೇಕು: ಸ್ಪೀಕರ್ ಯು.ಟಿ. ಖಾದರ್

Update: 2024-10-02 17:19 GMT

ಮಂಗಳೂರು: ಪತ್ರಿಕೋದ್ಯಮ ಸತ್ಯದ ಪರ ಇರಬೇಕು,‌ ಸಮಾಜವನ್ನು ರೂಪಿಸುವಲ್ಲಿ ಸತ್ಯದ ಪರ ಪತ್ರಿಕೋದ್ಯಮದ ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಇಂಡಿಯನ್ ಕ್ಯಾಥೋಲಿಕ್ ಪ್ರೆಸ್ ಅಸೋಸಿಯೇಷನ್ (ಐಸಿಪಿಎ) ನಗರದ ಸಿಒಡಿಪಿ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ರೈಸ್ತ ಪತ್ರಕರ್ತರ 29ನೇ ರಾಷ್ಟ್ರೀಯ ಸಮಾವೇಶದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪತ್ರಿಕೋದ್ಯಮದ ಮೂಲಕ ಸಮಾಜವನ್ನು ಕಟ್ಟಬಹುದು ಅಥವಾ ಪತ್ರಿಕೋದ್ಯಮದ ದೋಷಗಳು ಸಾಮಾಜಿಕ ರಚನೆಯನ್ನು ನಾಶಪಡಿಸಬಹುದು ಎಂದು ಅವರು ಹೇಳಿದರು.

ಸತ್ಯ, ನ್ಯಾಯ ಮತ್ತು ಅಹಿಂಸೆಯನ್ನು ಎತ್ತಿಹಿಡಿಯುವ ವಿಷಯದ ಕುರಿತು ಚರ್ಚಿಸಲು ಮಾಧ್ಯಮ ವೃತ್ತಿಪರರು, ಪತ್ರಕರ್ತರು ಮತ್ತು ಚಿಂತಕ ಮುಖಂಡರನ್ನು ಒಟ್ಟುಗೂಡಿಸಿತು. ಈ ಕಾರ್ಯಕ್ರಮವು ಮಹಾತ್ಮ ಗಾಂಧಿಯವರ ಜನ್ಮದಿನವಾದ ಅ. 2 ರಂದು ನಡೆಯಿತು ಮತ್ತು ಅಪ್ರತಿಮ ನಾಯಕನಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಿತು. ಯು.ಟಿ.ಖಾದರ್ ಅತ್ಯುತ್ತಮ ಪತ್ರಕರ್ತರನ್ನು ಗೌರವಿಸಿ ದರು. ದಿ ನ್ಯೂ ಲೀಡರ್‌ನ ಸಂಪಾದಕ ಆಂಟೋನಿ ಪ್ಯಾನ್‌ಕ್ರಾಸ್, ಖ್ಯಾತ ಬರಹಗಾರ ವಿನಾಯಕ್ ನಿರ್ಮಲ್ ಮತ್ತು ಚಲನಚಿತ್ರ ನಿರ್ಮಾಪಕ ಡಾ. ಶೈಸನ್ ಪಿ. ಔಸೆಫ್. ಕಾರ್ಯಕ್ರಮದ ಪ್ರಾಯೋಜಕ, ಉದ್ಯಮಿ ಮತ್ತು ಲೆಕ್ಸಾ ಲೈಟಿಂಗ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ರೊನಾಲ್ಡ್ ಸಿಲ್ವನ್ ಡಿಸೋಜಾ ಅವರು ತಮ್ಮ ಯಶಸ್ಸಿನ ಕಥೆಯನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News