ಸಮಸ್ತ ಮದ್ರಸ ಪಾಟ್ನರ್ಸ್ ಮೀಟ್ ಪಂಚ ಮಾಸಿಕ ಅಭಿಯಾನ

Update: 2025-04-25 22:16 IST
  • whatsapp icon

ಮಂಗಳೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಂಗೀಕೃತ ಮದ್ರಸಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿನೂತನ ಶೈಲಿಯಲ್ಲಿ ಪಠ್ಯ ಪುಸ್ತಕಗಳು ಪರಿಷ್ಕರಣೆಗೊಂಡ ಹಿನ್ನಲೆಯಲ್ಲಿ ಪೋಷಕರ ಸಭೆಗಳನ್ನು ಕೂಡ ವಿಶಿಷ್ಟ ರೀತಿಯಲ್ಲಿ ಆಯೋಜಿಸಲು ಸಮಸ್ತ ಆದೇಶಿಸಿದೆ.

ಅದರಂತೆ ಸಮಸ್ತದ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಚಿಣ್ಣರು ಚಿನ್ನವಾಗಿರಲಿ ಎಂಬ ಶೀರ್ಷಿಕೆಯಡಿ ಎಪ್ರಿಲ್-ಆಗಸ್ಟ್ ಪಂಚ ಮಾಸಿಕ ಅಭಿಯಾನ ನಡೆಯಲಿದೆ. ಪೇರೆಂಟ್ಸ್ ಮೀಟ್ ಬದಲಾಗಿ ಪಾಟ್ನಸ್ ಮೀಟ್ ಎಂಬುದಾಗಿ ಕಾರ್ಯಕ್ರಮದ ಆಯೋಜನೆಯಲ್ಲಿಯೇ ಹೊಸತನವನ್ನು ತರಲಾಗಿದೆ. ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಪ್ರಕ್ರಿಯೆಗಳಲ್ಲಿ ಹಾಗೂ ಮದ್ರಸ ಆಡಳಿತ ನಿರ್ವಹ ಣೆಯ ಕರ್ತವ್ಯಗಳಲ್ಲಿ ಸಮಾನ ಪಾಲುದಾರರಾಗಿರಬೇಕೆಂಬುದು ಈ ಅಭಿಯಾನದ ಉದ್ದೇಶವಾಗಿದೆ. ಮಕ್ಕಳ ಬೆಳವಣಿಗೆ, ಪ್ರತಿಭೆ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪಾಲಕರೊಂದಿಗೆ ದಿಟ್ಟ ಹೆಜ್ಜೆಯಿಡುವ ಗುರಿಯನ್ನಿಟ್ಟುಕೊಳ್ಳಲಾಗಿದೆ.

ಮಕ್ಕಳಲ್ಲಿನ ಅಮೂಲ್ಯ ಮೌಲ್ಯಗಳನ್ನು ಬೆಳಗಿಸಲು ಮದ್ರಸ ಮತ್ತು ಮನೆ ಹೇಗೆ ಸಹಭಾಗಿಯಾಗಬೇ ಕೆಂಬುದರ ಬಗ್ಗೆ ಪ್ರಭಾಷಣಗಳು, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೈಯಕ್ತಿಕ ಪ್ರಗತಿ ಕುರಿತು ಪಾಲಕರು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ, ಮಕ್ಕಳ ಮುಂದಿನ ಶೈಕ್ಷಣಿಕ ಹಾದಿಯಲ್ಲಿ ಮದ್ರಸ ದೊಂದಿಗೆ ಜೊತೆಯಾಗಿ ಕೆಲಸ ಮಾಡುವ ಸಂಕಲ್ಪ, ಪಾಲಕರು ಶಿಕ್ಷಕರೊಂದಿಗೆ ಪ್ರತ್ಯೇಕವಾಗಿ ಮಾತು ಕತೆ, ತಮ್ಮ ಮಕ್ಕಳ ಬಗ್ಗೆಯಾದ ವಿಚಾರಣೆಗಳು, ಮಕ್ಕಳ ಕಲೆ ಮತ್ತು ಪಠ್ಯೇತರ ಚಟುವಟಿಕೆಗಳ ಪ್ರದರ್ಶನಗಳು, ಆಲ್ಫಾ ಜನರೇಶನ್ ವಿದ್ಯಾರ್ಥಿಗಳನ್ನು ಆಧುನಿಕ ಅಲಂಕಾರಗಳ ಜೊತೆಗೆ ಆಧ್ಯಾತ್ಮಿಕ ಶಿಕ್ಷಣಕ್ಕೂ ಒತ್ತು ನೀಡಿ ಚಿನ್ನದಂತೆ ಬಾಹ್ಯ ಮತ್ತು ಆಂತರಿಕವಾಗಿ ಪ್ರಶೋಭಿತರಾಗಿಸಲು ವಿವಿಧ ರೀತಿಯ ಮೋಟಿವೇಶನ್‌ಗಳು ಈ ಅಭಿಯಾನದಲ್ಲಿ ನಡೆಯಲಿದೆ.

ಸಂತಾನಗಳು ಸೌಂದರ್ಯವಾಗಿದ್ದಾರೆ ಎಂಬ ಪವಿತ್ರ ಕುರ್‌ಆನಿನ ಆಶಯ ಈ ಕಾರ್ಯಕ್ರಮದ ಸ್ಫೂರ್ತಿ ಯಾಗಿದ್ದು ಮಕ್ಕಳ ನವಜೀವನದ ಅಲೆ, ಅವರ ಕನಸುಗಳಲ್ಲಿ ಇರುವ ಭವಿಷ್ಯದ ಬೆಳಕು, ಬುದ್ಧಿ-ಪ್ರೀತಿ-ಕೌಶಲ-ಸಹಾನುಭೂತಿ ತುಂಬಿದ ಅವರ ಮನಸ್ಸಿನ ಸೌಂದರ್ಯವನ್ನು ಗುರುತಿಸಿ ಬೆಳೆಸಿ ಅವರೊಂದಿಗೆ ಬೆಳೆಯುದನ್ನು ಕಲಿಯುವ ನಿಟ್ಟಿನಲ್ಲಿ ಮದ್ರಸಗಳನ್ನು ಕೇಂದ್ರೀಕರಿಸಿ ಈ ಸಂಭ್ರಮವನ್ನು ಆಯೋಜಿಸ ಲಾಗುತ್ತದೆ ಎಂದು ಸಮಸ್ತ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News