ಮಾಣಿ: ಅಂತರಾಷ್ಟ್ರೀಯ ಡಾಡ್ಜ್‌ಬಾಲ್ ಚಾಂಪಿಯನ್‌ಶಿಪ್ ಗೆ ಚಾಲನೆ

Update: 2025-04-27 21:55 IST
ಮಾಣಿ: ಅಂತರಾಷ್ಟ್ರೀಯ ಡಾಡ್ಜ್‌ಬಾಲ್ ಚಾಂಪಿಯನ್‌ಶಿಪ್ ಗೆ ಚಾಲನೆ
  • whatsapp icon

ಬಂಟ್ವಾಳ : ಭಾರತೀಯ ಡಾಡ್ಜ್‌ಬಾಲ್ ಫೆಡರೇಶನ್‌ನ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಡಾಡ್ಜ್‌ಬಾಲ್ ಅಸೋಸಿಯೇಷನ್ ಹಾಗೂ ದಕ್ಷಿಣ ಕನ್ನಡ ಡಾಡ್ಜ್‌ಬಾಲ್ ಅಸೋಸಿಯೇಷನ್‌ನ ಸಹಯೋಗದೊಂದಿಗೆ ನಡೆದ ಅಂತರಾಷ್ಟ್ರೀಯ ಡಾಡ್ಜ್‌ಬಾಲ್ ಚಾಂಪಿಯನ್‌ಶಿಪ್ ಗೆ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ರಾತ್ರಿ ಚಾಲನೆ ದೊರೆಯಿತು.

ಕಾಮನ್‌ ವೆಲ್ತ್‌ ಕ್ರೀಡಾಪಟು ಪುಷ್ಪರಾಜ್‌ ಹೆಗ್ಡೆಯವರು ಅಂತರಾಷ್ಟ್ರೀಯ ಪಂದ್ಯಾಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಭಾರತದಲ್ಲಿ ಇದೇ ಮೊದಲಬಾರಿಗೆ ನಡೆಯುತ್ತಿರುವ ಅಂತ ರಾಷ್ಟ್ರೀಯ ಡಾಡ್ಜ್‌ಬಾಲ್‌ ಪಂದ್ಯಾಟವನ್ನು ಆಯೋಜಿಸಿದ ಬಾಲವಿಕಾಸ ವಿದ್ಯಾ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಕರ್ನಾಟಕದ ಪಾಲಿಗೆ ಇದೊಂದು ಅಪೂರ್ವ ಸನ್ನಿವೇಶ ಎಂದ ಅವರು, ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರಗಳು ಗಮನರಿಸಬೇಕು ಎಂದರು.

ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಪ್ರಹ್ಲಾದ್‌ ಜೆ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಂತರಾಷ್ಟ್ರೀಯ ಡಾಡ್ಜ್‌ ಬಾಲ್‌ ಚಾಂಪಿಯನ್‌ ಶಿಪ್‌ ಗೆ ಆಗಮಿಸಿದ ನೇಪಾಳ, ಮಲೇಶಿಯಾ, ಹಾಗೂ ಭಾರತ ತಂಡದ ಆಟಗಾರರನ್ನು ತುಳುನಾಡಿನ ಸಂಪ್ರದಾಯದಂತೆ ಮಂಗಳೂರು ಸಂಸದ  ಬೃಜೇಶ್‌ ಚೌಟ ತಾಂಬೂಲ ನೀಡಿ ಸ್ವಾಗತಿಸಿದರು, ವಿವಿಧ ಅತಿಥಿಗಣ್ಯರ ಸಮ್ಮುಖದಲ್ಲಿ ಚೆಂಡೆ, ಕೊಂಬು ವಾದನದೊಂದಿಗೆ ಕ್ರೀಡಾಂಗಣಕ್ಕೆ ಆಟಗಾರರನ್ನು ಬರಮಾಡಿ ಕೊಳ್ಳಲಾಯಿತು. ಶಾಸಕ ರಾಜೇಶ್‌ ನಾಯ್ಕ್‌ ಉಳಿಪ್ಪಾಡಿ ಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು ಮೊದಲಾದವರು ಆಗಮಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು.‌

ಚಾಂಪಿಯನ್‌ ಶಿಪ್‌ ಆಯೋಜಕರಾದ ವಿಜೇತ್‌ ಕುಮಾರ್‌, ಸಚಿನ್‌ ಎ.ಎಸ್‌, ಬಾಲವಿಕಾಸ ಟ್ರಸ್ಟ್‌ ಕಾರ್ಯದರ್ಶಿ ಮಹೇಶ್‌ ಶೆಟ್ಟಿ , ದ.ಕ.ಜಿಲ್ಲಾ ಡಾಡ್ಜ್‌ ಬಾಲ್‌ ಅಸೋಸಿಯೇಶನ್‌ ಅಧ್ಯಕ್ಷ ವಿದ್ಯಾಧರ್‌ ಜೈನ್‌, ಮಾಣಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಸುದೀಪ್‌ ಕುಮಾರ್‌ ಶೆಟ್ಟಿ, ಪೆರಾಜೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಕುಶಲ ಎಂ.ಪೆರಾಜೆ, ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಕೆ.ಮಾಣಿ, ಬಾಲಕೃಷ್ಣ ಆಳ್ವ, ಸ್ಥಳೀಯ ಪ್ರಮುಖರಾದ ಕೃಷ್ಣಪ್ಪ ಪೂಜಾರಿ, ನಿರಂಜನ್‌ ರೈ ಕುರ್ಲೆತ್ತಿಮಾರು, ಭಾರತೀಯ ಡಾಡ್ಜ್‌ಬಾಲ್ ಫೆಡರೇಶನ್‌ನ‌ ದಸತರಣ್ ವಿ ಸುಬ್ರಹ್ಮಣ್ಯಂ ಮಲೇಶಿಯಾ, ಡಾ.ರಬಿ ಪುತ್ರನ್‌, ನರಸಿಂಹ ರೆಡ್ಡಿ, ನಾಗರಾಜ್‌, ವಿ.ಪಿ.ಪವಿತ್ರನ್‌ ಕೇರಳ , ಏಕ್‌ ನಾಥ್‌ ಸಾಲುಂಕೆ ಮಹರಾಷ್ಟ್ರ, ನಸೀಬ್‌ ಹರಿಯಾಣ , ಪಶಮ್‌ ಶ್ರೀನಿವಾಸ್‌ ತೆಲಂಗಾಣ, ಪಲಕ್‌ ಸೊಂದರ್ವ ಗುಜರಾತ್‌, ತಾಕೂರ್‌ ಮೋಹಿತ್‌ ಉತ್ತರ ಪ್ರದೇಶ, , ಕಿಚ್ನಾನೆ ಪಾಂಡಿಚೇರಿ, ಪ್ರಕಾಶ್‌ ತಮಿಳುನಾಡು, ನಿಹಾಲ್‌ ಜಮ್ಮುಕಾಶ್ಮೀರ, ದುಶ್ಯಂತ್‌ ಸಿಂಗ್‌ ರಾಣಾ ಉತ್ತರ ಖಂಡ, ಸಂತೋಶ್‌ ಕುಮಾರ್‌, ಪೂಜಾ ಕಶ್ಯಪ್‌, ಸಂಜಯ್‌ ಮಧ್ಯಪ್ರದೇಶ, ಪ್ರಹ್ಲಾದ್‌ ಯಾದವ್‌ ರಾಜಸ್ಥಾನ, ದಿಲ್‌ ಕುಶ್‌ ಬಿಹಾರ, ಗಗನ್‌ ಸಿಂಗ್‌ ಛತ್ತೀಸ್‌ಗಡ, ಚಿನ್ಮಯ್‌ ಒಡಿಶಾ. ಸಂಧ್ಯಾ ಗೋವಾ, ಪರ್ತ್‌ ಜಾನಿ ಡಮನ್‌ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಅಂತರಾಷ್ಟ್ರೀಯ ಡಾಡ್ಜ್‌ ಬಾಲ್‌ ಚಾಂಪಿಯನ್‌ ಶಿಪ್‌ ಅನ್ನು ಮಾಣಿ ಬಾಲವಿಕಾಸ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲು ಕಾರಣಕರ್ತರಾದ ಸಂಘಟನಾ ಕಾರ್ಯದರ್ಶಿ ವಿಜೇತ್‌ ಕುಮಾರ್‌ ರನ್ನು ಬಾಲವಿಕಾಸ ವಿದ್ಯಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಬಾಲವಿಕಾಸ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಸುಪ್ರಿಯಾ ಡಿ. ಸನ್ಮಾನಪತ್ರ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ವಿಜೇತ್‌ ಕುಮಾರ್‌ ಸ್ವಾಗತಿಸಿದರು. ಭಾರತೀಯ ಡಾಡ್ಜ್‌ಬಾಲ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ನರಸಿಂಹ ರೆಡ್ಡಿ ವಂದಿಸಿದರು. ಶಿಕ್ಷಕಿಯರಾದ ರಶ್ಮಿ ಕೆ. ಫೆರ್ನಾಂಡೀಸ್‌ , ಶೋಭಾ ಎಂ.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.



 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News