ಸೆ.24ರಂದು SYS ದ.ಕ. ಜಿಲ್ಲಾ ಜುಬಿಲಿ ಜರ್ನಿ

Update: 2023-09-23 10:31 GMT

ಮಂಗಳೂರು, ಸೆ.23: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್.ವೈ.ಎಸ್.) ಇದರ ಮೂವತ್ತನೇ ವರ್ಷಾಚರಣೆಯ ಮಹಾ ಸಮ್ಮೇಳನವು 2024ರ ಜನವರಿ 24ರಂದು ಮಂಗಳೂರಿನಲ್ಲಿ ನಡೆಯಲಿದೆ. ಅದರ ಪ್ರಚಾರಾರ್ಥ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾಜ್ಯ ನಾಯಕರ ಪ್ರವಾಸ ಕಾರ್ಯಕ್ರಮವಿದ್ದು, ದ.ಕ. ಜಿಲ್ಲೆ ವೆಸ್ಟ್ ವಿಭಾಗದಲ್ಲಿ ಸೆ.24ರಂದು ಪ್ರವಾಸ ಕೈಗೊಳ್ಳಲಾಗಿದೆ.

ದ.ಕ. ಜಿಲ್ಲೆಯ ಮಂಗಳೂರು ಝೋನ್, ಸುರತ್ಕಲ್ ಝೋನ್ ಹಾಗೂ ಮೂಡುಬಿದಿರೆ ಝೋನ್ ಗಳ ಕಾರ್ಯಕ್ರಮವು ಗುರುಪುರ ಕೈಕಂಬದ ಮೆಗಾ ಪ್ಲಾಝಾದಲ್ಲಿ ಸಂಜೆ 4ಕ್ಕೆ ಜುಬಿಲಿ ಜರ್ನಿ ನಡೆಯಲಿದೆ.

ಉಳ್ಳಾಲ, ದೇರಳಕಟ್ಟೆ, ಮುಡಿಪು, ಬಂಟ್ವಾಳ ಝೋನ್ ವಿಭಾಗದ ಜುಬಿಲಿ ಜರ್ನಿ ಕಾರ್ಯಕ್ರಮವು ದೇರಳಕಟ್ಟೆ ತಾಜುಲ್ ಉಲಮಾ ವುಮೆನ್ಸ್ ಕಾಲೇಜಿನಲ್ಲಿ ರಾತ್ರಿ 7ಕ್ಕೆ ನಡೆಯಲಿದೆ. ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಹಫೀಳ್ ಸಅದಿ ಕೊಡಗು, ಪ್ರಧಾನ ಕಾರ್ಯದರ್ಶಿ ಎಂ.ಬಿ.ಎಂ.ಸಾದಿಕ್ ಮಾಸ್ಟರ್ ನೇತೃತ್ವದ ತಂಡವು ಭಾಗವಹಿಸಲಿದ್ದಾರೆ ಎಂದು ಎಸ್.ವೈ.ಎಸ್. ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪ್ರಿಂಟೆಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News