“ಪ್ರಧಾನಿ ಕೆಲಸದಿಂದ ಪ್ರಭಾವಿತನಾಗಿದ್ದೇನೆ”: NDAಗೆ ಸೇರಿದ ಆರ್‌ಜೆಡಿ ಶಾಸಕ

Update: 2024-03-02 16:07 GMT

ಭರತ ಬಿಂದ್ | Photo: zeenews.india.com

ಪಾಟ್ನ: ಪಕ್ಷದ ಶಾಸಕ ಭರತ ಬಿಂದ್ ಅವರು ಶುಕ್ರವಾರ ಬಿಹಾರ ವಿಧಾನಸಭೆಯಲ್ಲಿ ಆಡಳಿತಾರೂಢ ಎನ್ ಡಿಎ ಸದಸ್ಯರೊಂದಿಗೆ ಆಸೀನರಾಗುವುದರೊಂದಿಗೆ ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಇನ್ನೊಂದು ಹಿನ್ನಡೆಯನ್ನು ಅನುಭವಿಸಿದೆ. ಬಿಂದ್ ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಪಕ್ಷವನ್ನು ತೊರೆದ ಐದನೇ ಶಾಸಕರಾಗಿದ್ದಾರೆ.

ಬಿಂದ್ ಬಜೆಟ್ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ ಅವರೊಂದಿಗೆ ವಿಧಾನಸಭೆಗೆ ಆಗಮಿಸಿದ್ದರು.

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ನಿರ್ವಹಣೆ ಶೈಲಿಯಿಂದ ಪ್ರಭಾವಿತನಾಗಿ ತಾನು NDAಗೆ ನಿಷ್ಠೆಯನ್ನು ಬದಲಿಸಿದ್ದೇನೆ ಎಂದು ಬಿಂದ್ ಹೇಳಿದರು.

ಈ ನಡುವೆ ಕಾಂಗ್ರೆಸ್ ಶಾಸಕಿ ನೀತು ಸಿಂಗ್ (ಹಿಸುವಾ) ಅವರು,ಬಿಜೆಪಿ ತನಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದಾದರೆ ತಾನು ನಿಷ್ಠೆಯನ್ನು ಬದಲಿಸುವುದಾಗಿ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News