‘ತೇಜಸ್‌’ ಸಿನೆಮಾ ವೀಕ್ಷಿಸಲು ಮನವಿ ಮಾಡಿದ ಕಂಗನಾಗೆ ತೀಕ್ಷ್ಣ ಉತ್ತರ ನೀಡಿದ ಪ್ರಕಾಶ್‌ ರಾಜ್‌

Update: 2023-10-29 15:45 GMT

 ಪ್ರಕಾಶ್‌ ರಾಜ್‌ Photo- PTI

ಮುಂಬೈ: ತನ್ನ ಬಹು ನಿರೀಕ್ಷಿತ ‘ತೇಜಸ್‌ʼ ಚಿತ್ರ ವೀಕ್ಷಿಸಲು ಪ್ರೇಕ್ಷಕರು ನಿರಾಸಕ್ತಿ ತೋರಿಸುತ್ತಿದ್ದಂತೆ ನಟಿ ಕಂಗನಾ ರಣಾವತ್‌ ಅವರು ಚಿತ್ರಮಂದಿರಗಳಲ್ಲಿ ತೆರಳಿ ಸಿನೆಮಾ ವೀಕ್ಷಿಸಲು ಮನವಿ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಹುಭಾಷಾ ನಟ ಪ್ರಕಾಶ್‌ ರಾಜ್‌, ʼಭಾರತಕ್ಕೆ 2014 ರಲ್ಲಿ ಸ್ವಾತಂತ್ರ್ಯ ಬಂದಿದೆ, ಸ್ವಲ್ಪ ಕಾಯಿರಿ, ಇದು ಪಿಕಪ್‌ ಆಗಬಹುದುʼ ಎಂದು ಟ್ವೀಟ್‌ ಮಾಡಿದ್ದಾರೆ.

ಕೋವಿಡ್‌ ಗಿಂತ ಮುನ್ನ ಥಿಯೇಟರಿಗೆ ಜನ ಹೋಗುತ್ತಿರುವುದು ಕಡಿಮೆಯಾಗುತ್ತಿತ್ತು, ಕೋವಿಡ್‌ ಬಳಿಕ ಅದು ತೀವ್ರವಾಗಿ ಕಡಿಮೆಯಾಗುತ್ತಿದೆ. ಜನರು ಥಿಯೇಟರ್‌ಗಳಿಗೆ ಹೋಗಿ ಸಿನೆಮಾಗಳನ್ನು ನೋಡದಿದ್ದರೆ ಅವುಗಳು ಉಳಿಯುವುದಿಲ್ಲ, ಹಾಗಾಗಿ, ಕುಟುಂಬದೊಂದಿಗೆ ಹೋಗಿ ಸಿನೆಮಾಗಳನ್ನು ನೋಡಿ, ತೇಜಸ್‌ ಚಿತ್ರವನ್ನು ನೋಡಿದವರು ಉತ್ತಮ ಅಭಿಪ್ರಾಯ ನೀಡಿದ್ದಾರೆ. ನನ್ನ ವಿನಂತಿ ಏನೆಂದರೆ, ನೀರ್ಜಾ, ಉರಿ, ಮೇರಿ ಕೋಂ ಚಿತ್ರಗಳನ್ನು ನೋಡಿ ಇಷ್ಟಪಟ್ಟಿದ್ದರೆ, ಈ ಚಿತ್ರವೂ ನಿಮಗೆ ಇಷ್ಟವಾಗುತ್ತದೆ, ಚಿತ್ರ ಮಂದಿರಗಳಿಗೆ ಹೋಗಿ ಸಿನೆಮಾ ನೋಡಿ ಎಂದು ಕಂಗನಾ ವಿನಂತಿ ಮಾಡಿದ್ದರು.

ತೇಜಸ್‌ ಚಿತ್ರ ಅತ್ಯಂತ ಕಳಪೆ ಗಳಿಕೆ ಕಂಡಿದ್ದು, ಜನರು ಥಿಯೇಟರುಗಳಿಗೆ ಬಾರದಿದ್ದ ಕಾರಣ ಮೊದಲ ದಿನವೇ ಸುಮಾರು 95% ಪ್ರದರ್ಶನಗಳನ್ನು ರದ್ದು ಪಡಿಸಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News