ಒಡಿಶಾ, ತ್ರಿಪುರಾಕ್ಕೆ ರಾಜ್ಯಪಾಲರ ಆಯ್ಕೆ

Update: 2023-10-18 17:54 GMT

ಇಂದ್ರಸೇನಾ ರೆಡ್ಡಿ ನಲ್ಲು PHOTO : x/@sambitswaraj ರಘುಬರ್ ದಾಸ್ Photo : PTI 

ಹೊಸದಿಲ್ಲಿ : ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಅವರನ್ನು ಒಡಿಶಾ ರಾಜ್ಯಪಾಲರಾಗಿ, ತೆಲಂಗಾಣದ ಇಂದ್ರಸೇನಾ ರೆಡ್ಡಿ ನಲ್ಲು ಅವರನ್ನು ತ್ರಿಪುರಾ ರಾಜ್ಯಪಾಲರಾಗಿ ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟನೆ ಬುಧವಾರ ತಿಳಿಸಿದೆ.

ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ದಾಸ್ ಅವರು 2014 ರಿಂದ 2019 ರವರೆಗೆ ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿದ್ದರು. ಇಂದ್ರಸೇನಾ ರೆಡ್ಡಿ ನಲ್ಲು ತೆಲಂಗಾಣದ ಬಿಜೆಪಿ ನಾಯಕ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News