ಉತ್ತರಾಖಂಡ: ಸುರಂಗ ಕುಸಿತ ಪ್ರದೇಶದ ಬಳಿ ದೇವಾಲಯ ನಿರ್ಮಾಣ; ಕಾರ್ಮಿಕರ ಸುರಕ್ಷತೆಗಾಗಿ ಪ್ರಾರ್ಥಿಸಿದ ಕೇಂದ್ರ ಸಚಿವ

Update: 2023-11-27 07:09 GMT

Screengrab:X/ANI

ಉತ್ತರಕಾಶಿ: ಉತ್ತರಾಖಾಂಡದಲ್ಲಿ ಸುರಂಗ ಕುಸಿತದಿಂದ ಒಳಗೆ ಸಿಕ್ಕಿಬಿದ್ದ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದ್ದು, ಘಟನಾ ಸ್ಥಳಕ್ಕೆ ಕೇಂದ್ರ ಸಚಿವ (ನಿವೃತ್ತ) ಜನರಲ್ ವಿಕೆ ಸಿಂಗ್ ಅವರು ಭೇಟಿ ನೀಡಿದ್ದಾರೆ.

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದ ಬಳಿ ನಿರ್ಮಿಸಲಾದ ದೇವಾಲಯದಲ್ಲಿ ಕಾರ್ಮಿಕರ ಸುರಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಸುರಂಗ ಕೊರೆಯುವ ಆಗರ್ ಯಂತ್ರದ ವೈಫಲ್ಯದ ನಂತರ, 41 ಕಾರ್ಮಿಕರನ್ನು ರಕ್ಷಿಸಲು ಸುರಂಗದ ಮೇಲ್ಭಾಗದಿಂದ ಲಂಬವಾಗಿ ಕೊರೆಯುವ ಕಾರ್ಯಾಚರಣೆ ರವಿವಾರ ಪ್ರಾರಂಭವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News