ನವಾಝ್ ಶರೀಫ್ ಮೊಮ್ಮಗಳ ಮದುವೆಯಲ್ಲಿ ಉಂಡವನೇ ಜಾಣ.

Update: 2015-12-28 13:09 GMT

* ಜನತಾ ಪರಿವಾರ ಒಂದಾಗೋದು ಸುಲಭವಲ್ಲ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

-ಸಂಘಪರಿವಾರದ ಸಹಕಾರ ಸಿಕ್ಕಿದರೆ ಕಷ್ಟವಿಲ್ಲ.

..................................................

* ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ನೋಡಿದರೆ ತನಗೂ ಸಾಯಬೇಕೆನಿಸುತ್ತದೆ.

- ದೇವೇಗೌಡ, ಮಾಜಿ ಪ್ರಧಾನಿ

-ಜೆಡಿಎಸ್ ಪಕ್ಷದ ಆತ್ಮಹತ್ಯೆಗಿಂತ ವಾಸಿ.

..................................................

* ಕಾಂಗ್ರೆಸ್ ಆಡಳಿತಕ್ಕೆ ಬಂದ ಅನಂತರ ಏಳು ತಿಂಗಳು ತನಗೆ ಮಂತ್ರಿ ಸ್ಥಾನ ಸಿಗದಿರುವುದಕ್ಕೆ

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯ ಕುತಂತ್ರವೇ ಕಾರಣ.

- ಡಿ.ಕೆ.ಶಿವಕುಮಾರ್, ಇಂಧನ ಸಚಿವ

-ಕಾಂಗ್ರೆಸ್ ಹೈಕಮಾಂಡ್ ಬದಲಾಗಿದ್ದಾರೆಯೇ?

..................................................

* ರಾಜ್ಯದಲ್ಲಿ ಆನ್‌ಲೈನ್ ಔಷಧ ಮಾರಾಟಕ್ಕೆ ಅವಕಾಶವಿಲ್ಲ. - ಯು.ಟಿ. ಖಾದರ್, ಆರೋಗ್ಯ ಸಚಿವ

-ಆನ್‌ಲೈನ್‌ನಲ್ಲಿ ರೋಗಗಳನ್ನು ಹಂಚುವುದಕ್ಕೆ ಅವಕಾಶವಿದೆಯಂತೆ.

..................................................

* ಅರುಣ್‌ಜೇಟ್ಲಿ ರಾಜಕಾರಣಿಗಳಿಗೆ ಮಾದರಿಯಾಗಿರುವವರು.

- ಅಮಿತ್ ಶಾ, ಬಿಜೆಪಿ ಅಧ್ಯಕ್ಷ

-ಉಳಿದವರ ಹಗರಣಗಳಿಗೆ ಜೇಟ್ಲಿಯೇ ಮಾದರಿ ಅಂತೀರಾ?

..................................................

* ಬಿಜೆಪಿ ಮತ್ತು ಜೆಡಿಎಸ್‌ಗಳಿಗೆ ಸಿದ್ಧಾಂತಗಳೇ ಇಲ್ಲ.

- ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

-ಸದ್ಯಕ್ಕೆ ಸಿದ್ಧಾಂತಗಳಿರದೇ ಇರುವುದೂ ಪಕ್ಷಗಳ ಪಾಲಿಗೆ ಸಿದ್ಧಾಂತವೇ ಆಗಿದೆ.

..................................................

* ಮುಂದಿನ ವಿಧಾನಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ.

- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

-ಯಾವ ಪಕ್ಷದಿಂದ ಎನ್ನುವುದು ಪ್ರಶ್ನೆ.

..................................................

* ವಿಶ್ವವೇ ಪ್ರಧಾನಿ ನರೇಂದ್ರ ಮೋದಿಯವರ ಸರಕಾರವನ್ನು ಮೆಚ್ಚಿದೆ.

- ನಳಿನ್ ಕುಮಾರ್ ಕಟೀಲ್, ಸಂಸದ

--ಭಾರತದ ಜನರನ್ನು ಹೊರತು ಪಡಿಸಿ.

..................................................

* ಹವಾಲಾ ಕೇಸ್‌ನಿಂದ ಎಲ್.ಕೆ. ಅಡ್ವಾಣಿಯವರನ್ನು ನಾನೇ ಪಾರು ಮಾಡಿದ್ದು. - ರಾಮ್‌ಜೇಠ್ಮಲಾನಿ, ಹಿರಿಯ ನ್ಯಾಯವಾದಿ

-ಇದನ್ನು ಹೆಮ್ಮೆಯಿಂದ ಹೇಳುತ್ತಿದ್ದೀರಾ, ಬೇಸರದಿಂದ ಹೇಳುತ್ತಿದ್ದೀರಾ?

..................................................

* ಅಡ್ವಾಣಿ ಅವರಂತೆ ಜೇಟ್ಲಿಯೂ ನಿಷ್ಕಳಂಕರಾಗಿ ಹೊರಹೊಮ್ಮಲಿದ್ದಾರೆ..

- ನರೇಂದ್ರ ಮೋದಿ, ಪ್ರಧಾನಿ

-ಸದ್ಯಕ್ಕೆ ಅವರು ಕಳಂಕಿತರು ಎನ್ನುವುದನ್ನು ನೀವು ಒಪ್ಪಿಕೊಂಡಂತೆ ಆಯಿತು.

..................................................

* ಕಾಂಗ್ರೆಸ್‌ನಲ್ಲಿ ನೆಹರೂ, ಇಂದಿರಾ ಗಾಂಧಿ ತತ್ವ ಸಿದ್ಧಾಂತಗಳು ಸತ್ತು ಹೋಗುತ್ತಿವೆ.

- ರಮೇಶ್‌ಕುಮಾರ್, ಶಾಸಕ

-ಪಕ್ಷವೇ ಸತ್ತು ಹೋಗುತ್ತಿರುವಾಗ, ಅವರ ತತ್ವ ಉಳಿಯುವುದು ಹೇಗೆ?

..................................................

* ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿಮಾರ್ಣವಾಗಬೇಕು ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಯ ಬಯಕೆಯಾಗಿದೆ.

- ವೆಂಕಯ್ಯನಾಯ್ಡು, ಕೇಂದ್ರ ಸಚಿವ

-ರಸ್ತೆ, ಸೇತುವೆ, ಮನೆಗಳ ನಿರ್ಮಾಣ ಯಾವಾಗ?

..................................................

* ಶೋಷಿತರಿಗೆ ಪ್ರವೇಶವಿಲ್ಲದ ದೇವಸ್ಥಾನಗಳನ್ನು ಬಹಿಷ್ಕರಿಸಿ.

- ಎಲ್. ಹನುಮಂತಯ್ಯ, ಕ.ಪು.ಪ್ರಾ. ಅಧ್ಯಕ್ಷ

-ಬಹಿಷ್ಕಾರ ಮಾಡಿದವರಿಗೆ ಕಾನೂನಿನಲ್ಲಿ ಶಿಕ್ಷೆ ಇದೆಯಂತಲ್ಲ?

..................................................

* ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಲು ಎಲ್ಲ ರೀತಿಯಲ್ಲೂ ಅರ್ಹರು.

- ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

- ಮುಖ್ಯಮಂತ್ರಿಯಾಗುವುದಕ್ಕೆ ಮಾತ್ರ ಸಲ್ಲರು. ಅಲ್ಲವೇ?

..................................................

* ನಿಜವಾದ ಮುತ್ಸದ್ಧಿತನವೆಂದರೆ ಇದು (ಪ್ರಧಾನಿ ಪಾಕ್ ಭೇಟಿ).

- ಸುಷ್ಮಾ ಸ್ವರಾಜ್, ವಿದೇಶಾಂಗ ಸಚಿವೆ

-ನವಾಝ್ ಶರೀಫ್ ಮೊಮ್ಮಗಳ ಮದುವೆಯಲ್ಲಿ ಉಂಡವನೇ ಜಾಣ.

..................................................

* ಮಾಜಿ ಪ್ರಧಾನಿ ವಾಜಪೇಯಿ ಇಡೀ ದೇಶಕ್ಕೆ ಪ್ರೇರಣೆ.

- ಅನಂತಕುಮಾರ್, ಕೇಂದ್ರ ಸಚಿವ

-ಅದಕ್ಕೆ ಅವರನ್ನು ಕೋಮಾದಲ್ಲಿಡಲಾಗಿದೆ.

..................................................

* ಪ್ರಧಾನಿ ನರೇಂದ್ರ ಮೋದಿಗೆ ಕಂಡವರ ಮಕ್ಕಳ ಬಗ್ಗೆ ಚಿಂತೆ ಇದ್ದರೆ, ಮಲ್ಲಿಕಾರ್ಜುನ ಖರ್ಗೆಗೆ ತನ್ನ ಮಗನ ಬಗ್ಗೆ ಮಾತ್ರ ಚಿಂತೆ.

- ಪ್ರತಾಪ್ ಸಿಂಹ, ಸಂಸದ

- ಮದುವೆಯಾಗಿ ಮೂರೇ ತಿಂಗಳಲ್ಲಿ ಪತ್ನಿಯನ್ನು ದೂರ ಇಟ್ಟ ಮೇಲೆ ಕಂಡವರ ಮಕ್ಕಳೇ ಗತಿ.

..................................................

*ಬಿಜೆಪಿಯಲ್ಲಿ ಮೆದುಳಿಲ್ಲದ ನಾಯಕರೇ ಹೆಚ್ಚು.

- ಸಿದ್ದರಾಮಯ್ಯ, ಮುಖ್ಯಮಂತ್ರಿ

-ಅವರ ಮೆದುಳುಗಳೆಲ್ಲ ಆರೆಸ್ಸೆಸ್ ಕಚೇರಿಯಲ್ಲಿರುವ ಪ್ರಿಡ್ಜ್ ನೊಳಗಿದೆಯಂತೆ.

..................................................

* ಕಾನೂನು ಉಲ್ಲಂಘಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಇಲ್ಲ.

- ಜೆ.ನಂದಕುಮಾರ್, ಆರೆಸ್ಸೆಸ್ ಪ್ರಚಾರ ಪ್ರಮುಖ್

-ಬಹುಶಃ ಕಾನೂನನ್ನು ಧ್ವಂಸಗೊಳಿಸಿ ನಿರ್ಮಾಣ ಮಾಡುವ ಉದ್ದೇಶ ಇರಬಹುದು.

..................................................

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!