* ಬಾಬರಿ ಮಸೀದಿ ಧ್ವಂಸಗೊಳಿಸುವುದನ್ನು ನಾನು ಬಲವಾಗಿ ವಿರೋಧಿಸಿದ್ದೆ.

Update: 2016-01-24 17:54 GMT

- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

-ಧ್ವಂಸ ಮಾಡಿದ ಬಳಿಕ, ನೀವು ವಿರೋಧಿಸಿದಿರಿ ಎಂದು ಕಾಣುತ್ತದೆ

. ..................................................

* ಉಪಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಹೊಂದಾಣಿಕೆಯಿಲ್ಲ.

- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

-ಯಾರೂ ನಿಮ್ಮನ್ನು ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲವೇ?

..................................................

* ಪ್ರಸ್ತುತ ದೇಶದ ವಾತಾವರಣ ಗಾಂಧೀಜಿಯನ್ನು ಕೊಂದ ಸ್ಥಿತಿಯಲ್ಲಿದೆ.

- ಗೊ.ರು.ಚೆನ್ನಬಸಪ್ಪ, ವಿದ್ವಾಂಸ

-ಗಾಂಧಿಯನ್ನು ಕೊಂದ ಸಂಭ್ರಮದಲ್ಲಿದೆ ಎಂದರೆ ಹೆಚ್ಚು ಪರಿಣಾಮಕಾರಿ.

..................................................

* ನಾನು ಹುಟ್ಟಿದ ಕರಾಚಿಯನ್ನು ಬಿಟ್ಟರೆ ನನಗೆ ಕರ್ನಾಟಕ ತುಂಬಾ ಅಚ್ಚುಮೆಚ್ಚು.

- ಎಲ್.ಕೆ. ಅಡ್ವಾಣಿ, ಬಿಜೆಪಿ ನಾಯಕ

-ಕರಾಚಿ ವಿಮಾನ ಹತ್ತಿಸಿ ಬಿಡಿ ಎಂದು ಮೋದಿಯವರು ಅಮಿತ್ ಶಾ ಕಿವಿಯಲ್ಲಿ ಉಸಿರಿದರಂತೆ.

..................................................

* ಪ್ರಧಾನಿ ನರೇಂದ್ರ ಮೋದಿಯವರ ಪಾಕಿಸ್ತಾನ ನೀತಿ ಸರಿಯಾಗಿದೆ..

- ಸುಬ್ರಹ್ಮಣ್ಯಸ್ವಾಮಿ, ಬಿಜೆಪಿ ಮುಖಂಡ

-ಪಠಾಣ್‌ಕೋಟ್‌ಉಗ್ರರ ದಾಳಿ ಈ ನೀತಿಯ ಫಲವೆ ಅಲ್ಲವೇ?

..................................................

* ದೇಶದ ಎಲ್ಲಾ ರೈಲುಗಳಲ್ಲಿ ಸಾಂಪ್ರದಾಯಿಕ ಆಹಾರ.

- ಸುರೇಶ್ ಪ್ರಭು, ಕೇಂದ್ರ ರೈಲ್ವೆ ಸಚಿವ

-ನಿಮ್ಮ ಸಂಪ್ರದಾಯದಲ್ಲಿ ಮಾಂಸಾಹಾರ ನಿಷೇಧವೆಂದು ಕಾಣುತ್ತದೆ.

..................................................

* ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದವರು ಸೋನಿಯಾ ಗಾಂಧಿ.

- ದೇವೇಗೌಡ, ಮಾಜಿ ಪ್ರಧಾನಿ

-ನಿಮ್ಮನ್ನು ಮುಗಿಸಲು ನಿಮ್ಮ ಮಕ್ಕಳೇ ಸಾಕು.

..................................................

* ಪೇಜಾವರ ಪರ್ಯಾಯ ಅವಧಿಯಲ್ಲಿ ಗಂಗಾನದಿ ಶುದ್ಧೀಕರಣ ಪೂರ್ಣ.

- ಉಮಾಭಾರತಿ, ಗಂಗಾ ಶುದ್ಧೀಕರಣ ಸಚಿವೆ

-ಅಂದರೆ, ಮುಂದಿನ ಇನ್ನೂರು ವರ್ಷಗಳ ಕಾಲ ಪೇಜಾವರರ ಪರ್ಯಾಯ ಅವಧಿ ಮುಂದುವರಿಯುತ್ತದೆ ಎಂದಾಯಿತು.

..................................................

* ಎಲ್ಲ ಪಕ್ಷಗಳೂ ನನ್ನನ್ನು ಕರೆಯುತ್ತಿವೆ.

- ಶತ್ರುಘ್ನ ಸಿನ್ಹಾ, ಬಿಜೆಪಿ ಸಂಸದ

-ಬಿಜೆಪಿ ನೀವು ಹೋಗುವುದನ್ನು ಕಾಯುತ್ತಿದೆ.

..................................................

* ಪಕ್ಷಾತೀತ, ಜಾತ್ಯತೀತ, ರಾಜ್ಯಾತೀತ, ಧರ್ಮಾತೀತ ಅಂದರೆ ಪೇಜಾವರಶ್ರೀ.

- ಸಿ.ಎಂ. ಇಬ್ರಾಹೀಂ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ

-ಲಜ್ಜಾತೀತ ಎಂದರೆ ಇಬ್ರಾಹೀಮರೇ ಇರಬೇಕು.

..................................................

* ಸಿಎಂ ಸಿದ್ದರಾಮಯ್ಯ ನಮಗೆ ಕ್ಯಾಪ್ಟನ್ ಇದ್ದಂತೆ.

- ಡಾ.ಜಿ. ಪರಮೇಶ್ವರ್, ಗೃಹಸಚಿವ

-ಸೋಲನ್ನೆಲ್ಲ ಕ್ಯಾಪ್ಟನ್ ತಲೆಗೆ ಕಟ್ಟುವ ಹುನ್ನಾರ.

..................................................

* ಪಟ್ಟಭದ್ರ ಹಿತಾಸಕ್ತಿಗಳು ವಿವೇಕಾನಂದರ ಚಿಂತನೆಗಳನ್ನು ತಿರುಚುತ್ತಿವೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

-ಚಕ್ರವರ್ತಿ ಸೂಲಿಬೆಲೆಯಿಂದ ವಿವೇಕಾನಂದರ ಕುರಿತಂತೆ ವಿಧಾನಸಭೆಯಲ್ಲೊಂದು ಉಪನ್ಯಾಸ ಮಾಡಿಸಿ.

..................................................

* ಪಕ್ಷಾತೀತ ಕಾಮಗಾರಿಗಳಿಂದ ಅಭಿವೃದ್ಧಿ ಸಾಧ್ಯ.

- ಆರ್.ವಿ. ದೇಶಪಾಂಡೆ, ಸಚಿವ

-ಕಾಮದ ವಿಷಯದಲ್ಲಿ ರಾಜಕಾರಣಿಗಳು ಸದಾ ಪಕ್ಷಾತೀತ.

..................................................

* ಮೋದಿ ಆಡಳಿತಕ್ಕೆ ವಿಶ್ವದ 32 ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

- ವೆಂಕಯ್ಯನಾಯ್ಡು, ಕೇಂದ್ರ ಸಚಿವ

-ಭಾರತ ಒಂದನ್ನು ಬಿಟ್ಟು. ..................................................

* ರೋಹಿತ್ ವೇಮುಲಾ ಆತ್ಮಹತ್ಯೆಗೂ ದಲಿತ ವಿಚಾರಕ್ಕೂ ಸಂಬಂಧವಿಲ್ಲ.

- ಸ್ಮತಿ ಇರಾನಿ, ಕೇಂದ್ರ ಸಚಿವೆ

-ಪ್ರಶ್ನೆ ಇರುವುದು, ನಿಮಗೂ ಆ ಆತ್ಮಹತ್ಯೆಗೂ ಸಂಬಂಧವಿದೆಯೇ ಎನ್ನುವುದು.

..................................................

* ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಲು ನಾನು ಅಡ್ಡಗೋಡೆಯಾಗಿಲ್ಲ.

- ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

-ಮುಖ್ಯಮಂತ್ರಿಯಾಗುವುದಕ್ಕೆ ಮಾತ್ರ ಅಂತ ಕಾಣುತ್ತದೆ.

..................................................

* ಪಶ್ಚಿಮ ಬಂಗಾಳದಲ್ಲಿ ಮಹಿಳೆಯರು, ಜನರು, ಅಷ್ಟೇಏಕೆ ಪೊಲೀಸರೂ ಕೂಡಾ ಸುರಕ್ಷಿತರಾಗಿಲ್ಲ.

- ರಾಜನಾಥ್ ಸಿಂಗ್, ಕೇಂದ್ರ ಗೃಹಸಚಿವ

-ದೇಶದಲ್ಲಿ ಸುರಕ್ಷತೆಯ ಬಗ್ಗೆ ಶಂಕೆಯಿರುವುದರಿಂದಲೇ ಪ್ರಧಾನಿಯವರು ವಿದೇಶಗಳಲ್ಲಿ ಓಡಾಡುತ್ತಿರುವುದು.

..................................................

* ಯಡಿಯೂರಪ್ಪ ಖಾಲಿ ಮಡಿಕೆ.

- ಮುದ್ದ ಹನುಮೇಗೌಡ, ಸಂಸದ

-ಒಡೆದ ಮಡಿಕೆ ಎನ್ನುವುದು ಅನಂತಕುಮಾರ್‌ಹೇಳಿಕೆ.

..................................................

* ಮೇ ಅಂತ್ಯದ ವರೆಗೆ ವಿದ್ಯುತ್ ಸಮಸ್ಯೆ ಇಲ್ಲ.

- ಡಿ.ಕೆ. ಶಿವಕುಮಾರ್, ಇಂಧನ ಸಚಿವ

-ವಿದ್ಯುತ್‌ಸಚಿವರೇ ಸದ್ಯಕ್ಕೆ ಸಮಸ್ಯೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!