* ಭಾರತ ಹಾಗೂ ಫ್ರಾನ್ಸ್ ಒಂದೇ ರೀತಿಯ ಸಮಸ್ಯೆ ಎದುರಿಸುತ್ತಿದೆ.

Update: 2016-01-31 18:56 GMT

- ಫ್ರಾಂಕೊಯಿಸ್ ಹೊಲ್ಲಾಂಡ್, ಫ್ರಾನ್ಸ್ ಅಧ್ಯಕ್ಷ

-ಆ ಸಮಸ್ಯೆಯ ಹೆಸರು ನರೇಂದ್ರ ಮೋದಿ ಅಲ್ಲ ತಾನೇ?

..........................................................................

* ಕನ್ನಡದಲ್ಲಿ ಸಂಶೋಧನೆ ನಡೆಸಲು ಸಂಸ್ಕೃತ ಮೂಲದ ಪ್ರಾಚೀನ ಕಾವ್ಯಗಳ ಓದು ಅನಿವಾರ್ಯ.

- ಡಾ.ಎಸ್.ಎಲ್. ಭೈರಪ್ಪ, ಹಿರಿಯ ಸಾಹಿತಿ

- ಮೊದಲು ಕರ್ನಾಟಕದಲ್ಲಿ ಕನ್ನಡ ಓದುವುದು ಅನಿವಾರ್ಯಗೊಳಿಸೋಣ.

...............................................................

* ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ದುಡ್ಡಿನ ಮದ ಬಂದಿದೆ.

- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

-ನಿಮ್ಮ ಮದ ಇಳಿದಿದೆಯೇ?

.........................................................................

* ಖುಜರಾಹೋದಲ್ಲಿರುವ ಬೆತ್ತಲೆ ಶಿಲ್ಪಗಳಿಗೂ ಮೋದಿ ಸರಕಾರದ ಸಂಸ್ಕೃತಿ ಸಚಿವರು ಸೀರೆ ಉಡಿಸುವ ದಿನ ದೂರವಿಲ್ಲ..

- ನಯನತಾರಾ ಸೆಹಗಲ್, ಸಾಹಿತಿ

-ಭೈರಪ್ಪ ಅವರು ಆ ಶಿಲ್ಪಗಳಿಗೆ ಸಂಸ್ಕೃತ ಕಲಿಸುವುದಕ್ಕೆ ಮುಂದಾಗಿದ್ದಾರಂತೆ.

...........................................................................

* ನನಗೆ ಯಾವುದೇ ಸ್ಥಾನಮಾನ ನೀಡದಿದ್ದರೂ ಬಿಜೆಪಿಯನ್ನು ಬಲಪಡಿಸಲು ಸಂಕಲ್ಪ ಮಾಡಿದ್ದೇನೆ.

- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

-ಸ್ಥಾನವೇನೋ ಕೊಡಬಹುದು. ಆದರೆ ಮಾನವನ್ನು ಅದು ಕೊಡುವುದೆಲ್ಲಿಂದ?

......................................................................

* ಗೋಮಾಂಸ ಬೇಕಿದ್ದರೆ ನನಗೆ ಮತ ಹಾಕಿ.

- ಅಸಾದುದ್ದೀನ್ ಉವೈಸಿ, ಸಂಸದ

-ಕಸಾಯಿ ಖಾನೆಯಲ್ಲೇ ಮತಗಟ್ಟೆ ಮಾಡಬೇಕಾದೀತೇನೋ?

.........................................................................

* ಭಾರತ ಮತ್ತು ಫ್ರಾನ್ಸ್ ಕೈಜೋಡಿಸಿದರೆ ವಿಶ್ವಕ್ಕೆ ಭದ್ರತೆ ಒದಗಿಸಬಹುದು.

-ನರೇಂದ್ರ ಮೋದಿ, ಪ್ರಧಾನಿ

-ನಿಮ್ಮಿಬ್ಬರಿಂದ ವಿಶ್ವಕ್ಕೆ ಭದ್ರತೆಯನ್ನು ಕೊಡುವವರಾರು?

................................................................................

* ಗುಂಡಿನ ಮಳೆಯ ಕೆಳಗೆ ಶಾಂತಿ ಅಸಾಧ್ಯ.
- ಪ್ರಣವ್ ಮುಖರ್ಜಿ, ರಾಷ್ಟ್ರಪತಿ

-ಯಾವುದಾದರೂ ಆಗಬಹುದು, ಮಳೆ ಸುರಿದರೆ ಸಾಕು ಎನ್ನುವುದು ರೈತರ ಬೇಡಿಕೆ. ............................................................................

* ನಮ್ಮ ಪಕ್ಷ 18ರ ಸಂಖ್ಯೆ ಬಂದಾಗಲೆಲ್ಲ ಅಧಿಕಾರ ಪಡೆದುಕೊಂಡಿದೆ. 2018ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ.

- ಎಚ್.ಡಿ. ರೇವಣ್ಣ, ಮಾಜಿ ಸಚಿವ

-ಮತದಾರರು 18ನ್ನು 19 ಎಂದು ಕರೆಯಲು ನಿರ್ಧರಿಸಿದ್ದಾರಂತೆ.

....................................................................................

* ಸಚಿನ್ ತೆಂಡುಲ್ಕರ್‌ರಂತಹ ತಾರೆಯರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುವುದು ವ್ಯರ್ಥ.

-ಶತ್ರುಘ್ನ ಸಿನ್ಹಾ, ಸಂಸದ

-ತಾವೂ ಸಿನೆಮಾ ತಾರೆಯೇ ಅಲ್ಲವೇ?

...........................................................................................

* ಕರ್ನಾಟಕ ಉಗ್ರರ ಸುರಕ್ಷಿತ ತಾಣವಾಗುತ್ತಿದೆ.

- ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ

- ನಿಮ್ಮವರು ಬಹಿರಂಗವಾಗಿ ಮಾಡುತ್ತಿರುವ ಕೃತ್ಯಗಳನ್ನು ನೋಡುವಾಗ ಅದು ನಿಜ ಅನ್ನಿಸುತ್ತದೆ.

.......................................................................................

* ನನ್ನ ಸಾವಿನ ಸುದ್ದಿ ಸುಳ್ಳು.

- ಶರದ್‌ಪವಾರ್, ಎನ್‌ಸಿಪಿ ನಾಯಕ

-ಸುಳ್ಳು ಎನ್ನುವುದನ್ನು ಸಾಕ್ಷಿ ಸಮೇತ ಸಾಬೀತುಗೊಳಿಸಿ.

........................................................................................

* ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ.

- ಎಲ್.ಕೆ. ಅಡ್ವಾಣಿ, ಬಿಜೆಪಿ ಮುಖಂಡ

-ಹೌದು. ಆಗಾಗ ನಿಮಗೆ ಮಾತನಾಡುವುದಕ್ಕೆ ಅವಕಾಶ ಸಿಗುತ್ತಿರುವುದೇ ಅದಕ್ಕೆ ಉತ್ತಮ ಉದಾಹರಣೆ.

.................................................................................................

* ಇಂದು ಪ್ರಕೃತಿಯಲ್ಲಿರುವ ಕ್ರಿಮಿಕೀಟಗಳು, ಮರಗಿಡ ಜೀವ ವೈವಿಧ್ಯಗಳೆಲ್ಲವುಗಳ ಮೇಲೂ ದಾಳಿಯಾಗುತ್ತಿವೆ.

- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

-ದಾಳಿಗಳು ಈಗ ಸಂಸ್ಕೃತಿ ರಕ್ಷಣೆ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗುತ್ತಿವೆ.

...............................................................................

* ಭಾರತ ಮಾಡುತ್ತಿರುವ ಸಾಧನೆ ಕುರಿತು ಯಾರೂ ಮಾತನಾಡುತ್ತಿಲ್ಲ.

- ಡೊನಾಲ್ಡ್ ಟ್ರಂಪ್, ಅಮೆರಿಕ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ

-ಬೆಳೆಯುತ್ತಿರುವ ಅಸಹಿಷ್ಣುತೆಯನ್ನು ಉಲ್ಲೇಖಿಸಿ ಈ ಮಾತೇ?

.....................................................................................

* ಆಕಾಶದಲ್ಲೇನಿದೆ. ಪಾತಾಳದಲ್ಲೇನಿದೆ ಎನ್ನುವುದೆಲ್ಲವೂ ದೇವೇಗೌಡರಿಗೆ ಗೊತ್ತಿದೆ.

- ಜಾಫರ್ ಶರೀಫ್, ಕಾಂಗ್ರೆಸ್ ನಾಯಕ

-ಶರೀಫರ ತಲೆಯೊಳಗೆ ಏನಿದೆ ಎನ್ನುವುದನ್ನೊಂದು ಬಿಟ್ಟು.

......................................................................

*ಎಲ್ಲಿಯವರೆಗೆ ಸಾಮಾಜಿಕ ತಾರತಮ್ಯ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿಯೂ ಇರಬೇಕು.

- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

-ಹೇಳಿ. ಎಲ್ಲಿಯವರೆಗೆ ತಾರತಮ್ಯ ಇರಬೇಕು ಎಂದು ಬಯಸುತ್ತೀರಿ?

........................................................................................

* ಸರಕಾರಿ ಬಸ್‌ಗಳು ಡಕೋಟಾ ಆಗಿದೆ.

- ಕೆ.ಎಸ್. ಈಶ್ವರಪ್ಪ, ಪರಿಷತ್ ಪ್ರ.ಪ.ನಾಯಕ

-ನಿಮ್ಮ ಪಕ್ಷಕ್ಕಿಂತ ವಾಸಿ.

...........................................................................

* ಕಾಂಗ್ರೆಸ್‌ನ ಒಳಗೇ ನಮಗೆ ಎದುರಾಳಿಗಳಿದ್ದಾರೆ.

- ಡಾ.ಜಿ.ಪರಮೇಶ್ವರ್, ಗೃಹಸಚಿವ

-ಇದು ಗೊತ್ತಿರುವ ಸಂಗತಿಯೇ ಅಲ್ಲವೇ?

.............................................................................................

* ಈಗಿನ ರಾಜಕೀಯ ನಮ್ಮಂತಹವರಿಗಲ್ಲ.

- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

-ದೇವೇಗೌಡರಂಥವರಿಗೇ ವಾಸಿ ಎನ್ನುತ್ತೀರಾ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!