ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹೆದರುವುದಿಲ್ಲ - ಜಾಫರ್ ಶರೀಫ್, ಕಾಂಗ್ರೆಸ್ ನಾಯಕ

Update: 2016-03-07 06:33 GMT


   
          
    
ಮೊಮ್ಮಕ್ಕಳಿಗಷ್ಟೇ ಹೆದರುವುದು ಎಂದಾಯಿತು.

---------------------
                    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದಕ್ಕೆ ಕಾಂಗ್ರೆಸ್ ಕಾರಣವಲ್ಲ -
     
ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಬಹುಶಃ ನಿಮ್ಮ ಆಡಳಿತದ ಅನಾಚಾರ, ಭ್ರಷ್ಟಾಚಾರ ಕಾರಣವಿರಬಹುದು.

---------------------
 
                      ಬಜೆಟ್ ನನಗೆ ಪರೀಕ್ಷೆ ಇದ್ದಂತೆ.

-ನರೇಂದ್ರ ಮೋದಿ, ಪ್ರಧಾನಿ
 
ನಿಮ್ಮ ಹೆಸರಿನಲ್ಲಿ ಪರೀಕ್ಷೆ ಬರೆಯುವವರು ಮಾತ್ರ ಅಂಬಾನಿ, ಅದಾನಿಗಳಂತೆ.

---------------------
                       
                ಗೋಮಾಂಸ ರಫ್ತಿನಲ್ಲಿ ನಮ್ಮ ದೇಶ ಪ್ರಥಮ ಸ್ಥಾನದಲ್ಲಿರುವುದು ದುರದೃಷ್ಟಕರ

- ಪ್ರಮೋದ್ ಮಧ್ವರಾಜ್,ಶಾಸಕ
     ವಾಣಿಜ್ಯೋದ್ಯಮದಲ್ಲಿ ದೇಶ ಪ್ರಥಮ ಸ್ಥಾನದಲ್ಲಿರುವುದಕ್ಕಾಗಿ ಕೊರಗುವ ದೇಶಪ್ರೇಮಿಗಳು!
---------------------
 
               ಇದು (ವೇಮುಲಾ ಆತ್ಮಹತ್ಯೆ) ಬಿಜೆಪಿ ಮಾಡಿದ ಕೊಲೆ

- ಸೀತಾರಾಂ ಯೆಚೂರಿ, ಸಿಪಿಎಂ ಮುಖಂಡ
    ಅವನ ಪರವಾಗಿ ನೀವು ಮಾತನಾಡಬೇಕಾದರೆ ಅವನು ಕೊಲೆಯಾಗುವುದು ಅತ್ಯಗತ್ಯವಾಗಿತ್ತೆ?
---------------------
 
                ಪ್ರಧಾನಿ ಮೋಜಿಗಾಗಿ ದೇಶ ಸುತ್ತುತ್ತಿಲ್ಲ

-ರೇಣುಕಾಚಾರ್ಯ,ಮಾಜಿ ಸಚಿವ
     
ಮೋಜಿಗಾಗಿಯಾದರೂ ಸರಿ, ಒಮ್ಮೆ ಸರಿಯಾಗಿ ತನ್ನ ದೇಶವನ್ನು ಸುತ್ತಲಿ.

---------------------
       
               ಭಾರತೀಯ ಜನತಾ ಪಕ್ಷದ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು -

ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿ
     ಅವರ ಸಹವಾಸದಲ್ಲಿ ನೀವು ಒಂದಿಷ್ಟು ಸುಳ್ಳು ಹೇಳುವುದನ್ನು ಕಲಿತಿರಬೇಕಲ್ಲ?
---------------------
 
                ವಿಶ್ವವಿದ್ಯಾನಿಲಯಗಳಲ್ಲಿ ಗತ ವೈಭವ ಪುನರ್ ಸ್ಥಾಪಿಸಬೇಕು.

- ಚಂದ್ರಬಾಬು ನಾಯ್ಡು , ಆಂಧ್ರ ಪ್ರದೇಶ ಮುಖ್ಯಮಂತ್ರಿ
 
ಇಡೀ ವಿಶ್ವವಿದ್ಯಾನಿಲಯಗಳನ್ನು ಜೈಲಾಗಿ ಪರಿವರ್ತಿಸಲು ಕೇಂದ್ರ ಸಚಿವೆ ಇರಾನಿ ಯೋಜನೆ ಹಾಕಿದ್ದಾರಂತೆ.

---------------------
 ನಾನು ಪ್ರಧಾನಿ ಮೋದಿಗಿಂತ ದೊಡ್ಡ ದೇಶ ಪ್ರೇಮಿ.
             - ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
 ಮತ್ಯಾಕೆ ಇನ್ನೂ ಜೈಲು ಸೇರಿಲ್ಲ?
---------------------
 
                         ರಾಷ್ಟ್ರ ನಾಯಕರ ಪ್ರತಿಮೆ ನಿರ್ಮಿಸುವುದು ಬಹಳ ಸುಲಭ, ಅದಕ್ಕೆ ತೊಂದರೆಯಾಗದಂತೆ ಕಾಪಾಡುವುದು ಕಷ್ಟ - ಡಾ.ಬಿ.ಪರಮೇಶ್ವರ್, ಗೃಹ ಸಚಿವ

ಮೊದಲು ಜೀವ ಇರುವ ಮನುಷ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ.

---------------------
 
                  ಮುಖ್ಯಮಂತ್ರಿಗಿಂತ ನಾನು ಅನುಭವಿ

-ಶ್ರೀನಿವಾಸ್ ಪ್ರಸಾದ್, ಕಂದಾಯ ಸಚಿವ
 
ನಿಮ್ಮ ವಾಚ್‌ನ ಬೆಲೆ ಎಷ್ಟು, ಎನ್ನುವುದರ ಆಧಾರದ ಮೇಲೆ ಅನುಭವ ನಿರ್ಧಾರವಾಗುತ್ತದೆ.

---------------------
 
                      ಕಾಂಗ್ರೆಸ್ ಪಕ್ಷ ಒಂದು ಮನೆ ಇದ್ದಂತೆ

-ಎಚ್.ವಿಶ್ವನಾಥ್, ಕಾಂಗ್ರೆಸ್ ನಾಯಕ
 
ಸೋರುತಿರುವ ಮನೆ.

---------------------
 ನನ್ನ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗುತ್ತಿದೆ.
                     -ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
 
ಕದ್ದು ಮುಚ್ಚಿ ಮಾತನಾಡುವುದನ್ನು ಮೊದಲು ನಿಲ್ಲಿಸಿ.

---------------------
 ರಾಜ್ಯ ಸರಕಾರ ಅಮೆರಿಕದಲ್ಲೂ ಇಲ್ಲದಂತಹ ಹಲವಾರು ಯೋಜನೆಗಳನ್ನು

                        ಜಾರಿಗೆ ತಂದಿದೆ

-ಯು.ಟಿ. ಖಾದರ್, ಆರೋಗ್ಯ ಸಚಿವ
 
ಒಬಾಮ ಚಿಕಿತ್ಸೆಗಾಗಿ ಭಾರತದ ಸರಕಾರಿ ಆಸ್ಪತ್ರೆಗೆ ಆಗಮಿಸಲಿದ್ದಾರಂತೆ.

---------------------
 
                   ನನ್ನ ಹೃದಯದಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿದೆ.

- ಬಾನ್-ಕಿ-ಮೂನ್, ವಿಶ್ವ ಸಂಸ್ಥೆ ಮುಖ್ಯಸ್ಥ
  ಭದ್ರತಾ ಮಂಡಳಿಯಲ್ಲೂ ಭಾರತಕ್ಕೆ ಆ ಸ್ಥಾನ ಸಿಕ್ಕಿದರೆ ಚೆನ್ನಾಗಿತ್ತು.
---------------------
ಯಡಿಯೂರಪ್ಪ ನಮ್ಮ ಪಕ್ಷಾತೀತ ನಾಯಕ.
                   -ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ
  ಅಂದರೆ, ಪಕ್ಷಕ್ಕೂ ಅವರ ನಾಯಕತ್ವಕ್ಕೂ ಸಂಬಂಧವಿಲ್ಲವೇ?
---------------------
 
                      ಕೆಲವರಿಗೆ ವಯಸ್ಸಿನ ಜೊತೆ ಬುದ್ಧಿ ಬೆಳೆಯುವುದಿಲ್ಲ.

- ನರೇಂದ್ರ ಮೋದಿ, ಪ್ರಧಾನಿ
  ಬುದ್ಧಿ ಬೆಳೆದಿದ್ದರೆ, ನಿಮ್ಮ ಪತ್ನಿ ನಿಮ್ಮಿಂದ ದೂರವಾಗುತ್ತಿದ್ದರೇ?
---------------------
 
            ಕಸಾಪ ಅಧಿಕಾರ ವಹಿಸಿಕೊಳ್ಳುವವರು ಪುಣ್ಯವಂತರು.

- ಪುಂಡಲೀಕ ಹಾಲಂಬಿ , ಕಸಾಪ ಮಾಜಿ ಅಧ್ಯಕ್ಷ
  ಖಜಾನೆ ತುಂಬಿ ತುಳುಕುತ್ತಿದೆಯೇ?
---------------------
         
                
  ಪಾಕಿಸ್ತಾನ ದಿವಾಳಿಯಾದರೂ ಸರಿ ಪರಮಾಣು ಕಾರ್ಯಕ್ರಮ ಕೈ ಬಿಡೆವು.

- ಇಶಾದ್ ದಾರ್, ಪಾಕ್ ಹಣಕಾಸು ಸಚಿವ ಮಗ ಸತ್ತರೂ ಪರವಾಗಿಲ್ಲ..ಸೊಸೆ ವಿಧವೆಯಾಗಬೇಕು ಎಂಬ ಆಸೆಯೇ?
---------------------

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!