ಅಬುಲ್ ಕಲಾಂ ಆಝಾದ್‌ರಂತಹವರು ಕೊನೆಯುಸಿರೆಳೆಯುವ ಮುನ್ನ ‘ಭಾರತ್ ಮಾತಾ ಕಿ ಜೈ’ ಎಂದು ಹೇಳಿ ಪ್ರಾಣ ಬಿಟ್ಟಿದ್ದಾರೆ

Update: 2016-04-10 18:17 GMT

ಅಬುಲ್ ಕಲಾಂ ಆಝಾದ್‌ರಂತಹವರು ಕೊನೆಯುಸಿರೆಳೆಯುವ ಮುನ್ನ ‘ಭಾರತ್ ಮಾತಾ ಕಿ ಜೈ’ ಎಂದು ಹೇಳಿ ಪ್ರಾಣ ಬಿಟ್ಟಿದ್ದಾರೆ 

- ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ

ನಿಮ್ಮ ಕಿವಿಗೆ ಅದು ಕೇಳಿಸಬೇಕಾದರೆ, ಹಿಂದಿನಿಂದ ನೀವು ಅವರ ಕುತ್ತಿಗೆಗೆ ಚಾಕು ಹಿಡಿದು ನಿಂತಿದ್ದಿರೇ ಎಂದು ಭಾವಿಸಬೇಕಾಗುತ್ತದೆ.

 ---------------------

‘ಭಾರತ್ ಮಾತಾ ಕಿ ಜೈ’ ಎನ್ನದವರಿಗೆ ಈ ದೇಶದಲ್ಲಿರುವ ಹಕ್ಕಿಲ್ಲ

- ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ

ನಾವೆಲ್ಲ ಇಂಡಿಯಾಕ್ಕೆ ವಲಸೆ ಹೋಗಬೇಕೆಂದಿದ್ದೇವೆ. 

---------------------

ಭಯೋತ್ಪಾದನೆ ಮಾನವೀಯತೆಯ ಶತ್ರು 

- ನರೇಂದ್ರ ಮೋದಿ, ಪ್ರಧಾನಿ

ಮಾನವ ಹಕ್ಕು ಆಯೋಗದ ಮೇಲೆ ನಿಮಗಿರುವ ದ್ವೇಷದ ಕಾರಣ ಗೊತ್ತಾಯಿತು.

 ---------------------

ಬಂಡಾಯ ಧೋರಣೆಯ ಕವಿತೆಗಳು ರಚನೆಯಾಗುತ್ತಿರುವುದು ಉತ್ತಮ ಬೆಳವಣಿಗೆ

 - ಡಾ.ಸಿದ್ದಲಿಂಗಯ್ಯ, ಹಿರಿಯ ಕವಿ

ಸಿದ್ದಲಿಂಗಯ್ಯ ವಿರುದ್ಧವೇ ದಲಿತರು ಬಂಡಾಯ ಕವಿತೆ ರಚಿಸುತ್ತಿರುವುದು ಕಾವ್ಯ ಲೋಕದ ಹೊಸ ಪ್ರಕಾರವಂತೆ.

 ---------------------

ಭ್ರಷ್ಟಾಚಾರ ನಿಗ್ರಹ ದಳ ವಿಚಾರದಲ್ಲಿ ಬಿಜೆಪಿಯವರಿಗೆ ಹೋರಾಟ ಮಾಡಲು ನೈತಿಕತೆಯಿಲ್ಲ 

- ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಆ ದಳಕ್ಕೆ ಜಾತ್ಯತೀತ ಎಂಬ ಹೆಸರು ಸೇರಿದರೆ ನಿಮ್ಮ ಒಪ್ಪಿಗೆ ಇದೆಯೇ?

---------------------

ನಾನು ಕಾನೂನನ್ನು ಗೌರವಿಸುತ್ತೇನೆ. ಇಲ್ಲದಿದ್ದರೆ ‘ಭಾರತ್ ಮಾತಾ ಕಿ ಜೈ’ ಕೂಗಲು ಒಲ್ಲದವರ ತಲೆ ಕಡಿಯುತ್ತಿದ್ದೆ 

- ಬಾಬಾ ರಾಮ್‌ದೇವ್, ಯೋಗ ಗುರು

ಕಾನೂನನ್ನು ಗೌರವಿಸುವವರು ಚೂಡಿದಾರ ಧರಿಸಿ, ಮಹಿಳೆಯರ ಮಧ್ಯೆ ಅವಿತದ್ದು ದೇಶ ಮರೆತಿಲ್ಲ.

---------------------

ಕೇರಳದಲ್ಲಿ ತಾವರೆ ಅರಳಲಿದೆ 

- ಕೃಷ್ಣ ಜೆ.ಪಾಲೆಮಾರ್, ಮಾಜಿ ಸಚಿವ

ಕರ್ನಾಟಕದಲ್ಲಿ ತಾವರೆಯನ್ನು ಮುದುಡಿಸಿದವರ ಮಾತುಗಳನ್ನು ನಂಬುವುದು ಹೇಗೇ?

---------------------

ಕರ್ನಾಟಕ ಗುಜರಾತ್ ಅಲ್ಲ 

- ವೈ.ಎಸ್.ವಿ.ದತ್ತ, ಶಾಸಕ

     ಆ ಬಗ್ಗೆ ನಿಮಗೆ ವಿಷಾದವಿದೆಯೇ?

---------------------

     ಪ್ರಪಂಚ ಕೊಂಡಾಡುವುದು ಹೋರಾಟಗಾರರನ್ನೇ ಹೊರತು ಪಲಾಯನವಾದಿಗಳನ್ನಲ್ಲ

- ಹೇಮಾ ಮಾಲಿನಿ, ಬಾಲಿವುಡ್ ನಟಿ

     ಯಾವ ಸಿನೆಮಾದ ಸಂಭಾಷಣೆ ಇದು?

---------------------

ಮೋದಿ ಭಾರತ ಮಾತೆಯ ಬೆನ್ನಿಗೆ ಚೂರಿ ಇರಿದಿದ್ದಾರೆ 

- ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ

ಪರವಾಗಿಲ್ಲ, ನೀವು ಹೊಟ್ಟೆಗೆ ಇರಿಯಿರಿ. 

---------------------

ವಿಜ್ಞಾನ, ತಂತ್ರಜ್ಞಾನ ವಿದೇಶದ್ದಲ್ಲ

- ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ

ಎಲ್ಲ, ತಮ್ಮ ಎಸ್‌ಡಿಎಂ ಕಾಲೇಜಿನದ್ದು ಎಂದು ಪೇಟೆಂಟ್ ತೆಗೆದುಕೊಳ್ಳುವ ಯೋಚನೆಯೇ?

---------------------

ಕಳ್ಳನ ಕೈಗೆ ಕೀಲಿ ಕೊಡುವ ಕೆಲಸ ಸಿದ್ದರಾಮಯ್ಯ ಸರಕಾರ ಮಾಡುತ್ತಿದೆ 

- ಪ್ರಹ್ಲಾದ್ ಜೋಷಿ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ

ಯಡಿಯೂರಪ್ಪನ ಕೈಗೆ ಕೀಲಿ ಕೈ ಕೊಟ್ಟಿರುವುದರ ಬಗ್ಗೆ ಸಿದ್ದರಾಮಯ್ಯ ಕೂಡ ಇದನ್ನೇ ಹೇಳುತ್ತಿದ್ದಾರೆ.

---------------------

ಪಠಾಣ್‌ಕೋಟ್ ದಾಳಿ ಭಾರತದ ನಾಟಕ

 - ಪಾಕಿಸ್ತಾನ್ ಟುಡೆ, ಪಾಕ್ ಪತ್ರಿಕೆ

ಆ ನಾಟಕದಲ್ಲಿ ತಮ್ಮ ಪಾತ್ರ ಏನಿತ್ತು ಎನ್ನುವುದಾದರೂ ತಿಳಿಸಿ. 

---------------------

ಎಸಿಬಿ ಎಂದರೆ ಕೋಳಿ ಫಾರಂಗೆ ತೋಳವೇ ಮೇನೆಜರ್ ಆದಂತೆ

 - ಎಸ್.ಆರ್.ಹಿರೇಮಠ್, ಸಾಮಾಜಿಕ ಹೋರಾಟಗಾರ

ನೀವು ಇಚ್ಛೆಪಟ್ಟರೆ, ನರಿಗಳನ್ನು ಮೇನೆಜರ್ ಮಾಡಲು ನಾವು ಸಿದ್ಧ ಎಂದರಂತೆ ಸಿದ್ದರಾಮಯ್ಯ.

---------------------

ಸಚಿವ ಸ್ಥಾನ ನಮ್ಮ ಕುಟುಂಬದ ಆಸ್ತಿಯಲ್ಲ

- ಯು.ಟಿ.ಖಾದರ್, ಆರೋಗ್ಯ ಸಚಿವ

     ತಮ್ಮ ಕುಟುಂಬದ ಆಸ್ತಿಯೇನು ಎನ್ನುವುದನ್ನಾದರೂ ಘೋಷಿಸಬಹುದಲ್ಲ?

---------------------

     25 ವರ್ಷಗಳಲ್ಲಿ ಬಿಜೆಪಿ ಎಲ್ಲಾ ಚುನಾವಣೆಗಳನ್ನೂ ಗೆಲ್ಲಬೇಕು

- ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಚುನಾವಣೆಗಳನ್ನೇ ನಡೆಸದೇ ಇರುವುದು ಅದಕ್ಕಿರುವ ಒಂದೇ ಮಾರ್ಗ. 

--------------------

     ಕೇಜ್ರಿವಾಲ್ ಪ್ರಧಾನಿ ಮೋದಿಯನ್ನು ಐಎಸ್‌ಐ ಏಜೆಂಟ್ ಎಂದು ಕರೆದದ್ದು ಖಂಡನೀಯ

- ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ

     ಆರೆಸ್ಸೆಸ್ ಏಜೆಂಟ್ ಎನ್ನುವುದಷ್ಟೇ ಅವರಿಗೆ ಶೋಭಿಸುತ್ತದೆ ಎನ್ನುತ್ತೀರಾ?

---------------------

     ಗುಜರಾತ್ ಮಾದರಿಯಲ್ಲಿ ಎಸಿಬಿ ರಚನೆ ಮಾಡಲಾಗಿದೆ

- ರಮಾನಾಥ ರೈ, ಸಚಿವ

     ನಿಮಗೆ ಗುಜರಾತ್ ರಾಜ್ಯ ಮಾದರಿಯೆ?

---------------------   

 ಈ ಪ್ರಪಂಚದ ಎಲ್ಲ ಪುರುಷರು-ಮಹಿಳೆಯರು ಕೆಟ್ಟವರು-ಒಳ್ಳೆಯವರು ಅಲ್ಲ

- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎನ್ನುವುದನ್ನು ಪರೀಕ್ಷಿಸುವುದಕ್ಕೋಸ್ಕರ ರುಚಿ ನೋಡಿದ್ದೆಂದು ಕಾಣುತ್ತದೆ.

 ---------------------

ಹಸುಗಳನ್ನು ಸಾಕುತ್ತಿರುವ ಮನೆಗಳಿಗೆ ಹೆಣ್ಣು ಕೊಡದಿರುವ ಸಂಸ್ಕೃತಿ ಬೆಳೆಯುತ್ತಿದೆ

- ಡಾ.ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ, ಧರ್ಮಸ್ಥಳ

ಬದುಕು ಹಸುವಿಗಿಂತ ಕಡೆಯಾಗಿ ಹೋಗಬಾರದಲ್ಲ, ಅದಕ್ಕೆ. 

--------------------

ಪಾಕಿಸ್ತಾನ ರಚನೆಯಲ್ಲಿ ಆರೆಸ್ಸೆಸ್ ಕೈವಾಡ ಇದೆ

- ಜಿ.ಕೆ.ಗೋವಿಂದರಾವ್, ಸಾಹಿತಿ

ಆರೆಸ್ಸೆಸ್ ರಚನೆಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎನ್ನುವುದು ಭಾರತೀಯರ ಅನುಮಾನ. 

---------------------

*ಸಾವಿಲ್ಲದ ಮನೆಯಿಲ್ಲ, ಭ್ರಷ್ಟಾಚಾರವಿಲ್ಲದ ಸಂಸ್ಥೆ ಇಲ್ಲ

- ಸಂತೋಷ್ ಹೆಗ್ಡೆ, ನಿವೃತ್ತ ನ್ಯಾಯಮೂರ್ತಿ

ಅಪರಾಧಿಗಳಿರುವ ಜೈಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!