ಪಾಪದ ಫಲ ಹಂಚಿಕೊಳ್ಳಲು ನಮ್ಮಂದಿಗೆ ಯಾರೂ ಇರುವುದಿಲ್ಲ.

Update: 2016-06-05 18:00 GMT

ಪಾಪದ ಫಲ ಹಂಚಿಕೊಳ್ಳಲು ನಮ್ಮಂದಿಗೆ ಯಾರೂ ಇರುವುದಿಲ್ಲ.

-ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

ಹಾಗೆಂದು ಅಬಾರ್ಷನ್ ಮಾಡಿಸೋದು ತಪ್ಪು.
 ---------------------
  ಪೊಲೀಸರ ಪ್ರತಿಭಟನೆ ಒಳ್ಳೆಯ ಬೆಳವಣಿಗೆಯಲ್ಲ.

-ಸದಾನಂದ ಗೌಡ, ಕೇಂದ್ರ ಸಚಿವ

ರಾಜಕಾರಣಿಗಳೆಲ್ಲ ಪ್ರತಿಭಟನೆಯ ಭಾಗವಾಗಿ ತಮ್ಮ ರಾಜೀನಾಮೆಗಳನ್ನು ನೀಡಿದರೆ ಅದೆಷ್ಟು ಚೆನ್ನಾಗಿತ್ತು.
 ---------------------
ಯಡಿಯೂರಪ್ಪ ವ್ಯಕ್ತಿತ್ವದಲ್ಲೇ ಬಿಜೆಪಿಯ ಶಕ್ತಿ ಅಡಗಿದೆ

-ಜನಾರ್ದನ ರೆಡ್ಡಿ, ಮಾಜಿ ಸಚಿವ

ಮೊದಲು ಜನಾರ್ದನ ರೆಡ್ಡಿಯ ಹಣದಲ್ಲಿ ಅಡಗಿತ್ತು ಎಂದು ನಾಯಕರು ನಂಬಿದ್ದರೇ?
---------------------
 ಸಿದ್ದರಾಮಯ್ಯರಿಂದಲೇ ಕಾಂಗ್ರೆಸ್ ಮುಕ್ತ ರಾಜ್ಯ

-ಜನಾರ್ದನ ಪೂಜಾರಿ, ಮಾಜಿ ಕೇಂದ್ರ ಸಚಿವ

  ಮಂಗಳೂರು ಮುಕ್ತ ಕಾಂಗ್ರೆಸ್ ಮಾಡಿದವರಿಂದ ಈ ಭವಿಷ್ಯವೇ?
---------------------
ನಾನು ಪಾಪದ ಹಾದಿ ತುಳಿಯುವುದಿಲ್ಲ

 -ನರೇಂದ್ರ ಮೋದಿ, ಪ್ರಧಾನಿ

ಸದಾ ವಿಮಾನದಲ್ಲಿ ಹಾರಾಡುವವರಿಗೆ ತುಳಿಯುವುದಕ್ಕೆ ಅವಕಾಶವಾದರೂ ಎಲ್ಲಿದೆ?
---------------------
                           ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನಕ್ಕೆ ದಿಲ್ಲಿಗೆ ಗುರಿಯಿಡಲು ಐದು ನಿಮಿಷ ಸಾಕು

 -ಡಾ.ಅಬ್ದುಲ್ ಖಾದರ್ ಖಾನ್,ಪಾಕ್ ಅಣು ಯೋಜನೆಯ ಪಿತಾಮಹ
  
ಗುರಿಯಿಲ್ಲದ ದೇಶದ ಹಗಲು ಗನಸು. 
---------------------
ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಆಸ್ತಿಕರಾಗುತ್ತಿರುವುದು ಸಂತೋಷದ ವಿಷಯ 

-ಕೆ.ಎಸ್. ಈಶ್ವರಪ್ಪ, ವಿಪಕ್ಷ ನಾಯಕ


 ನಿಮ್ಮ ಆರತಿಯ ತಟ್ಟೆಗೇನಾದರೂ ದಕ್ಷಿಣೆ ಬೀಳಬಹುದು ಎಂಬ ಆಸೆಯೇ?
---------------------
ಇನ್ನು ಮುಂದೆ ಪಕ್ಷ ಹಾಗೂ ಸರಕಾರಕ್ಕೆ ಮುಜುಗರ ಮಾಡುವಂತಹ ಹೇಳಿಕೆಗಳನ್ನು ನೀಡುವುದಿಲ್ಲ.

 -ಎಚ್.ಆಂಜನೇಯ, ಸಚಿವ


ಬರೇ ಸಿದ್ದರಾಮಯ್ಯ ಮಾತ್ರ ಮುಜುಗರ ಪಡಲಿ ಎನ್ನುವ ಉದ್ದೇಶವೋ?
---------------------
ಕಾಂಗ್ರೆಸ್ 60 ವರ್ಷದಲ್ಲಿ ಮಾಡದ ಅಬಿವೃದ್ಧಿಯನ್ನು ಬಿಜೆಪಿ 2 ವರ್ಷದಲ್ಲಿ ಮಾಡಿದೆ- 

-ವಿ.ಸೋಮಣ್ಣ, ಮಾಜಿ ಸಚಿವ

ಯಾವ ದೇಶದ ಅಭಿವೃದ್ಧಿ ಎನ್ನುವುದನ್ನೂ ವಿವರಿಸಿದರೆ ಚೆನ್ನಾಗಿತ್ತು. 
---------------------
ಮೋದಿಯದ್ದು ಯು ಟರ್ನ್ ಸರಕಾರ

 -ರಮಾನಾಥ ರೈ, ಸಚಿವ

ಜಶೋದಾ ಬೆನ್ ದೆವ್ವದ ಪಾತ್ರ ನಿರ್ವಹಿಸಬಹುದು ಎನ್ನುವುದು ಯೂ ಟರ್ನ್ ಚಿತ್ರ ನೋಡಿದವರ ಅನಿಸಿಕೆ. 
---------------------
  ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಆ ಪಕ್ಷದವರೇ ಸಾಕು

-ಸಿ.ಎಂ. ಉದಾಸಿ, ಮಾಜಿ ಸಚಿವ 

ಬಿಜೆಪಿಯನ್ನು ಆ ಪಕ್ಷದವರೇ ಮುಕ್ತಗೊಳಿಸಿದ ಹಾಗೆ. 
---------------------
ನನ್ನ ಮೊದಲ ಶತ್ರು ಕಾಂಗ್ರೆಸ್

-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

ನಿಮ್ಮ ಮಾತು ಕೇಳಿ ಬಿಜೆಪಿ ನಾಚಿ ನುಲಿಯಿತು.
 ---------------------
ಶೀಘ್ರದಲ್ಲಿಯೇ ಕನ್ನಡ ಕಲಿಯುವೆ

-ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
  
ಜೊತೆಗೆ ಬೆಂಗಳೂರಿನಲ್ಲಿರುವ ಕನ್ನಡಿಗರಿಗೂ ಕನ್ನಡ ಕಲಿಸಿ.
 ---------------------
  ನರೇಂದ್ರ ಮೋದಿ ಭಾರತದ ಪ್ರಧಾನಿ, ಚಕ್ರವರ್ತಿಯಲ್ಲ

-ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ  

ತಾವು ಯುಪಿಎ ಅಧ್ಯಕ್ಷೆ. ಭಾರತದ ಪ್ರಧಾನಿಯಲ್ಲ ನೆನಪಿಡಿ.
 ---------------------
  ಪೊಲೀಸರೂ ಮನುಷ್ಯರೇ

-ಜನಾರ್ದನ ಪೂಜಾರಿ, ಮಾಜಿ ಕೇಂದ್ರ ಸಚಿವ

  ಜನಸಾಮಾನ್ಯರು ಮಾತ್ರ ಪ್ರಾಣಿಗಳು ಎಂಬ ಅಭಿಪ್ರಾಯವೇ?
---------------------
  ನಮಗಿಂದು ಪ್ರಜಾ ಸೇವಕರು ಬೇಕು

-ನ್ಯಾ. ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ

  ವಿಧಾನಸೌಧದ ಸಂತೆಯಲ್ಲಿ ಮಾರಾಟಕ್ಕಿದ್ದಾರೆ. ಬೇಕಾದರೆ ಕೊಂಡುಕೊಳ್ಳಬಹುದು.
---------------------
 ಮುಸ್ಲಿಂ ಯುವಕರನ್ನು ಬಂಧಿಸಿ ಅವರ ವಿರುದ್ಧ ಭಯೋತ್ಪಾದನೆಯ ಸುಳ್ಳು ಕೇಸು ಹೂಡುತ್ತಿರುವುದು ಕಳವಳಕಾರಿ ಸಂಗತಿ

-ಡಿ.ವಿ. ಸದಾನಂದ ಗೌಡ , ಕೇಂದ್ರ ಸಚಿವ

  ಅಂದರೆ ನೇರವಾಗಿ ಗಲ್ಲಿಗೇರಿಸುವ ಉದ್ದೇಶವೇ?
---------------------
  ಮೋದಿ ಜಾಗತಿಕ ಮಟ್ಟದ ನಾಯಕ

-ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

  ಹಾಗಾದರೆ ರಾಜ್ಯಸಭೆಗೆ ನೀವು ಲಂಡನ್‌ನಿಂದ ಸ್ಪರ್ಧಿಸಬಹುದಲ್ಲ?
---------------------
ಸಿಎಂ ಸಿದ್ದರಾಮಯ್ಯರಿಂದ ಪ್ರಜಾಪ್ರಭುತ್ವದ ಕಗ್ಗೊಲೆ

-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

  ಚಾಕುವಿನಲ್ಲಿ ನಿಮ್ಮ ಕೈ ಗುರುತುಗಳಿವೆಯಂತೆ.
---------------------
ಅಮೆರಿಕದ ಮಾಧ್ಯಮಗಳಿಗೆ ಪ್ರಾಮಾಣಿಕತೆಯೇ ಇಲ್ಲ
-ಡೊನಾಲ್ಡ್ ಟ್ರಂಪ್
  ಪ್ರಾಮಾಣಿಕತೆ ಯಾವ ಕಂಪೆನಿಯ ಜಾಹಿರಾತು?
---------------------
ಸಿದ್ದರಾಮಯ್ಯರಿಗೆ ಭ್ರಷ್ಟಾಚಾರ ನಿರ್ಮೂಲನೆಗಿಂತ ಜೆಡಿಎಸ್ ನಿರ್ನಾಮವೇ ಮುಖ್ಯವಾಗಿದೆ 

-ದೇವೇಗೌಡ, ಮಾಜಿ ಪ್ರಧಾನಿ

ಬಹುಶಃ ಭ್ರಷ್ಟಾಚಾರದ ಮೂಲವೇ ಜೆಡಿಎಸ್ ಎನ್ನುವುದನ್ನು ಅವರು ಕಂಡುಕೊಂಡಿರಬೇಕು.
 ---------------------
ಶಾಸಕರ ಓಟಿಗಾಗಿ ಡೀಲ್ ಪ್ರಕರಣ ಕೇಳಲಿಕ್ಕೇ ಅಸಹ್ಯವಾಗುತ್ತಿದೆ

-ತಾರಾ, ಚಿತ್ರನಟಿ

  ಈ ಸಂಭಾಷಣೆ ಯಾವ ಚಿತ್ರದ್ದು ಎಂದು ಹೇಳುತ್ತೀರಾ?
---------------------
ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಶಾಸಕರು ಹಣದ ಬೇಡಿಕೆ ಇಟ್ಟಿರುವುದು ನಾಚಿಕೆಗೇಡಿನ ಸಂಗತಿ

-ಜಗದೀಶ್ ಶೆಟ್ಟರ್, ವಿಪಕ್ಷ ನಾಯಕ 

ಲೋಕಸಭೆಯ ಚುನಾವಣೆಯಲ್ಲಿ ಮಾತ್ರ ಸಾಕು ಅಂತೀರಾ?
---------------------
ಮುಂದಿನ 15 ವರ್ಷ ಮೋದಿಯೇ ಪ್ರಧಾನಿ

-ರಾಮ್ ವಿಲಾಸ್ ಪಾಸ್ವಾನ್, ಕೇಂದ್ರ ಸಚಿವ

ಮತ್ತು ಆ 15 ವರ್ಷ ಅವರ ಬಾಲವಾಗಿ ಅಂಟಿಕೊಳ್ಳುವ ಆಸೆಯೇ?
---------------------

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!