ನಾನು ಈ ಹಿಂದೆ ಮೋದಿಗೆ ಸಹಾಯ ಮಾಡಿದ್ದಕ್ಕೆ ಅಪರಾಧಿ ಭಾವನೆ ಕಾಡುತ್ತಿದೆ.

Update: 2016-07-10 18:29 GMT

ನಾನು ಈ ಹಿಂದೆ ಮೋದಿಗೆ ಸಹಾಯ ಮಾಡಿದ್ದಕ್ಕೆ ಅಪರಾಧಿ ಭಾವನೆ ಕಾಡುತ್ತಿದೆ.

-ರಾಮ್ ಜೇಠ್ಮಲಾನಿ, ಸಂಸದ

  ವಯಸ್ಸಾದ ಮೇಲೆ ಎಲ್ಲಾ ವೇಶ್ಯೆಯರೂ ಗರತಿಯರೇ ಆಗಿರುತ್ತಾರಂತೆ.

 ---------------------

   ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾಗದಿದ್ದರೆ ಜನರೇ ಬದಲಿಸ್ತಾರೆ.

- ಎಚ್.ವಿಶ್ವನಾಥ್, ಕಾಂಗ್ರೆಸ್ ಮುಖಂಡ

  ಸದ್ಯಕ್ಕಂತೂ ನಿಮ್ಮ ಸ್ಥಿತಿ ಬದಲಾಗುವ ಲಕ್ಷಣಗಳಿಲ್ಲ.

 ---------------------

  ಎಲ್ಲರೂ ಪಕ್ಷಕ್ಕೆ ಬಂದು ಅಧಿಕಾರ ಅನುಭವಿಸಿ ಹೋಗುವವರೇ ಆದರೆ ಪಕ್ಷ ಉಳಿಯುವುದಿಲ್ಲ.

- ಜಾಫರ್ ಶರೀಫ್, ಕಾಂಗ್ರೆಸ್ ಮುಖಂಡ

  ಅಧಿಕಾರ ಅನುಭವಿಸಿ ಹೋದವರು, ಇದೀಗ ಪಕ್ಷದ ವಿರುದ್ಧ ಕೆಲಸ ಮಾಡಲು ನಿಂತರೆ ಇನ್ನೇನಾದೀತು?

 ---------------------

  ಗೋಮಾತೆಗೆ ಮೀಸಲಿರುವ ಭೂಮಾತೆಯ ದುರುಪಯೋಗ ಸಲ್ಲದು.

- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

   ಗೋಮಾತೆಗೆ ಮೀಸಲಿರುವ ಕಸಾಯಿ ಖಾನೆಗಳ ಸದ್ಬಳಕೆಯಾದರೆ, ದಫನ ಮಾಡಲು ಭೂಮಾತೆಯ ಅಗತ್ಯ ಬರುವುದಿಲ್ಲ.

---------------------

  ನಮ್ಮ ಸರಕಾರ ಅತ್ಯಂತ ಪಾರದರ್ಶಕ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

   ಹೌದು. ಬಟ್ಟೆಯೇ ಇಲ್ಲ.

---------------------

  ಯಡಿಯೂರಪ್ಪ ನಮ್ಮ ನಾಯಕ.

- ಈಶ್ವರಪ್ಪ, ವಿ.ಪ. ವಿಪಕ್ಷ ನಾಯಕ

   ಆದರೆ ತಮ್ಮ ನಾಯಕರಾಗಲು ಯಡಿಯೂರಪ್ಪ ಒಪ್ಪಬೇಕಲ್ಲ?

---------------------

  ನನಗೂ ಜನ, ಪಕ್ಷ, ಹೈಕಮಾಂಡ್ ಇದೆ.

- ಅಂಬರೀಷ್, ಮಾಜಿ ಸಚಿವ

ಮತ್ತೇಕೆ ತಡ, ಹೊಸ ಸಿನೆಮಾ ಶುರು ಮಾಡಿ.

---------------------

   ರಾಜ್ಯದ ಜನತೆ ಕಾಂಗ್ರೆಸ್ ದುರಾಡಳಿತದಿಂದ ಕಂಗಾಲಾಗಿದ್ದಾರೆ.

- ಅನಂತ್ ಕುಮಾರ್, ಕೇಂದ್ರ ಸಚಿವ

   ಬಿಜೆಪಿಯ ದುರಾಡಳಿತನವನ್ನು ನೆನೆದು ಒಂದಿಷ್ಟು ನೆಮ್ಮದಿಯಿಂದಿದ್ದಾರೆ.

---------------------

  ಜನ ನನ್ನನ್ನು ಎರಡನೆ ಬಸವಲಿಂಗಪ್ಪ ಅಂತಾರೆ.

- ಎಚ್.ಆಂಜನೇಯ, ಸಚಿವ

 ಬಸವಲಿಂಗಪ್ಪ ಅವರ ಬೂಸ ಹೇಳಿಕೆ ನೆನಪಾಗಿರಬೇಕು.

---------------------

  ರಾಜಕಾರಣಿಗಳು ಜನಸೇವಕರು ಎಂಬ ಭಾವನೆ ಸಾರ್ವಜನಿಕರಲ್ಲಿ ಬೆಳೆಸುವಂತೆ ನಮ್ಮ ನಡೆ ಇರಬೇಕು.

- ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

  ವಿಮಾನದಲ್ಲೇ ಓಡಾಡುವ ನರೇಂದ್ರ ಮೋದಿಗೆ ನಡೆ-ದಾಡುವ ಅವಕಾಶವೇ ಇಲ್ಲವಲ್ಲ?

 ---------------------

  ಭಾರತ ಹಾಗೂ ಅಮೆರಿಕ ನಡುವಿನ ಬಾಂಧವ್ಯದ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳುವುದಿಲ್ಲ.

-ಸರ್ತಾಝ್ ಅಝೀಝ್, ಪಾಕ್ ಪ್ರಧಾನಿಯ ವಿದೇಶಾಂಗ ಸಲಹೆಗಾರ

 ತಲೆಯಿದ್ದವರಿಗಷ್ಟೇ ಕೆಡಿಸಿಕೊಳ್ಳುವ ಸಮಸ್ಯೆ ಇರುವುದು.

---------------------

  ರಾಜ್ಯದ ಹಿತಾಸಕ್ತಿ ಕಾಯಲು ಪ್ರಬಲ ಪ್ರಾದೇಶಿಕ ಪಕ್ಷವೊಂದರ ಅಗತ್ಯವಿದೆ.

-ದೇವೇಗೌಡ, ಮಾಜಿ ಪ್ರಧಾನಿ

 ನಿಮ್ಮದು ಗ್ರಾಮಾಂತರ ಪಕ್ಷವಾಗಿರುವುದರಿಂದ ಆ ಹೊಣೆಗಾರಿಕೆಯ ಭಯ ಬೇಡ.

--------------------

  ತೆರಿಗೆ ಸಂಗ್ರಹಿಸಲು ಜನರಿಗೆ ಕುಡಿಸಿದರೆ ಕರ್ನಾಟಕ ‘ಕುಡುಕರ ರಾಜ್ಯ’ವಾಗುತ್ತದೆ.

-ಯು.ಬಿ.ಬಣಕಾರ್, ಬಿಜೆಪಿ ಶಾಸಕ

  ಹೊಸ ತೆರಿಗೆಯ ವಿಷಯ ಕುಡಿಸುವುದಕ್ಕಿಂತ ಮದ್ಯ ಕುಡಿಸುವುದು ವಾಸಿ ಎನ್ನುತ್ತಾರೆ ಸಿದ್ದರಾಮಯ್ಯ.

 ---------------------

  ನಾನು ಹುಚ್ಚು ನಾಯಿಯಲ್ಲ. ಸರಕಾರದ ತಪ್ಪುಗಳನ್ನು ಕಂಡು ಹಿಡಿಯುವ ಕಾವಲು ನಾಯಿ.

- ಈಶ್ವರಪ್ಪ, ವಿ.ಪ. ವಿಪಕ್ಷ ನಾಯಕ

ಸರಕಾರಕ್ಕಿಂತ ಮನೆಯವರಿಗೆ ಕಚ್ಚಿದ್ದೇ ಹೆಚ್ಚು.

---------------------

  ಖಾತೆ ಬದಲಾವಣೆ ಆಗಿರುವುದರಿಂದ ನನಗೆ ಪ್ರಮೋಷನ್ ಸಿಕ್ಕಂತಾಗಿದೆ.

- ಯು.ಟಿ.ಖಾದರ್, ಸಚಿವ

ಅಂತೂ ನಾಟಕ ರಂಗದಿಂದ ಸಿನೆಮಾರಂಗಕ್ಕೆ ಪ್ರಮೋಶನ್ ಸಿಕ್ಕಂತೆ.

---------------------

   ಸಮಾಜ ಒಟ್ಟಾಗಿ ನಿಂತರೆ ಗೋವು ಮತ್ತು ಸಂತರಿಗೆ ಯಾವುದೇ ಭಯವಿಲ್ಲ.

- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

ಭಯ ಏನಿದ್ದರೂ ಅಬಲೆ ಮಹಿಳೆಗೆ ಮಾತ್ರ.

--------------------

  ಭಯೋತ್ಪಾದನೆಯೇ ಪ್ರಪಂಚಕ್ಕೆ ದೊಡ್ಡ ಬೆದರಿಕೆ.

- ನರೇಂದ್ರ ಮೋದಿ, ಪ್ರಧಾನಿ

ನೀವು ಪ್ರಪಂಚ ತಿರುಗಾಡುತ್ತಿರುವುದನ್ನು ನೋಡಿದರೆ ಅದು ನಿಜ ಅನ್ನಿಸುತ್ತದೆ.

---------------------

  ವಿದ್ಯಾರ್ಥಿಗಳು ಸಿಡಿದೇಳಬೇಕು.

- ಪ್ರಕಾಶ್ ಜಾವ್ಡೇಕರ್, ಕೇಂದ್ರ ಸಚಿವ

  ನಿಮ್ಮ ಕೂಗು ಕೇಳಿಯೇ ಕನ್ಹಯ್ಯ ಮತ್ತು ಅವರ ಗೆಳೆಯರು ಸಿಡಿದೆದ್ದದ್ದು.

---------------------

  ಬಾಲಿವುಡ್ ಸಿನೆಮಾಗಳಲ್ಲಿ ಮಹಿಳೆ ಈಗ ಬರಿ ಕಣ್ತಂಪು ಮಾಡುವ ಪ್ರದರ್ಶನದ ಬೊಂಬೆಯಾಗಿ ಉಳಿದಿಲ್ಲ.

- ಮಾಧುರಿ ಧೀಕ್ಷಿತ್, ಬಾಲಿವುಡ್ ನಟಿ

ಪ್ರದರ್ಶನದ ಬೊಂಬೆಗೀಗ ವಯಸ್ಸಾಗಿದೆ.

---------------------

  ರಾಜ್ಯ ಸರಕಾರವನ್ನು ಜನರೇ ನೇಣು ಹಾಕುವ ಕಾಲ ಬಂದಿದೆ.

- ಶೋಭಾ ಕರಂದ್ಲಾಜೆ, ಸಂಸದೆ

  ಬಿಜೆಪಿಯ ಕೆಲ ನಾಯಕರು ನೇಣು ಹಗ್ಗದ ಜೊತೆಗೆ ಹೊಂಚು ಹಾಕುತ್ತಿರುವುದು ನೋಡಿದರೆ, ಬೇರೇನೋ ಸಂಭವಿಸಲಿದೆ.

---------------------

  ನಾನು ಅಂಬೇಡ್ಕರ್ ಚಿಂತನೆಯ ಹಿನ್ನೆಲೆಯಿಂದ ಬಂದವನು.

- ರಾಮದಾಸ್ ಅಠವಳೆ, ಕೇಂದ್ರ ಸಚಿವ

  ತಮ್ಮ ಹೆಸರಲ್ಲಿ ರಾಮನಿರುವುದನ್ನು ಕಂಡು ಬಿಜೆಪಿ ಮೋಸ ಹೋಗಿರಬೇಕು ಅಂತೀರಾ?

---------------------

   ರಾಮ ಮಂದಿರ ನಿರ್ಮಾಣ ರಾಜಕೀಯ ವಿಷಯ ಅಲ್ಲ.

- ಸಾಧ್ವಿ ನಿರಂಜನ್, ಕೇಂದ್ರ ಸಚಿವೆ

  ಅದು ಹೊಟ್ಟೆ ಪಾಡಿನ ವಿಷಯ ಅಂತೀರಾ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!