ಓ ಮೆಣಸೇ...

Update: 2017-03-26 18:35 GMT

ದೇಶದ ಐಕ್ಯತೆಗೆ ಭಾರತ ಮಾತಾ ಕಿ ಜೈ ಜೊತೆಗೆ, ಭಾರತ ಪಿತಾಕಿ ಹಾಗೂ ಭಾರತ ಭಾಗ್ಯ ವಿಧಾತಾ ಘೋಷಣೆಗಳು ಇರಲಿ
-ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ
  ಬರೇ ಘೋಷಣೆಗಳಿಂದ ಏಕತೆಯನ್ನು ನಿರ್ಮಿಸಲು ಹೊರಟಿರುವುದೇ ಇಂದಿನ ದುರಂತ.
  
ಕಾಂಗ್ರೆಸ್‌ನ ಸಂಘಟನಾ ವ್ಯವಸ್ಥೆ ಬಿಜೆಪಿ-ಆರೆಸ್ಸೆಸ್ ಸಂಘಟನಾ ಶಕ್ತಿಗೆ ಸಮವಲ್ಲ

- ಪಿ.ಚಿದಂಬರಂ, ಕಾಂಗ್ರೆಸ್ ನಾಯಕ
  ಹೌದು. ಅದು ಉತ್ತರ ಪ್ರದೇಶದಲ್ಲಿ ಸಾಬೀತಾಯಿತು ಕೂಡ.

  ---------------------

ರಾಜ್ಯ ಸರಕಾರ ಸತ್ತಿದೆಯೋ, ಐಸಿಯುನಲ್ಲಿದೆಯೋ?
-ನಳಿನ್ ಕುಮಾರ್ ಕಟೀಲು, ಸಂಸದ
  ಸಾಯಿಸುವುದು ಇತ್ತೀಚೆಗೆ ನೀವು ವೃತ್ತಿ ಮಾಡಿಕೊಂಡಂತಿದೆ.

---------------------
  ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅಲ್ಲಿಗೆ ಯಾರೂ ಹೋಗುವುದಿಲ್ಲ
- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
  ಹಾಗೆಂದು ಸಂಪೂರ್ಣ ಮುಳುಗಿದ ಹಡಗಿಗೆ ಹಾರುತ್ತಾರೆಯೇ?
---------------------
  ಉ.ಪ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನನ್ನ ಸಹೋದರನಿದ್ದಂತೆ

  - ಉಮಾಭಾರತಿ, ಕೆಂದ್ರ ಸಚಿವೆ

ಅವಳಿ ಜವಳಿ ಯಾಗಿ ಹುಟ್ಟಿದ್ದಂತೆ ಹೌದೇ?

 ಉತ್ತರ ಪ್ರದೇಶ ಉತ್ತಮ ಪ್ರದೇಶ ಆಗಲಿದೆ

- ನರೇಂದ್ರ ಮೋದಿ, ಪ್ರಧಾನಿ

ಇಡೀ ರಾಜ್ಯವೇ ಕಸಾಯಿಖಾನೆಯಾಗುವ ಸೂಚನೆಗಳಿವೆ.

---------------------
  ನಾನು ಕಾಂಗ್ರೆಸ್ ಬಿಡಲ್ಲ

  -ಎಚ್.ವಿಶ್ವನಾಥ್, ಮಾಜಿ ಸಂಸದ

ಕಾಂಗ್ರೆಸ್‌ಗೆ ಬೆದರಿಕೆಯೇ?
---------------------
  
ಸಂಜೆ 6 ಗಂಟೆ ಬಳಿಕದ ನಮ್ಮ ಬದುಕು ಸಂಪೂರ್ಣ ವೈಯಕ್ತಿಕ.

- ನವಜೋತ್ ಸಿಂಗ್ ಸಿಧು , ಪಂಜಾಬ್ ಸಚಿವ
  ಅದನ್ನು ಖಾಸಗಿ ಕೋಣೆಯಲ್ಲಿ ಗುಟ್ಟಾಗಿ ಮಾಡುವುದನ್ನು ಬಿಟ್ಟು ಟಿವಿ ಕ್ಯಾಮರಾದ ಮುಂದೆ ಮಾಡಿದರೆ ವೈಯಕ್ತಿಕ ಹೇಗಾಗುತ್ತದೆ?
---------------------
ನನ್ನ ಯಾನ ಈಗ ಪ್ರಮುಖ ನಿಲ್ದಾಣಕ್ಕೆ ಬಂದು ನಿಂತಿದೆ - ಎಸ್.ಎಂ. ಕೃಷ್ಣ , ಮಾಜಿ ಮುಖ್ಯಮಂತ್ರಿ.

ಮಾನವನ್ನು ಒತ್ತೆಯಿಟ್ಟ ಯಾನ!

ಎಸ್.ಎಂ.ಕೃಷ್ಣ ಅವರ ಅನುಭವವನ್ನು ಉಪಯೋಗ ಮಾಡಿಕೊಳ್ಳುತ್ತೇವೆ

- ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

ಬಾಡಿದ ಬಾಳೆ ಎಲೆ ಅದು, ಬೇಗ ಬಳಸಿ ಎಸೆಯಿರಿ.

---------------------
  ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಇತ್ಯರ್ಥಕ್ಕೆ ಮುಸ್ಲಿಂ ಸಮುದಾಯ ಸಿದ್ಧವಾಗಿದೆ
- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
  ಮುಸ್ಲಿಮ್ ಸಮುದಾಯವನ್ನು ನೀವೇ ಪ್ರತಿನಿಧಿಸುತ್ತಿರುವ ಹಾಗಿದೆ.

---------------------
  ಸದನದಲ್ಲಿ ಸಂತೆಯಲ್ಲಿ ಮಾತನಾಡಿದಂತೆ ಭಾಷಣ ಮಾಡಬಾರದು
 - ಸಿ.ಟಿ.ರವಿ, ಶಾಸಕ
  ಸಂತೆಯಲ್ಲಿ ಭಾಷಣ ಮಾಡಿ ತುಂಬಾ ಅನುಭವವಿರುವಂತಿದೆ!
---------------------
  ರಾಜ್ಯವನ್ನು ಉತ್ತರ ಕರ್ನಾಟಕ ಆಗಲು ಬಿಡುವುದಿಲ್ಲ್ಲ

-ಡಾ.ಜಿ. ಪರಮೇಶ್ವರ್ ಸಚಿವ

ಉತ್ತರ ಪ್ರದೇಶ ಮಾಡುವ ಉದ್ದೇಶವೇ?

---------------------
  ನಾನು ಬಿಜೆಪಿಯ ಶಿಸ್ತಿನ ಕಾರ್ಯಕರ್ತ
- ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ
 ಎಲ್ಲಿ, ಒಮ್ಮೆ ಚೆಡ್ಡಿ, ಟೋಪಿ ಧರಿಸಿ ಕವಾಯತು ನಡೆಸಿ ನೋಡೋಣ?
---------------------
  ದ್ವೇಷ ಭಾವನೆಯು ಖರ್ಜೂರವನ್ನು ಮುಸಲ್ಮಾನ, ತೆಂಗಿನಕಾಯಿಯನ್ನು ಹಿಂದೂವಾಗಿ ಮಾಡಿದೆ
-ಖಮರುಲ್ ಇಸ್ಲಾಂ, ಮಾಜಿ ಸಚಿವ
  ತೆಂಗಿನ ಕಾಯಿ ಚೂರು ಮತ್ತು ಖರ್ಜೂರದ ಚೂರು ಜೊತೆ ಸೇರಿದರೆ ಅದರ ರುಚಿಯೇ ಬೇರೆ.
---------------------
  
ಉ.ಪ.ಚುನಾವಣಾ ಫಲಿತಾಂಶ ಸಂಶಯಾಸ್ಪದವಾಗಿದೆ

-ಮಮತಾ ಬ್ಯಾನರ್ಜಿ ಪ.ಬ.ಮುಖ್ಯಮಂತ್ರಿ
  
ಉಳಿದ ಪಕ್ಷಗಳು ಸ್ಪರ್ಧಿಸಿದ್ದು ನಿಜವೇ ಎನ್ನುವ ಸಂಶಯ.

---------------------
  ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೊದಲ ದಿನವೇ ಗೋಹತ್ಯೆ ನಿಷೇಧ ಜಾರಿ
-ಕೆ.ಎಸ್.ಈಶ್ವರಪ್ಪ, ವಿ.ಪ.ವಿ.ಪ. ನಾಯಕ
ಮತ್ತು ಮನುಷ್ಯರ ಹತ್ಯೆಗೆ ಅನುಮತಿ.

---------------------
  
ರಾಮ ಮಂದಿರ ನಿರ್ಮಾಣದ ಬಗ್ಗೆ ಮುಸ್ಲಿಮರಲ್ಲಿ ಮೊದಲಿದ್ದ ಭಾವನೆ ಈಗ ಬದಲಾಗಿದೆ

-ಇ.ಚಂದ್ರಶೇಖರ್, ತೆಲಂಗಾಣ ಆರೆಸ್ಸೆಸ್ ಮುಖಂಡ
ನ್ಯಾಯ ವ್ಯವಸ್ಥೆಯ ಕುರಿತಂತೆಯೂ ಕೂಡ.

---------------------
   ಇದುವರೆಗೂ ನಾನು ನನಗೆ ಸರಿ ಅನಿಸಿದನ್ನು ಮಾತ್ರ ಮಾಡಿದ್ದೇನೆ
- ವಿರಾಟ್ ಕೊಹ್ಲಿ , ಭಾರತ ಕ್ರಿಕೆಟ್ ತಂಡದ ನಾಯಕ
  ದೇಶಕ್ಕೆ ಸರಿ ಅನ್ನಿಸಿದ್ದನ್ನು ಯಾವಾಗ ಮಾಡುತ್ತೀರಿ?
 

ರಕ್ತ ಹರಿಸಿಯಾದರೂ ಕಸಾಯಿ ಖಾನೆ ನಿಲ್ಲಿಸಲು ನಾಡಿನ ಸಂತ ಸಮೂಹ ಬದ್ಧ
- ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಅಂತೂ ಪ್ರಾಣಿಗಳ ಕಸಾಯಿಖಾನೆ ಮುಚ್ಚಿ, ಮನುಷ್ಯರ ಕಸಾಯಿಖಾನೆ ತೆರೆಯಲು ಹೊರಟಿದೆ ಸಂತ ಸಮೂಹ 

Writer - ಪಿ. ಎ . ರೈ

contributor

Editor - ಪಿ. ಎ . ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!