ಓ ಮೆಣಸೇ...

Update: 2020-01-26 18:20 GMT

*ಯಡಿಯೂರಪ್ಪ ಇನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ - ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಮುಖಂಡ
ಬೇರೆ ಪಕ್ಷ ಕಟ್ಟಿ ಮತ್ತೊಮ್ಮೆ ಸ್ಪರ್ಧಿಸುವ ಸಾಧ್ಯತೆಗಳಿವೆ.

---------------------

 *ನನ್ನ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ನೇಹ ಅಜರಾಮರವಾದುದು - ಕೆ.ಎಸ್.ಈಶ್ವರಪ್ಪ, ಸಚಿವ
ನಿಮ್ಮ ಸ್ನೇಹದ ನಡುವೆ ಆರೆಸ್ಸೆಸ್‌ನ ಬೃಹತ್ ಕಂದಕ ಸಮಸ್ಯೆ ಉಂಟು ಮಾಡಿದೆ.

---------------------

ಕೆ.ಎಸ್.ಈಶ್ವರಪ್ಪ ಅವರಂತೆ ಬಾಯಿ ಚಪಲಕ್ಕೆ ಮಾತನಾಡುವ ವ್ಯಕ್ತಿ ನಾನಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಅದು ಬಾಯಿ ಚಪಲ ಅಲ್ಲ, ಕಾಲು ಬಾಯಿ ರೋಗ.

---------------------

ಮತದಾರರು ಭ್ರಷ್ಟರಾದ ಕಾರಣ ನನಗೆ ಉಪ ಚುನಾವಣೆಯಲ್ಲಿ ಸೋಲಾಯಿತು - ಎಂ.ಟಿ.ಬಿ.ನಾಗರಾಜ್, ಮಾಜಿ ಶಾಸಕ
ಮತದಾರರು ಭ್ರಷ್ಟರಾದ ಕಾರಣವೇ ಉಳಿದ ಅಷ್ಟೂ ಅನರ್ಹರು ಗೆಲ್ಲುವಂತಾಯಿತು.

---------------------

2030ರವರೆಗೆ ನನಗೆ ಶುಭಕಾಲವಿದ್ದು, ಮಹತ್ವದ್ದು ಘಟಿಸಲಿದೆ - ಜನಾರ್ದನ ರೆಡ್ಡಿ, ಮಾಜಿ ಸಚಿವ
ಮತ್ತೆ ಜೈಲು ಸೇರುವ ಶುಭ ಸುದ್ದಿ ಜನತೆಗೆ ಸಿಗಬಹುದು.

---------------------

ರಾಹುಲ್‌ಗಾಂಧಿ ಒಬ್ಬ ವ್ಯಕ್ತಿಯಲ್ಲ, ಕಾಂಗ್ರೆಸ್‌ನ ಶಕ್ತಿ - ವಿ.ಎಸ್.ಉಗ್ರಪ್ಪ, ಮಾಜಿ ಸಂಸದ
ಬರೇ ಆ ಒಂದು ಶಕ್ತಿಯ ಮೇಲೆಯೇ ನೆಚ್ಚಿ ಕೂತಿರುವುದೇ ಕಾಂಗ್ರೆಸ್‌ನ ಸ್ಥಿತಿಗೆ ಮುಖ್ಯ ಕಾರಣ.

---------------------

ಕಾಂಗ್ರೆಸ್‌ನಲ್ಲಿ ಸಲ್ಲದವರು ಎಲ್ಲಿಯೂ ಸಲ್ಲುವುದಿಲ್ಲ - ಎಸ್.ಆರ್.ಪಾಟೀಲ್, ವಿ.ಪ.ಪ್ರತಿಪಕ್ಷ ನಾಯಕ
ಸದ್ಯಕ್ಕೆ ಕಾಂಗ್ರೆಸ್ ಪಕ್ಷವೇ ಎಲ್ಲೂ ಸಲ್ಲದ ಸ್ಥಿತಿಯಲ್ಲಿದೆ.

---------------------

ದೇಶದಲ್ಲಿ ಜನಸಂಖ್ಯೆ ನಿಯಂತ್ರಿಸಲು ಎರಡು ಮಕ್ಕಳ ನೀತಿ ಜಾರಿಗೊಳಿಸಬೇಕು - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
ಮೊದಲು ನಿಮ್ಮ ಎರಡು ಮಕ್ಕಳನ್ನು ತೋರಿಸಿ.

---------------------

ಕರಾವಳಿ ಪ್ರದೇಶದಲ್ಲಿ ಭಯೋತ್ಪಾದಕ ಶಕ್ತಿಗಳು ಸದ್ದಿಲ್ಲದೆ ಕೆಲಸ ಮಾಡುತ್ತಿವೆ - ಶೋಭಾ ಕರಂದ್ಲಾಜೆ, ಸಂಸದೆ
ಹೌದು, ಸದ್ದಿಲ್ಲದೇ ಬಾಂಬಿಟ್ಟ ರಾವ್‌ನಿಂದಾಗಿ ಅದು ಬಯಲಾಗಿದೆ.

---------------------

ಪಕ್ಷ ನನ್ನನ್ನು ಉಚ್ಚಾಟಿಸಿದರೆ ಬಿಜೆಪಿಗೆ ನಷ್ಟವೇ ಹೊರತು ನನಗೇನೂ ಆಗುವುದಿಲ್ಲ - ಬಚ್ಚೇಗೌಡ, ಸಂಸದ
ನೀವೇ ಪಕ್ಷವನ್ನು ಉಚ್ಚಾಟಿಸಿ ಬಿಡಿ.

---------------------

ಪಕ್ಷಾಂತರ ಮಾಡಿ, ಉಪ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಶಾಸಕರು ಈಗ ಅಂತರ್ ಪಿಶಾಚಿಗಳಾಗಿದ್ದಾರೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಸೋತ ವಿಶ್ವನಾಥರ ಸ್ಥಿತಿ ಇನ್ನೇನಾಗಬೇಕು?

---------------------

ನಾನು ಪಕ್ಷವನ್ನು ಪೂಜೆ ಮಾಡುವವನೇ ಹೊರತು, ವ್ಯಕ್ತಿ ಪೂಜೆ ಮಾಡುವವನಲ್ಲ -ಡಿ.ಕೆ.ಶಿವಕುಮಾರ್, ಮಾಜಿ ಸಚಿವ
 ಜೈಲಿನಲ್ಲಿ ಯಾರನ್ನು ಪೂಜೆ ಮಾಡಿದಿರಿ?

---------------------

ಮುಸ್ಲಿಮರ ಬೆಂಬಲ ನನಗೆ ಬೇಡ. ಅವರನ್ನು ಎಲ್ಲಿಡಬೇಕೋ ಅಲ್ಲೇ ಇಡುತ್ತೇನೆ - ರೇಣುಕಾಚಾರ್ಯ, ಶಾಸಕ
ಮುಸ್ಲಿಮರು ನಿಮ್ಮನ್ನು ಎಲ್ಲಿಡಬೇಕೋ ಅಲ್ಲೇ ಇಟ್ಟಿದ್ದಾರೆ.

---------------------

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳೆಲ್ಲ ಪಾಕ್ ಏಜೆಂಟರು - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ದೇಶದ ಮೇಲೆ ನೀವು ಸೇಡು ತೀರಿಸುತ್ತಿರುವುದನ್ನು ನೋಡಿದರೆ ಐಎಸ್‌ಐ ಏಜೆಂಟರೇನೋ ಎಂದು ಅನುಮಾನವಾಗುತ್ತದೆ.

---------------------

ಸಂಪುಟ ವಿಸ್ತರಣೆಯಾದರೆ ಪ್ರಳಯವೇನೂ ಆಗುವುದಿಲ್ಲ - ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ

ಹೆಚ್ಚೆಂದರೆ ಸರಕಾರ ಉರುಳಬಹುದು, ಅಷ್ಟೇ.

---------------------

  ಪಾಕ್ ಹಾಗೂ ಬಾಂಗ್ಲಾವನ್ನು ಸೇರಿಸಿ ಅಖಂಡ ಭಾರತ ನಿರ್ಮಿಸುವುದು ಬಿಜೆಪಿ ಗುರಿ - ಎ.ನಾರಾಯಣಸ್ವಾಮಿ, ಸಂಸದ
ಸದ್ಯಕ್ಕೆ ಈಗ ಇರುವ ಭಾರತ ಒಡೆಯದೇ ಇರಲಿ ಎನ್ನುವುದೇ ದೇಶದ ಜನರ ಪ್ರಾರ್ಥನೆ.

---------------------

ಭಾರತ ಎಲ್ಲದರಲ್ಲೂ ಮೇಲ್ಪಂಕ್ತಿಯಲ್ಲಿದೆ - ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಮುಖಂಡ
ಜಾತಿ ಪಂಕ್ತಿಯ ವಿಷಯದಲ್ಲಿರಬೇಕು.

---------------------

ಪಾಕಿಸ್ತಾನ ಅಥವಾ ಅಮೆರಿಕದಂತೆ ಭಾರತ ಧರ್ಮಾಧಾರಿತ ದೇಶವಲ್ಲ -ರಾಜನಾಥ್‌ಸಿಂಗ್, ಕೇಂದ್ರ ಸಚಿವ
ಧರ್ಮಾಧಾರಿತವಾಗಿ ಪರಿವರ್ತಿಸುವುದಕ್ಕೆ ಸಿಎಎ ಕಾಯ್ದೆ ತಂದಿರಬೇಕು.

---------------------

ಭಾರತದಲ್ಲಿ ಗೋವುಗಳು ಸ್ವಚ್ಛಂದವಾಗಿ ಬದುಕುತ್ತಿದ್ದ ಕಾಲದಲ್ಲಿ ಸುಭಿಕ್ಷೆ ನೆಲೆಸಿತ್ತು - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ನಿಮ್ಮ ಬದುಕು ಸುಭಿಕ್ಷೆಯಾಗಿತ್ತು. ದಲಿತರು, ಶೂದ್ರರ ಬದುಕು ಗೋವುಗಳಿಗಿಂತ ಕೀಳಾಗಿತ್ತು.

---------------------

ಪಾಕಿಸ್ತಾನ ಎಂಬ ದೇಶ ಇಲ್ಲದಿದ್ದರೆ ಬಿಜೆಪಿಗೆ ಈ ದೇಶದಲ್ಲಿ ಒಂದು ವೋಟು ಪಡೆಯಲು ಸಾಧ್ಯವಾಗುತ್ತಿರಲಿಲ್ಲ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
 ಪಾಕಿಸ್ತಾನದ ವಿರುದ್ಧ ಅಣುಬಾಂಬ್ ಬಳಸಿದರೆ ಹೇಗೆ?

---------------------

ಇತ್ತೀಚೆಗೆ ಯುವಜನರಿಗೆ ಸಂವಿಧಾನದ ಮೇಲಿನ ನಂಬಿಕೆಯನ್ನು ನೋಡಿದರೆ ಹೃದಯ ತುಂಬಿ ಬರುತ್ತದೆ - ಪ್ರಣಬ್ ಮುಖರ್ಜಿ, ಮಾಜಿ ರಾಷ್ಟ್ರಪತಿ
ಅದಕ್ಕೇ ಇರಬೇಕು, ಸಂವಿಧಾನದ ಮೇಲೆ ನಂಬಿಕೆಯಿಲ್ಲದ ಆರೆಸ್ಸೆಸ್ ಸಮಾರಂಭದಲ್ಲಿ ಭಾಗವಹಿಸಿರುವುದು.

---------------------

ಪಾಕಿಸ್ತಾನವನ್ನು ಭೂಪಟದಿಂದಲೇ ತೆಗೆದು ಹಾಕುತ್ತೇವೆ - ಆರ್.ಅಶೋಕ್, ಸಚಿವ
ಕಚೇರಿಯಲ್ಲಿದ್ದ ಭೂಪಟವನ್ನೇ ತೆಗೆದು ಬಿಡಿ. ಸುಲಭವಾಗುತ್ತದೆ.

---------------------

ಹಿಂದೂಗಳಲ್ಲಿ ಯಾರೂ ಭಯೋತ್ಪಾದಕರಿಲ್ಲ - ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ
 ವಿಮಾನ ನಿಲ್ದಾಣದಲ್ಲಿ ಬಾಂಬಿಟ್ಟ ರಾವ್ ಕೂಡ ಅದನ್ನೇ ಸಾಬೀತು ಮಾಡಿದ್ದಾನೆ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!