ಓ ಮೆಣಸೇ...

Update: 2020-11-08 19:30 GMT

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಉಳಿಸುವ ಜವಾಬ್ದಾರಿ ಮತದಾರರ ಮೇಲಿದೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಅಪ್ಪ-ಮಕ್ಕಳಿಂದ ಪ್ರಾದೇಶಿಕ ಪಕ್ಷವನ್ನು ಉಳಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎನ್ನುವುದು ನಿಜ.


ದ್ವೇಷ ಭಾಷಣಗಳು, ವೈಯಕ್ತಿಕ ಟೀಕೆಗಳ ಮೂಲಕ ಚುನಾವಣೆ ಗೆಲ್ಲುವುದು ಆರೋಗ್ಯಪೂರ್ಣ ಪ್ರಜಾಸತ್ತೆಗೆ ಒಳ್ಳೆಯದಲ್ಲ - ರಾಜನಾಥ್ ಸಿಂಗ್, ಕೇಂದ್ರ ಸಚಿವ
ಸದ್ಯಕ್ಕೆ ದೇಶದಲ್ಲಿ ಅಸ್ತಿತ್ವದಲ್ಲಿರುವುದು ಅನಾರೋಗ್ಯಪೂರ್ಣ ಸರಕಾರ ಎಂದು ಒಪ್ಪಿಕೊಳ್ಳುತ್ತೀರಾ?


ರೆಸಾರ್ಟ್ ರಾಜಕಾರಣ ಈಗ ಒಂದರ್ಥದಲ್ಲಿ ನಾಡಿನ ಸಂಸ್ಕೃತಿಯೇ ಆಗಿಬಿಟ್ಟಿದೆ - ಶಿವರಾಮ ಹೆಬ್ಬಾರ್, ಸಚಿವ
ನಾಡಿನ ಸಂಸ್ಕೃತಿಯಲ್ಲ, ರಾಜಕಾರಣಿಗಳ ಸಂಸ್ಕೃತಿಯನ್ನು ಅದು ಹೇಳುತ್ತದೆ.


ನೆನಪು ಮತ್ತು ಕನಸು ಇರುವ ಭಾಷೆ ಮಾತ್ರ ಉತ್ತುಂಗ ಸ್ಥಾನ ತಲುಪಿ ಅಜರಾಮರವಾಗುತ್ತದೆ - ಡಾ.ಚಂದ್ರಶೇಖರ್ ಕಂಬಾರ, ಸಾಹಿತಿ
ಹಿಂದಿ ದಾಳಿ ಹೀಗೆ ಮುಂದುವರಿದರೆ ಕನ್ನಡ ನೆನಪು ಮತ್ತು ಕನಸಲ್ಲಷ್ಟೇ ಉಳಿಯುತ್ತದೆ.


ನಾನು ಕೂಡಾ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ - ತನ್ವೀರ್ ಸೇಠ್, ಶಾಸಕ
ಮುಸ್ಲಿಮರು ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷೆ ಪಡುವುದು ದೇಶದ್ರೋಹ.


ಭಾರತದಲ್ಲಿ ಜಾತ್ಯತೀತತೆ ಅಪಾಯದಲ್ಲಿದೆ - ಶಶಿ ತರೂರು, ಕಾಂಗ್ರೆಸ್ ಮುಖಂಡ
ಅದು ನಮಗೂ ಗೊತ್ತಿದೆ. ಅಪಾಯವನ್ನು ಎದುರಿಸಲು ಏನು ಕಾರ್ಯಕ್ರಮಗಳನ್ನು ಕೈಗೊಂಡಿದ್ದೀರಿ , ಅದನ್ನು ಹೇಳಿ.


ಕಾಂಗ್ರೆಸ್‌ನವರು ಕಾಲಕ್ಕೆ ಅನುಸಾರ ಬಣ್ಣ ಬದಲಿಸುವ ಊಸರವಳ್ಳಿ ಗುಣದವರು - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ಹಾಗೆಂದು ಇನ್ನೂ ಮನುವಾದಿ ಕಾಲದಲ್ಲೇ ಇರುವುದು ಸರಿಯೇ?


ಇದು ಇವ ನಮ್ಮವ, ಇವ ನಮ್ಮವ ಎಂದ ನೆಲ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಎನ್‌ಆರ್‌ಸಿ ಬೇರೆಯೇ ಹೇಳುತ್ತದೆಯಲ್ಲ?


ನೀರು ಕೇಳಿದರೆ ಹಾಲು ಕೊಡುವ ಸಂಸ್ಕೃತಿ ನಮ್ಮದು - ಕಲ್ಲಡ್ಕ ಪ್ರಭಾಕರ ಭಟ್ಟ, ಆರೆಸ್ಸೆಸ್ ಮುಖಂಡ
ಹಾಲು ಕಂಡಲ್ಲಿ ಹುಳಿ ಹಿಂಡುವ ಸಂಸ್ಕೃತಿ ತಮ್ಮದು ಎಂಬುದು ಜನರ ಅಭಿಪ್ರಾಯ.


ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬದಲು ರಾಜಕೀಯ ನಿವೃತ್ತಿ ಪಡೆಯುವೆ - ಮಾಯಾವತಿ, ಬಿಎಸ್‌ಪಿ ನಾಯಕಿ
ನೀವು ಇನ್ನೂ ನಿವೃತ್ತಿ ಪಡೆದಿಲ್ಲವೆ? ರಾಜಕೀಯದಲ್ಲೇ ಇದ್ದೀರಾ?


ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬಂದ ಬಳಿಕ ಕ್ರೀಡೆಯೂ ಪಠ್ಯಕ್ರಮದ ಭಾಗವಾಗಲಿದೆ - ಸಿ.ಟಿ.ರವಿ, ಸಚಿವ
ಮಟ್ಕಾ ದಂಧೆಯ ಬಗ್ಗೆ ಹೇಳುತ್ತಿಲ್ಲ ತಾನೆ?


ಕಾಂಗ್ರೆಸ್ ಮುಖಂಡ ಕಮಲ್‌ನಾಥ್ ನನ್ನನ್ನು ನಾಯಿ ಎಂದು ಕರೆದಿರುವುದು ನಿಂದನೆಯಲ್ಲ, ಅದು ಹೊಗಳಿಕೆ -ಜ್ಯೋತಿರಾದಿತ್ಯ ಸಿಂಧಿಯಾ, ಬಿಜೆಪಿ ಮುಖಂಡ
ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಎಂದರೆ ನಿಂದನೆಯಾಗುತ್ತದೆಯೇ?


ಬಿಹಾರದಲ್ಲಿ ಜಂಗಲ್‌ರಾಜ್ ತಂದವರಿಗೆ ‘ಭಾರತ್ ಮಾತಾಕಿ ಜೈ’, ‘ಜೈ ಶ್ರೀರಾಮ್’ ಹೇಳುವುದು ಇಷ್ಟವಾಗುವುದಿಲ್ಲ -ನರೇಂದ್ರ ಮೋದಿ, ಪ್ರಧಾನಿ
ಭಾರತದಲ್ಲಿ ಜಂಗಲ್‌ರಾಜ್ ತಂದವರಿಗೆ ಇಷ್ಟ ಎನ್ನುವುದು ಗೊತ್ತು.


ದೇಶಾದ್ಯಂತ ‘ಲವ್ ಜಿಹಾದ್’ ಹೆಸರಿನಲ್ಲಿ ದೊಡ್ಡಮಟ್ಟದ ಮತಾಂತರ ನಡೆಯುತ್ತಿದೆ - ಶೋಭಾ ಕರಂದ್ಲಾಜೆ, ಸಂಸದೆ
ಯಾವುದೋ ಸಚಿವೆಯನ್ನು ಇನ್ನಾವುದೋ ಮುಖ್ಯಮಂತ್ರಿ ಲವ್ ಮಾಡಿ ಗುಟ್ಟಾಗಿ ಮದುವೆ ಯಾಗಿರುವುದು ಜಿಹಾದ್ ವ್ಯಾಪ್ತಿಗೆ ಬರುತ್ತದೆಯೇ?


ವಿದ್ಯುನ್ಮಾನ ಮತಯಂತ್ರಗಳು ಪ್ರಧಾನಿ ಮೋದಿಯ ‘ಮತ ಯಂತ್ರ’ವಾಗಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಯುಪಿಎ ಸರಕಾರವಿದ್ದಾಗ ತಾನೆ, ಈ ಮತಯಂತ್ರ ಹುಟ್ಟಿದ್ದು?


ದೇಶದ ಆರ್ಥಿಕತೆ ನಿರೀಕ್ಷಿಸಿದ್ದಕ್ಕಿಂತಲೂ ವೇಗವಾಗಿ ಹಳಿಗೆ ಮರುಳುತ್ತಿದೆ -ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ
ಹಳ್ಳಕ್ಕೆ ಹೊರಳುತ್ತಿದೆ ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ.


ರಾಜ್ಯದಲ್ಲಿ ತಕ್ಷಣಕ್ಕೆ ಶಾಲೆ ಆರಂಭ ಇಲ್ಲ - ಸುರೇಶ್‌ಕುಮಾರ್, ಸಚಿವ
ಶಾಲೆಗಳನ್ನೆಲ್ಲ ಗೋಶಾಲೆಗಳಾಗಿ ಪರಿವರ್ತಿಸುವ ಉದ್ದೇಶವಿದ್ದಂತಿದೆ.


ಅರ್ನಬ್ ಗೋಸ್ವಾಮಿ ಬಂಧನ ತುರ್ತುಪರಿಸ್ಥಿತಿಯನ್ನು ನೆನಪಿಸುತ್ತಿದೆ - ಅಮಿತ್ ಶಾ, ಕೇಂದ್ರ ಸಚಿವ
ಜನರಿಗೆ ನೋಟುನಿಷೇಧ, ಲಾಕ್‌ಡೌನ್ ಸಂದರ್ಭದಲ್ಲಿಯೇ ತುರ್ತು ಪರಿಸ್ಥಿತಿ ನೆನಪಾಗಿದೆ.


ನಾನು ಬಿದ್ದು, ಎದ್ದು, ಗೆದ್ದು ಬರುವೆ - ವಿನಯ ಕುಲಕರ್ಣಿ, ಮಾಜಿ ಸಚಿವ
ಬಹುಶಃ ಮೋದಿಯ ಕಾಲಿಗೆ ಬಿದ್ದು ಗೆಲ್ಲುವ ಉದ್ದೇಶವಿರಬಹುದೆಯೇ?


ವಿದ್ಯಾರ್ಥಿಗಳಿಗೆ ವೈ-ಫೈ ಮೂಲಕ ಆನ್‌ಲೈನ್ ಶಿಕ್ಷಣ ನೀಡಲು ಲ್ಯಾಪ್‌ಟಾಪ್ ನೀಡುವ ಚಿಂತನೆ ಇದೆ - ಶ್ರೀರಾಮುಲು, ಸಚಿವ
ಬರೇ ಚಿಂತೆಯಲ್ಲೇ ಒಂದು ವರ್ಷ ಮುಗಿಯಿತು.


ಅನುಷ್ಠಾನದ ಬಗ್ಗೆ ಮಾತನಾಡಿ. ಪಾಶ್ಚಿಮಾತ್ಯರು ಹಿಂದೂ ಧರ್ಮವನ್ನು ವಿರೂಪಗೊಳಿಸಿದರು - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
ಹೌದು, ದಲಿತರು, ಶೂದ್ರರಿಗೆ ಶಿಕ್ಷಣ ನೀಡುವ ಮೂಲಕ.


ಈ ವಿಧಾನಸಭೆ ಚುನಾವಣೆಯೇ ನನ್ನ ಕೊನೆಯ ಚುನಾವಣೆ - ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿ
ಬಿಜೆಪಿಯ ಸಂಗ ನಿಮ್ಮನ್ನು ಈ ಸ್ಥಿತಿಗೆ ತಲುಪಿಸಿತು ನೋಡಿ.


ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಬಿಜೆಪಿಗೆ ಸೇರಿಸುವ ಪ್ರಶ್ನೆಯೇ ಇಲ್ಲ - ಕೆ.ಎಸ್.ಈಶ್ವರಪ್ಪ, ಸಚಿವ
ಕೊಲೆ ಆರೋಪವಿರುವುದು ಬಿಜೆಪಿಗೆ ಸೇರುವುದಕ್ಕಿರುವ ಒಂದು ಪ್ರಮುಖ ಅರ್ಹತೆಯಲ್ಲವೇ?


ತಂತ್ರಜ್ಞಾನ ಮತ್ತು ಅಧ್ಯಾತ್ಮವನ್ನು ಬೇರೆಬೇರೆಯಾಗಿ ನೋಡಬಾರದು - ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ಅಧ್ಯಾತ್ಮವನ್ನು ತಂತ್ರಜ್ಞಾನ ಬಳಸಿಯೇ ಮಾರಾಟ ಮಾಡುತ್ತಿರುವ ಕಾರಣಕ್ಕಾಗಿ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!