ಚಿಕ್ಕಮಗಳೂರು: ಕೇರಳಕ್ಕೆ ಗಾಂಜಾ ಸಾಗಿಸುತ್ತಿದ್ದ ಆರೋಪಿಯ ಬಂಧನ

Update: 2024-03-09 16:42 GMT

ಚಿಕ್ಕಮಗಳೂರು: ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಕಾಸರಗೋಡು ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಜಿಲ್ಲೆಯ ಗೋಣಿಬೀಡು ಠಾಣೆಯ ಪೊಲೀಸರು ಆತನಿಂದ 51 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಮಹೇಶ್ವರ ತಾಲೂಕಿನ ಉಪ್ಪಳ ಮೂಲದ ಮುನೀರ್(31) ಬಂಧಿತ ಆರೋಪಿಯಾಗಿದ್ದು, ಶನಿವಾರ ಗೋಣಿಬೀಡು ಪೊಲೀಸರು ಹಮ್ಮಿಕೊಂಡಿದ್ದ ವಾಹನಗಳ ತಪಾಸಣೆ ವೇಳೆ ಮುನೀರ್ ಎಂಬಾತನ ಓಮ್ನಿ ವಾಹನದಲ್ಲಿ 51ಕೆಜಿ ಗಾಂಜಾ ಪತ್ತೆಯಾಗಿದೆ. ಆರೋಪಿಯು ಗಾಂಜಾವನ್ನು ಕಾಸರಗೋಡಿನ ಮಹೇಶ್ವರ ಪಟ್ಟಣಕ್ಕೆ ಸಾಗಿಸುತ್ತಿದ್ದ ಎಂದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಯನ್ನು ಬಂಧಿಸಿರುವ ಪೊಲೀಸರು ಗಾಂಜಾ ಸಹಿತ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಠಾಣಾಧಿಕಾರಿ ಹರ್ಷವರ್ಧನ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News