ಚಿಕ್ಕಮಗಳೂರು: ಈಜಲು ಕೆರೆಗಿಳಿದ ಯುವಕ ನೀರಲ್ಲಿ ಮುಳುಗಿ ಮೃತ್ಯು

Update: 2023-10-18 06:17 GMT

ಚಿಕ್ಕಮಗಳೂರು, ಅ.18: ಈಜಲು ಕೆರೆಗಿಳಿದ ಯುವಕನೋರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ನಲ್ಲೂರು ಕೆರೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಚಿಕ್ಕಮಗಳೂರು ನಗರದ ಕೋಟೆ ನಿವಾಸಿ ಕೃಷ್ಣಪ್ಪ ಎಂಬವರ ಪುತ್ರ ಹರ್ಷ(20) ಮೃತಪಟ್ಟವರು.

ನಗರದ ಸೈಂಟ್ ಜೋಸೆಫ್ ಪದವಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಹರ್ಷ ಮಂಗಳವಾರ ಕಾಲೇಜಿಗೆ ತೆರಳದೆ ತನ್ನ ಸ್ನೇಹಿತರ ಜೊತೆ ನಲ್ಲೂರು ಕೆರೆಗೆ ಈಜಲು ಹೋಗಿದ್ದರೆನ್ನಲಾಗಿದೆ, ಈ ವೇಳೆ ಕೆರೆಯ ಆಳ ಅರಿಯದೆ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

 ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಾತ್ರಿ ವೇಳೆ ಮೃತದೇಹವನ್ನ ಕೆರೆಯಿಂದ ಮೇಲೆತ್ತಿದ್ದಾರೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News