ಉಳ್ಳಾಲ ನಗರ ಸಭೆ ಪ್ರಭಾರ ಪೌರಾಯುಕ್ತರಾಗಿ ಮತಡಿ ಅಧಿಕಾರ ಸ್ವೀಕಾರ

Update: 2024-09-03 12:04 IST
ಉಳ್ಳಾಲ ನಗರ ಸಭೆ ಪ್ರಭಾರ ಪೌರಾಯುಕ್ತರಾಗಿ ಮತಡಿ ಅಧಿಕಾರ ಸ್ವೀಕಾರ
  • whatsapp icon

ಉಳ್ಳಾಲ: ನಗರ ಸಭೆಯ ಪ್ರಭಾರ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಾಣಿ. ವಿ. ಆಳ್ವ ಅವರ ದಿಢೀರ್ ವರ್ಗಾವಣೆ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಸೋಮೇಶ್ವರ ನಗರ ಸಭೆಯ ಮುಖ್ಯಾಧಿಕಾರಿ ಮತಡಿ ಅವರು ಮಂಗಳವಾರ ನಗರಸಭೆ ಪ್ರಭಾರ ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ನಗರ ಸಭೆ ಪೌರಾಯುಕ್ತ ಆಗಿದ್ದ ವಾಣಿ ಆಳ್ವ ಹೂ ಗುಚ್ಛ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಸೋಮವಾರ ನಗರ ಸಭೆ ಪೌರಾಯುಕ್ತೆ ವಾಣಿ ಆಳ್ವ ಅವರನ್ನು ದಿಢೀರ್ ವರ್ಗಾವಣೆಗೊಳಿಸಿ ತೆರವಾದ ಸ್ಥಾನಕ್ಕೆ ಮುಂದಿನ ಆದೇಶದ ವರೆಗೆ ಪ್ರಭಾರ ಪೌರಾಯುಕ್ತ ಆಗಿ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತಡಿ ಅವರನ್ನು ನೇಮಕ ಗೊಳಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನೀಡಿದ್ದರು.

ನಗರಸಭೆಯಲ್ಲಿ ಎರಡನೇ ಬಾರಿ ಒಂದು ವರ್ಷ ಕಾರ್ಯನಿರ್ವಹಣೆ ಮಾಡಿದ ವಾಣಿ ಆಳ್ವ ಮನಪಾ ಸುರತ್ಕಲ್ ಝೋನಲ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News