ಆಳಂದ | ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆ
Update: 2025-04-22 22:30 IST

ಕಲಬುರಗಿ : ಆಳಂದ ತಾಲ್ಲೂಕಿನ ನಿಂಗದಳ್ಳಿ ಗ್ರಾಮದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖಂಡರು ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಂತರ, ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಾಗಿತು.
ನೂರಾರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಂಬೇಡ್ಕರ್ ಅವರ ಆದರ್ಶಗಳಿಗೆ ಗೌರವಿಸಿದರು.
ಜಯಂತೋತ್ಸವ ಸಮಿತಿ ಅಧ್ಯಕ್ಷ ಮರೇಪ್ಪಾ ತಳಕೇರಿ, ಉಪಾಧ್ಯಕ್ಷ ಶ್ರೀಶೈಲ ಮೈಂದರ್ಗಿ, ಶ್ರೀಶೈಲ ಸೋನಕಾಂಬಳೆ, ಸಿದ್ದರಾಮ ಗಾಯಕವಾಡ, ರಾಜು ಸಿಂಗೆ, ರಾಜಶೇಖರ ಮುಂದಿನಕೇರಿ, ಸಿದ್ದಾರಾಮ ತಳಕೇರಿ, ಮಿಲೀoದ ಹಳದೆ, ಅನಿಲ ಮೃಂದರ್ಗಿ, ಮತ್ತು ಶ್ರೀಶೈಲ,ಜೆ. ಮೈಂದರ್ಗಿ, ಅಂಬರೀಷ ಮೈಂದರ್ಗಿ, ಸಂಜು ಸೇರಿದಂತೆ ಗ್ರಾಮದ ಮುಖಂಡರು,ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.