ಕಲಬುರಗಿ | ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವಕ್ಕೆ ಚಾಲನೆ

ಕಲಬುರಗಿ : ನಗರದ ಹೈಕೋರ್ಟ್ ಎದುರಗಡೆ ಈಸ್ಟ್ ವಿಂಗ್ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ಎಂ.ಐ.ಜಿ ಗಾರ್ಡನ್ ನಲ್ಲಿ ಮಹಾನಾಯಕ ಸಮಾಜ ಸೇವಾ ಟ್ರಸ್ಟ್, ಮಹಾನಾಯಕ ಸಮಾಜ ಸೇವಾ ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ಅಕ್ಕಮಹಾದೇವಿ ಕಾಲೋನಿ ಅಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಜ್ಞಾನಿ, ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವದ ಕಾರ್ಯಕ್ರಮವನ್ನು ಮಾಜಿ ಕಾರ್ಮಿಕ ಸಚಿವ ಎಸ್.ಕೆ.ಕಾಂತಾ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಸೇವಾ ಟ್ರಸ್ಟ್ ನ ಅಧ್ಯಕ್ಷ ಅಮೃತರಾವ ಸೂಗೂರ, ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಶಾಂತಕುಮಾರ ಎಸ್. ನಂದೂರ, ಅಕ್ಕಮಹಾದೇವಿ ಕಾಲೋನಿ ಅಭಿವೃದ್ಧಿ ಸಂಘದ ಅಧ್ಯಕ್ಷ ಸುಶೀಲಕುಮಾರ ಮಾಮಡಿ, ಸಮಿತಿಯ ಮುಖ್ಯ ಸಂಯೋಜಕ ಕಾಶಿನಾಥ ಗಾಯಕವಾಡ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು ಹಾಗೂ ಕನ್ನಡ ಚಿತ್ರರಂಗದ ನಟ, ನಿರ್ದೇಶಕರು ಹಾಗೂ ನಿರ್ಮಾಪಕರಾದ ಡಾ.ಮದನ್ ಪಟೇಲ್, ಉಮೇಶ ಶೆಟ್ಟಿ, ಡಾ.ಪುಟ್ಟಮಣಿ ದೇವಿದಾಸ, ಡಾ.ಎಸ್.ಚಂದ್ರಶೇಖರ ಕಟ್ಟಿಮನಿ, ಮಹೇಶ ಮೇಘಣ್ಣವರ್, ಡಾ.ಎಸ್.ಚಂದ್ರಶೇಖರ, ಡಾ.ಶಂಕ್ರಪ್ಪ ಎಸ್.ಹತ್ತಿ, ಗೌರೀಶ ಕಾಶಂಪೂರ, ಪ್ರಕಾಶ ಯಂಕಂಚಿ, ಚಂದ್ರಕಾಂತ ಗದ್ದಗಿ, ದಿನೇಶ ಠಾಕೂರ, ಧರ್ಮರಾಜ ಹೇರೂರ, ಶ್ರೀನಿವಾಸ ದೇಸಾಯಿ, ಶಿವಕುಮಾರ ದೊಡ್ಡಮನಿ, ಕಪಿಲದೇವ ಕೋಹಿನೂರ, ಮಹೇಶ ಕಡೇಕರ್, ನಾಗಮೂರ್ತಿ ಶೀಲವಂತ, ಮೋನಪ್ಪಾ ಅನವಾರ, ಡಾ.ಪ್ರಶಾಂತ ಕಾಂಬ್ಳೆ, ಸತಿಶ ಗಡಕರ್, ಚಂದ್ರಕುಮಾರ, ಲೋಹಿತ್ ಕಟ್ಟಿಮನಿ, ರಾಣಪ್ಪ ಕುಮಸಿ, ದೇವರಾವ ಕಿಣ್ಣಕರ್, ಶಿವಶರಣಪ್ಪ ಶೀವಕೇರಿ, ಪಂಡಿತ ಗೋಪಾಲೆ, ಡಾ.ಕರುಣಿಕ್ ಕೋರೆ, ಪ್ರೇಮನಾಥ ಸೇರಿದಂತೆ ಇತರರು ಇದ್ದರು.