ಕಲಬುರಗಿ | ಸಾರಥಿ ಚಾಲಕರ ಅಭಿವೃದ್ಧಿ ಸಂಘದಿಂದ ಸಿಎಂಗೆ ಮನವಿ

Update: 2025-04-16 23:00 IST
Photo of Letter of appeal
  • whatsapp icon

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 20 ರಿಂದ 25 ಸಾವಿರ ಟ್ಯಾಕ್ಸಿ ಚಾಲಕರಿದ್ದು, ಕರ್ನಾಟಕ ಸರ್ಕಾರದ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಬಸ್ ಪ್ರಯಣ ಮಾಡಲು ಉಚಿತ ಮಾಡಿದ್ದರಿಂದ ಟ್ಯಾಕ್ಸಿ ಚಾಲಕರಿಗೆ ತೊಂದರೆಯಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಸಾರಥಿ ಚಾಲಕರ ಅಭಿವೃದ್ಧಿ ಸಂಘದ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಸುಮಾರು 25 ಸಾವಿರ ಕುಟುಂಬಗಳು ಬೀದಿಗೆ ಬರುವ ಸಾಧ್ಯತೆ ಇರುತ್ತದೆ ಹಾಗೂ ಡಿಜಲ್ ಮೊತ್ತ ಹೆಚ್ಚಿಗೆ ಆಗಿದ್ದರಿಂದ ಬಾಡಿಗೆ ಸಹ ಬಂದಿರುವುದಿಲ್ಲ. ಕರ್ನಾಟಕ ಸರ್ಕಾರ ಟ್ಯಾಕ್ಸಿ ಚಾಲಕರಿಗೆ ನಿಗಮ ಮಂಡಳಿ ಮಾಡಿದರು ಇಲ್ಲಿಯವರೆಗೆ ಯಾವುದೇ ಫಲಾನುಭವಿಗಳಿಗೆ ಅನಕೂಲವಾಗಿಲ್ಲ. ಟ್ಯಾಕ್ಸ್ ಚಾಲಕರ ಸಮಸ್ಯೆಯನ್ನು ಅರಿತುಕೊಂಡು ನಿಗಮ ಮಂಡಳಿಯಿಂದ ಪ್ರಹಸಂಘಟಿತ ಕಾರ್ಮಿಕರ ಟ್ಯಾಕ್ಸಿ ಚಾಲಕರ ಕಾರ್ಡ್‌ ಶೀಘ್ರದಲ್ಲಿ ವಿತರಣೆ ಮಾಡಬೇಕೆಂದು ಆಗ್ರಹಿಸಿದ್ದರು.

ಟ್ಯಾಕ್ಸಿ ಚಾಲಕರ ಅಭಿವೃದ್ಧಿಗೊಸ್ಕರ ಸರ್ಕಾರ ಎತ್ತಿಚ್ಚಿಕೊಂಡು ಟ್ಯಾಕ್ಸಿ ಚಾಲಕರ ಮಕ್ಕಳ ಶಿಕ್ಷಣ, ಆರೋಗ್ಯ, ಇನ್ಸುರೆನ್ಸ, ಮತ್ತು ದೊಡ್ಡ ಮಟ್ಟದ ಶಿಕ್ಷಣ, ಶಿಕ್ಷಣ ಸ್ಕಾಲರಶಿಫ್‌, ಪೊಲಿಸ್ ಸಮಸ್ಯೆ, ಆಶ್ರಯ ಮನೆ, ಮತ್ತು ವಿದ್ಯಾಭ್ಯಸಕ್ಕೆ ತಕ್ಕಹಾಗೆ ಉದ್ಯೋಗ ಹಾಗು ವ್ಯಾಪಾರಕ್ಕಾಗಿ ಇತರೆ ಚಟುವಟಿಕೆಗಳಿಗೆ ಎತ್ತಿಚ್ಚಿಕೊಂಡು ಸೌಲಭ್ಯ ಒದಗಿಸಿಕೊಡಬೇಕೆಂದು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಸಾರಥಿ ಚಾಲಕರ ಅಭಿವೃದ್ಧಿ ಸಂಘದ ಸಂಸ್ಥಾಪಕ ಅರವಿಂದ ಕಮಲಾಪುರ, ಅಧ್ಯಕ್ಷ ಜಗದೀಶ್ ದೇಸಾಯಿ, ಉಪಾಧ್ಯಕ್ಷ ಸುಶೀಲಕುಮರ್ ಸರಜೋಳಗಿ, ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬಬಲಾದ, ರವಿಕುಮಾರ್ ರೆಡ್ಡಿ, ಮಹದೇವ್ ಪಾಟೀಲ್, ಸುನಿಲ್ ಸರಾಜೋಳಗಿ, ಶರಣು ಗೊಬ್ಬೂರು, ಶ್ರೀಮಂತ ಸಿರಸಾಗಿ ಸೇರಿದಂತೆ ಪದಾಧಿಕಾರಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News