ಕಲಬುರಗಿ | ನ್ಯೂ ಜನರೇಷನ್ ಐಡಿಯೇಷನ್ ಸ್ಪರ್ಧೆಯಲ್ಲಿ ಸಿಯುಕೆಯ ವಿದ್ಯಾರ್ಥಿಗಳಿಗೆ ದ್ವಿತೀಯ ಬಹುಮಾನ

Update: 2025-04-07 21:17 IST
ಕಲಬುರಗಿ | ನ್ಯೂ ಜನರೇಷನ್ ಐಡಿಯೇಷನ್ ಸ್ಪರ್ಧೆಯಲ್ಲಿ ಸಿಯುಕೆಯ ವಿದ್ಯಾರ್ಥಿಗಳಿಗೆ ದ್ವಿತೀಯ ಬಹುಮಾನ
  • whatsapp icon

ಕಲಬುರಗಿ : ಆಳಂದ ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯ ಇಂಜಿನಿಯ್‌ರಿಂದ ವಿಭಾಗದ ವಿದ್ಯಾರ್ಥಿ ಬೆಂಗಳೂರಿನ ಎಚ್ಪಿಸಿಎಲ್ ನಡೆಸಿದ "ನ್ಯೂ ಜನರೇಷನ್ ಐಡಿಯೇಷನ್ ಸ್ಪರ್ಧೆ ಸಿಯುಕೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ದ್ವಿತೀಯ ಬಹುಮಾನ ಲಭಿಸಿದೆ.

ತಂಡದಲ್ಲಿದ್ದ ವಿದ್ಯಾರ್ಥಿನಿ ಸ್ವಾತಿ ಸಹಾನಿ, ಸತ್ಯಂ ಕುಮಾರ್, ರೋಹನ್ ಪಟೇಲ್, ಅಂಕುರ್ ಮಿಶ್ರಾ, ಕೌಶಲ್ ಕುಮಾರ್, ಕಾರ್ತಿಕ್ ರಾಜಾ ಅವರು ಕಳೆದ ವಾರ ಬೆಂಗಳೂರಿನಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್ ಪಿಸಿಎಲ್) ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ನಡೆಸಿದ "ನ್ಯೂ ಜನರೇಷನ್ ಐಡಿಯೇಷನ್ ಸ್ಪರ್ಧೆ 2024" ನಲ್ಲಿ ಭಾಗವಹಿಸಿದ್ದಾರೆ.

ಐಐಟಿಗಳು ಮತ್ತು ಇತರ ಉನ್ನತ ಸಂಸ್ಥೆಗಳು ಸೇರಿದಂತೆ ದೇಶಾದ್ಯಂತ ವಿವಿಧ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ 500 ಐಡಿಯಾಗಳಲ್ಲಿ ಸಿಯುಕೆಯ ವಿದ್ಯಾರ್ಥಿಗಳು ಎರಡನೇ ಬಹುಮಾನವನ್ನು ಪಡೆದಿದ್ದಾರೆ. ಮೊದಲ ಮತ್ತು ಎರಡನೇ ಬಹುಮಾನಗಳನ್ನು ಕ್ರಮವಾಗಿ ಐಐಟಿ ದೆಹಲಿ ಮತ್ತು ಐಐಟಿ ಗುವಾಹಟಿ ಗೆದ್ದಿವೆ. ಈ ಪ್ರಶಸ್ತಿಯು ಪ್ರಮಾಣಪತ್ರದೊಂದಿಗೆ ರೂ. 50,000 ನಗದು ಬಹುಮಾನವನ್ನು ಹೊಂದಿದೆ" ಎಂದು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಉದಯ ಪಾಟೀಲ್ ಹೇಳಿದ್ದಾರೆ.

"ಇದೆ ವಿದ್ಯಾರ್ಥಿಗಳ ತಂಡವು ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯ, ನವದೆಹಲಿಯ ಅಡಿಯಲ್ಲಿ ನಡೆದ “ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಗ್ರ್ಯಾಂಡ್ ಫಿನಾಲೆ 2024 ರಲ್ಲಿ ಭಾಗವಹಿಸಿತು. "ಕಡಿಮೆ ಭೂಮಿಯ ಪ್ರಭಾವವನ್ನು ಬಳಸಿಕೊಂಡು ಬೂದು ಮತ್ತು ಕಪ್ಪು ನೀರಿನ ನಿರ್ವಹಣೆ" ಎಂಬ ಸಮಸ್ಯೆಗೆ ಪರಿಹಾರವನ್ನು ಪ್ರಸ್ತುತಪಡಿಸಿ ಟಾಪ್ 5 ತಂಡಗಳಲ್ಲಿ ಒಂದಾಗಿ ಆಯ್ಕೆಯಾಯಿತು” ಎಂದು ಅವರು ಹೇಳಿದರು.

ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್, ಇಂಜಿನಿಯರಿಂಗ್ ನಿಕಾಯದ ಡೀನ್ ಪ್ರೊ.ಪರಮೇಶ್‌, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಅಮರೇಂದ್ರ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News