ಕಲಬುರಗಿ | ವಿಶೇಷ ಲೋಕ ಅದಾಲತ್ ; 52 ಪ್ರಕರಣ ಇತ್ಯರ್ಥ, 1.66 ಕೋಟಿ ರೂ. ಪರಿಹಾರ ಮೊತ್ತ ಮಂಜೂರು : ದಯಾನಂದ ವಿ.ಹಿರೇಮಠ

Update: 2025-04-28 17:22 IST
ಕಲಬುರಗಿ | ವಿಶೇಷ ಲೋಕ ಅದಾಲತ್ ; 52 ಪ್ರಕರಣ ಇತ್ಯರ್ಥ, 1.66 ಕೋಟಿ ರೂ. ಪರಿಹಾರ ಮೊತ್ತ ಮಂಜೂರು : ದಯಾನಂದ ವಿ.ಹಿರೇಮಠ
  • whatsapp icon

ಕಲಬುರಗಿ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಶನಿವಾರ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಜರುಗಿದ ವಿಶೇಷ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಒಟ್ಟು 52 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡಿ 1,66,18,000 ರೂ.ಗಳ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಕಲಬುರಗಿ ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ದಯಾನಂದ ವಿ.ಹಿರೇಮಠ ತಿಳಿಸಿದ್ದಾರೆ.

ಹೈಕೋರ್ಟ್ ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿಯಿಂದ ಆಯೋಜಿಸಿದ ವಿಶೇಷ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಮೋಟಾರು ವಾಹನ ಅಪಘಾತ ಪ್ರಕರಣಗಳನ್ನು ವಕೀಲರು ಮತ್ತು ಕಕ್ಷಿದಾರರ ಸಮಕ್ಷಮ ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಯಿತು.

ಈ ವಿಶೇಷ ಲೋಕ ಅದಾಲತ್ನಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ.ಸಿ.ಎಮ್.ಜೋಶಿ ಮತ್ತು ನ್ಯಾ.ವಿಜಯಕುಮಾರ್ ಎ.ಪಾಟೀಲ್ ಅವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News