ಸಮಾನತೆ ಸಂದೇಶ ಸಾರಿದ ಮಡಿವಾಳ ಮಾಚಿದೇವ: ಬಿ.ಜಿ.ಪಾಟೀಲ

Update: 2025-02-02 09:19 IST
ಸಮಾನತೆ ಸಂದೇಶ ಸಾರಿದ ಮಡಿವಾಳ ಮಾಚಿದೇವ: ಬಿ.ಜಿ.ಪಾಟೀಲ
  • whatsapp icon

ಕಲಬುರಗಿ: ಸಮಾಜದಲ್ಲಿ ಬೇರು ಬಿಟ್ಟಿದ್ದ ಜಾತಿ ಪದ್ದತಿಯ ಮೂಢನಂಬಿಕೆ ಅಂಧಶ್ರದ್ದೆ ಹೊಗಲಾಡಿಸಿ, ಸಮಾಜದಲ್ಲಿ ಸಮಾನವಾಗಿ ಬಾಳಬೇಕು ಎಂದು ಸಾರಿದ ದಿಟ್ಟ ವಚನಕಾರರು ಮಡಿವಾಳ ಮಾಚಿದೇವರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ ಪಾಟೀಲ ಹೇಳಿದರು.

ಶನಿವಾರದಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳು ಸಂಯುಕ್ತಾಶ್ರಯದಲ್ಲಿ ಶ್ರೀ ಮಡಿವಾಳ ಮಾಚಿದೇವ ಅವರ ಭಾವಚಿತ್ರ ಪುಷ್ಫಾರ್ಚನೆ ಮಾಡಿ ಜ್ಯೋತಿ ಬೆಳಗಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಹೊಸ ಕ್ರಾಂತಿಯ ವಚನಗಳು ಇಂದಿನ ದಿನಗಳಲ್ಲಿ ನಮ್ಮಗೆಲ್ಲ ದಾರಿ ದೀಪವಾಗಿವೆ, ಶರಣ ಮಡಿವಾಳ ಮಾಚಿದೇವರು ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ, 'ಕಾಲಜ್ಞಾನಿ' ಎಂದೂ ಪ್ರಸಿದ್ದಿ ಪಡೆದಿದ್ದ ಅವರು ಪರಿಶುದ್ಧ ಕಾಯಕಕ್ಕೆ ಹೆಸರಾಗಿದ್ದರು. ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಗುಲಬರ್ಗಾ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ. ದಯಾನಂದ ಅಗಸರ್ ಮಾತನಾಡಿ, ರಿಂಗ್ ರೋಡ್ ವೃತ್ತಕ್ಕೆ ಮಡಿವಾಳ ಮಾಚಿದೇವ ಎಂದು ನಾಮಕರಣ ಮಾಡಿದ್ದಾರೆ. ಶಾಸಕರ ಅನುದಾನದಲ್ಲಿ ಒಂದು 1 ಕಿ.ಮೀ. ರಸ್ತೆ ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ. ಇದಕ್ಕಾಗಿ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಅಭಿನಂದನೆ ಸಲ್ಲಿಸಿದರು.

ಶರಣ ಮಡಿವಾಳ ಮಾಚಿದೇವರ ಆದರ್ಶ ತತ್ವಗಳು ಇಂದಿನ ವಿದ್ಯಾರ್ಥಿಗಳು ಅನುಸರಿಸಿದ್ದರೆ ನಾವು ಮುಂದೆ ಹೋಗಲು ಸಾಧ್ಯ ಎಂದು ಅವರು ಹೇಳಿದರು.

ಕಲಬುರಗಿ ಹಿಂದಿ ಪ್ರಚಾರ ಸಭೆಯ ಕಾರ್ಯದರ್ಶಿ ಅಶೋಕ ಗುರುಜಿ ಅವರು ಮಾತನಾಡಿ, ಬರಿ ಬಟ್ಟೆ ಅಷ್ಟೆ ಶುದ್ದ ಮಾಡಿದರೆ ಸಾಲದು ನಮ್ಮ ಮನಸ್ಸು ಕೂಡ ಶುದ್ಧ ಮಾಡಬೇಕು, ವ್ಯಕ್ತಿತ್ವದಿಂದ ಗುಣಗಳನ್ನು ಬೆಳೆಸಬೇಕು ಎಂದರು.

ಕಲ್ಯಾಣ ಕಾಂತ್ರಿ ಸಮಯದಲ್ಲಿ ಬಸವೇಶ್ವರರು ಕೂಡ ಮಡಿವಾಳ ಮಾಚಿದೇವ ನನ್ನ ತಂದೆ ಅಂತ ಹೇಳಿದ್ದಾರೆ, ಅಂತಹ ಮಹಾನ ವ್ಯಕ್ತಿಯ ಜಯಂತಿ ಆಚರಣೆ ಮಾಡೋದು ಹೆಮ್ಮೆಯ ಮಾತಾಗಿದೆ. ಸಮ ಸಮಾಜ ಕಟ್ಟುವ ಕಾರ್ಯಗಳನ್ನು ಮಾಡೋಣ ಎಂದು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಾಮಾಜಿಕ ಭದ್ರತಾ ಹಾಗೂ ಪಿಂಚಣಿ ಯೋಜನೆಯ ಸಹಾಯಕ ನಿರ್ದೇಶಕ ಶಿವಶರಣಪ್ಪ ದಿನ್ನಿ ಅವರು ಮಾತನಾಡಿದರು.

ಚಿನ್ನದ ಕಂತಿ ಚಿಕ್ಕವಿರೇಶ್ವರ ಸಂಸ್ಥಾನ ಹಿರೇಮಠ ಶ್ರೀನಿವಾಸ ಸರಡಗಿ, ತಾಜ ಸುಲ್ತಾನಪೂರ ಹಾಗೂ ಕುರಿಕೋಟಾ ಶ್ರಿ ಷ.ಬ್ರ.ಡಾ.ರೇವಣಸಿದ್ದ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು.

ವೇದಿಕೆ ಮೇಲೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ತಹಶೀಲ್ದಾರ ಪಂಪಯ್ಯ ಮಡಿವಾಳ ಸಮಾಜ ಜಿಲ್ಲಾಧ್ಯಕ್ಷ ಮಲ್ಲಣ್ಣ ಮಡಿವಾಳ ಶಾಹಪೂರಕರ್, ಕಮಾಂಡೆಂಟ್ ಮಾಜಿ ದೇವರ ಜಯಂತಿ ಉತ್ಸವ ಸಮಿತಿ ಗೌರ ಅಧ್ಯಕ್ಷ ಚಂದ್ರಶೇಖರ ಎ. ಮಡಿವಾಳ ಖಾಜಾಕೋಟನೂರ, ಕಲಬುರಗಿ ಕೆಸ್‌ಆರ್‌ಪಿ 6ನೇ ಪಡೆ ಕಮಾಂಡೆಂಟ್ ಗುರುನಾಥ ಎಸ್., ಯಾದಗಿರಿ ಆಯುಕ್ತರು, ಮತ್ತು ನಗರ ಯೋಜನೆ ಸದಸ್ಯರು ನಗರಾಭಿವೃದ್ಧಿ ಪ್ರಾಧಿಕಾರ ಶರಣಪ್ಪ ಮಡಿವಾಳ, ಹಿಂದಿ ಪ್ರಚಾರ ಸಭೆ ಕಾರ್ಯದರ್ಶಿ ಅಶೋಕ ಗುರುಜಿ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.





 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News