ವಯನಾಡ್ ದುರಂತ: ವಿರಾಜಪೇಟೆಯ ಬಾಲಕ ಮೃತ್ಯು

Update: 2024-07-31 10:32 GMT

ವಯನಾಡ್ ಭೂ ಕುಸಿತ (Photo: PTI)

ಕೊಡಗು, ಜು.31: ವಯನಾಡ್ ಮೇಪಾಡಿ ಭೂಕುಸಿತ ದುರಂತದಲ್ಲಿ ಸಂಬಂಧಿಕರ ಮನೆಗೆ ತೆರಳಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ 10 ವರ್ಷದ ಬಾಲಕನೋರ್ವ ಮೃತಪಟ್ಟಿದ್ದಾನೆ.

ಸಿದ್ದಾಪುರ ಗುಯ್ಯ ಸರಕಾರಿ ಶಾಲೆಯನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದ ರೋಹಿತ್ ಎಂಬ ಬಾಲಕ ಮೃತಪಟ್ಟಿದ್ದು, ಬುಧವಾರ ಆತನ ಮೃತದೇಹ ಪತ್ತೆಯಾಗಿದೆ.

ಈತ ಗುಯ್ಯ ಶಾಲೆ ಬಳಿ ಬಾಡಿಗೆ ಮನೆಯಲ್ಲಿ ವಾಸವಿರುವ ರವಿ ಮತ್ತು ಕವಿತಾ ಕೂಲಿ ಕಾರ್ಮಿಕ ದಂಪತಿಯ ಪುತ್ರ. ತಾಯಿಯೊಂದಿಗೆ ಮೇಪಾಡಿಗೆ ಹೋಗಿದ್ದ ರೋಹಿತ್ ಸಂಬಂಧಿಕರ ಮನೆಯಲ್ಲಿದ್ದ. ಸೋಮವಾರ ರಾತ್ರಿ ಸಂಭವಿಸಿದ ವಯನಾಡು ದುರಂತದಲ್ಲಿ ರೋಹಿತ್ ಕೂಡ ಮಣ್ಣಿನಡಿ ಕೊಚ್ಚಿ ಹೋಗಿದ್ದು, ಇಂದು ರಕ್ಷಣಾ ಕಾರ್ಯಾಚರಣೆ ಮಾಡುತ್ತಿರುವ ತಂಡಕ್ಕೆ ಆತನ ಮೃತದೇಹ ದೊರೆತಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News