ರಾಜಕೀಯವಾಗಿ ಬಲಿಷ್ಠಗೊಳ್ಳಲು ಹೆಚ್‌.ಡಿ.ಕೆ ಯಿಂದ ಬಿಜೆಪಿ, ಪ್ರಭಾಕರ್ ಭಟ್ ಓಲೈಕೆ: ದಿನೇಶ್‌ ಗುಂಡೂರಾವ್

Update: 2023-12-11 06:26 GMT

Photo: facebook

ಬೆಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಬಗ್ಗೆ ಜೆಡಿಎಸ್ ನಾಯಕ ಹೆಚ್ ಡಿಕೆ ಅವರ ಮೃದು ಧೋರಣೆ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಸಿಎಂ ಎಚ್ ಡಿಕೆ ಅವರು ಅಧಿಕಾರಿಂದ ದೂರ ಉಳಿದು ಪರಿತಪಿಸುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಸರ್ಕಾರ ಬೀಳಿಸುವ ಕೆಲಸ ಮಾಡುವುದು ಸರಿಯಲ್ಲ. ಪಕ್ಷ ಮತ್ತು ಸರ್ಕಾರದಲ್ಲಿ ಸಣ್ಣ ಪುಟ್ಟ ಗೊಂದಗಳಿವೆ. ಅದನ್ನೆ ರಾಜಕೀಯ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ಎಚ್ ಡಿಕೆ ಅವರಿಗೆ ಶಕ್ತಿ ಕುಂದಿದೆ. ಶಕ್ತಿ ತುಂಬಿಸಿಕೊಳ್ಳಲು ಹೀಗೆ ಬಿಜೆಪಿ ಮತ್ತು ಪ್ರಭಾಕರ್ ಭಟ್ ಅವರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News