ಹೈಕಮಾಂಡ್‍ನಿಂದ ಹಿಡಿದು ಗ್ರಾಮ ಮಟ್ಟದ ಮುಖಂಡರ ವರೆಗೂ ಬಿಜೆಪಿಯೊಳಗೆ ವೈಮಸ್ಸಿನ ಹೊಗೆ ಆವರಿಸಿದೆ: ಕಾಂಗ್ರೆಸ್ ಲೇವಡಿ

Update: 2023-11-10 12:45 GMT

ಚಿತ್ರ-  ರಾಮನಗರದಲ್ಲಿ ಕೈ ಮಿಲಾಯಿಸಿದ ಬಿಜೆಪಿ ನಾಯಕರು

ಬೆಂಗಳೂರು, ನ. 10: ‘ಬಿಜೆಪಿ ವರ್ಸ್‍ಸ್ಸ್ ಬಿಜೆಪಿ ಕಿತ್ತಾಟ ಸರ್ವವ್ಯಾಪಿಯಾಗಿ ಆವರಿಸಿದೆ. ಈ ದ್ವೇಷ ಹೊಡೆದಾಟದವರೆಗೂ ತಲುಪಿದ್ದು ಬಿಜೆಪಿ ದುರಂತ ಸ್ಥಿತಿಗೆ ಹಿಡಿದ ಕನ್ನಡಿ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಬರ ಪ್ರದೇಶಗಳ ಅಧ್ಯಯನ ವೇಳೆ ರಾಮನಗರದಲ್ಲಿ ಬಿಜೆಪಿ ನಾಯಕರ ನಡುವಿನ ಗಲಾಟೆ ಸಂಬಂಧ ಶುಕ್ರವಾರ ಎಕ್ಸ್ (ಟ್ವಿಟ್ಟರ್)ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಹೈಕಮಾಂಡ್ ವರ್ಸ್‍ಸ್ಸ್ ರಾಜ್ಯ ಬಿಜೆಪಿ, ವಲಸಿಗರು ವರ್ಸ್‍ಸ್ಸ್ ಸಂಘದವರು, ಸಂತೋಷ ಕೂಟ ವರ್ಸ್‍ಸ್ಸ್ ಬಿಎಸ್‍ವೈ ಬಣ, ಮುಖಂಡರು ವರ್ಸ್‍ಸ್ಸ್ ಕಾರ್ಯಕರ್ತರು. ಹೈಕಮಾಂಡ್‍ನಿಂದ ಹಿಡಿದು ಗ್ರಾಮ ಮಟ್ಟದ ಮುಖಂಡರ ವರೆಗೂ ಬಿಜೆಪಿಯೊಳಗೆ ವೈಮಸ್ಸಿನ ಹೊಗೆ ಆವರಿಸಿದೆ’ ಎಂದು ಟೀಕಿಸಿದೆ. 

ಬರ ಪ್ರದೇಶಗಳ ಅಧ್ಯಯನ ವೇಳೆ ಕೈ ಮಿಲಾಯಿಸಿದ ಬಿಜೆಪಿ ನಾಯಕರು

ರಾಮನಗರ ಜಿಲ್ಲೆಯ ತಾಲೂಕಿನ ವಿಭೂತಿಕೆರೆ ಗ್ರಾಮಕ್ಕೆ ಬರ ಪ್ರದೇಶಗಳ ಅಧ್ಯಯನಕ್ಕಾಗಿ ಬಿಜೆಪಿ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರ ತಂಡ ಗುರುವಾರ ಭೇಟಿ ನೀಡಿದ್ದಾಗ, ವಿಧಾನ ಪರಿಷತ್‌ ಸದಸ್ಯ ಅ. ದೇವೇಗೌಡ ಮತ್ತು ಚನ್ನಪಟ್ಟಣ ತಾಲೂಕಿನ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಜಯರಾಮು ನಡುವೆ ಮಾತಿನ ಚಕಮಕಿ ನಡೆದು ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ಘಟನೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News