ಕಲಬುರಗಿ | ಎತ್ತು ಕಳವುಗೈದ ಆರೋಪದಲ್ಲಿ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

Update: 2023-07-18 12:08 GMT

ಕಲಬುರಗಿ: ವ್ಯಕ್ತಿಯೋರ್ವನನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ಕಲಬುರಗಿ ತಾಲೂಕಿನ ಜಂಬಗಾ(ಬಿ.) ಗ್ರಾಮದಲ್ಲಿ ನಡೆದಿದೆ.

ಮಲ್ಲಣ್ಣ ದೇಗಾಂವ ಎಂಬ ರೈತ ಜಮೀನಿನಲ್ಲಿ ಕಟ್ಟಿ ಹಾಕಿದ್ದ ಎತ್ತು ಕಳವಾಗಿತ್ತು. ಈ ನಡುವೆ ಅದೇ ಗ್ರಾಮದ ಮಂಜುನಾಥ ಬೆಳ್ಳಿಕರ ಎಂಬಾತ ಎತ್ತೊಂದನ್ನು ಪಕ್ಕದ ಔರಾದ ಗ್ರಾಮದ ರೈತನಿಗೆ ಮಾರಲು ಕೊಂಡೊಯ್ದಿದ್ದ. ಎತ್ತಿನ ಬಗ್ಗೆ ಗ್ರಾಮಸ್ಥರು ವಿಚಾರಿಸಿದಾಗ ಅದು ಜಂಬಗಾ(ಬಿ) ಗ್ರಾಮದಿಂದ ಕಳವಾಗಿದ್ದು ಎಂಬ ಮಾಹಿತಿ ತಿಳಿದುಬಂತೆನ್ನಲಾಗಿದೆ.

ಈ ನಡುವೆ ಓಡಲೆತ್ನಿಸಿದ ಆರೋಪಿ ಮಂಜುನಾಥ ಬೆಳ್ಳಿಕರನನ್ನು ಸೆರೆಹಿಡಿದ ಜಂಬಗಾ ಬಿ ಗ್ರಾಮಸ್ಥರು ಗ್ರಾಮದ ಬೇವಿನ ಮರಕ್ಕೆ ಕಟ್ಟಿ ಥಳಸಿದ್ದಾರೆ.

ಗ್ರಾಮೀಣ ಪೊಲೀಸರಿಗೆ ದೂರು ನೀಡಿದ ಬಳಿಕ ಜಂಬಗಾ(ಬಿ) ಗ್ರಾಮಕ್ಕೆ ಬಂದ ಪೊಲೀಸರು ಮಂಜುನಾಥ ಬೆಳ್ಳಿಕರನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News