ಕರಂಬಳ್ಳಿಯಲ್ಲಿ ವಿಪ್ರ ಮಹಿಳಾ ದಿನಾಚರಣೆ
ಉಡುಪಿ, ಮಾ.17: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ವತಿಯಿಂದ ವಿಪ್ರ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲ ಕೆಎಂಸಿಯ ಡಾ.ರಾಜೇಶ್ವರಿ ಜಿ.ಭಟ್ ಉಪನ್ಯಾಸ ನೀಡಿದರು. ಬಹುಮುಖ ಪ್ರತಿಭೆಯ ವಿದುಷಿ ಗಾರ್ಗಿ ಎನ್. ಶಬರಾಯ ಅವರಿಗೆ ಸಂಗೀತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರಂಬಳ್ಳಿ ವಲಯದ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮೊದಲು ವಿಪ್ರ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಸುಧಾ ಹರಿದಾಸ್ ಭಟ್ ನಡೆಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರು ಹಾಗೂ ನೂತನ ಸದಸ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯದರ್ಶಿ ನಾಗರಾಜ್ ಭಟ್, ಕೋಶಾಧಿಕಾರಿ ಅಜಿತ್ ಬಿಜಾಪುರ್, ಮಹಿಳಾ ಪ್ರತಿನಿಧಿ ಶ್ಯಾಮಲಾ ರಾವ್ ಉಪಸ್ಥಿತರಿದ್ದರು. ಕವಿತಾ ಲಕ್ಷ್ಮೀ ನಾರಾಯಣ, ವಸುಧಾ ಶ್ರೀಕೃಷ್ಣರಾಜ್, ರಾಧಿಕಾ ಚಂದ್ರಕಾಂತ್, ಜಯಶ್ರೀ ಬಾರಿತ್ತಾಯ ಸಹಕರಿಸಿದರು. ಅಂಕಿತಾ ನಿರೂಪಿಸಿ ಪೂರ್ಣಿಮಾ ಹೆಬ್ಬಾರ್ ವಂದಿಸಿದರು.