ಹಿರಿಯ ವೈದ್ಯ ಡಾ.ಗಣೇಶ್ ಕಾಮತ್ ನಿಧನ

Update: 2025-04-11 17:01 IST
ಹಿರಿಯ ವೈದ್ಯ ಡಾ.ಗಣೇಶ್ ಕಾಮತ್ ನಿಧನ
  • whatsapp icon

ಉಡುಪಿ: ನಗರದ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ(ಮಿಷನ್ ಆಸ್ಪತ್ರೆ)ಯ ಹಿರಿಯ ವೈದ್ಯ, ಕಟಪಾಡಿ ನಿವಾಸಿ ಡಾ. ಗಣೇಶ್ ಕಾಮತ್(71) ಗುರುವಾರ ರಾತ್ರಿ ತೀವ್ರ ಹೃದಯಾ​ಘಾತದಿಂದ ಸ್ವಗೃಹದಲ್ಲಿ ನಿಧನರಾದರು.

ಕಳೆದ ಹತ್ತು ವರ್ಷಗಳಿಂದ ಉಡುಪಿಯ ಮಿಷನ್ ಆಸ್ಪತ್ರೆಯಲ್ಲಿ ಯಾವುದೇ ರಜೆಯನ್ನು ಪಡೆಯದೆ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತ ಬಂದಿದ್ದಾರೆ. ಇವರು ಆಸ್ಪತ್ರೆಯ ಹಿರಿಯ ವೈದ್ಯಕೀಯ ಸಮಾಲೋಚಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತರು ಪತ್ನಿ ಹಾಗೂ ಓರ್ವ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಮಿಷನ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News