ಮೀನುಗಾರರಿಗೆ ಮುಂಜಾಗ್ರತಾ ಕ್ರಮ ಪಾಲಿಸಲು ಸೂಚನೆ

Update: 2023-08-30 15:20 GMT

ಉಡುಪಿ, ಆ.30: ಪ್ರಸಕ್ತ ಸಾಲಿನ ಅಗಸ್ಟ್ ತಿಂಗಳಿನಿಂದ ಮೀನುಗಾರಿಕಾ ಋತು ಪ್ರಾರಂಭವಾಗಿದ್ದು, ಜಿಲ್ಲೆಯ ಮೀನು ಗಾರರು ಹಲವು ವಿಧಾನದ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಅವಧಿಯ ಪ್ರಾರಂಭದಲ್ಲಿ ಅವಘಡಗಳು ಹೆಚ್ಚೆಚ್ಚು ಸಂಭವಿಸುತ್ತಿರುವುದು ವರದಿಯಾಗುತ್ತಿದೆ.

ಆದ್ದರಿಂದ ಮೀನುಗಾರಿಕೆಗೆ ತೆರಳುವಾಗ ಮೀನುಗಾರರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಜೀವ ರಕ್ಷಕ ಸಾಧನಗಳನ್ನು ಕಡ್ಡಾಯ ವಾಗಿ ಧರಿಸಬೇಕು. ಸಮುದ್ರ ಪ್ರಕ್ಷುಬ್ಧವಾಗಿರುವಾಗ ಹಾಗೂ ಹವಾಮಾನ ಇಲಾಖೆ ಹವಾಮಾನ ಮುನ್ಸೂಚನೆ ಹೊರಡಿಸಿದ ದಿನಗಳಲ್ಲಿ ಮೀನುಗಾರಿಕೆಗೆ ತೆರಳಬಾರದು.

ಮೀನುಗಾರಿಕೆಗೆ ಬೋಟಿನಲ್ಲಿ ತೆರಳುವ ಕಲಾಸಿಗಳ ಸಂಖ್ಯೆ ನೋಂದಣಿ ಪ್ರಮಾಣ ಪತ್ರದಲ್ಲಿ ನಮೂದಿಸಿದಷ್ಟೇ ಇರಬೇಕು. ಮೀನುಗಾರಿಕೆಗೆ ತೆರಳುವವರು ಈಜು ಬಲ್ಲವರಾಗಿರಬೇಕು ಹಾಗೂ ಮೀನುಗಾರಿಕೆಗೆ ತೆರಳುವ ಬೋಟನ್ನು ಪ್ರವಾಸೋ ದ್ಯೋಮಕ್ಕಾಗಿ ಉಪಯೋಗಿಸಬಾರದು.

ಮೇಲ್ಕಂಡ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ಇಲಾಖಾ ನಿಬಂಧನೆಗಳನ್ನು ಮೀರಿ ಮೀನುಗಾರಿಕೆಯಲ್ಲಿ ತೊಡಗಿದ್ದಲ್ಲಿ ಬೋಟ್‌ನ ಮಾಲಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾ ಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News